ಹುಬ್ಬಳ್ಳಿ : ಸಾಮಾಜಿಕ ಭದ್ರತಾ ಯೋಜನೆಯಡಿ ಪಿಂಚಣಿ ಪಡೆಯುತ್ತಿರುವ(ನಿರ್ಗತಿಕ, ವಿಧವಾ,ಇಂದಿರಾಗಾಂಧಿ, ವೃದ್ಧಾಪ್ಯ, ಅಂಗವಿಕಲ, ಸಂಧ್ಯಾ ಸುರಕ್ಷಾ ವೇತನ ಪಡೆಯುವವರು)ಪಿಂಚಣಿಗಳಿಗೆ ಆಧಾರ ಕಾರ್ಡ್ ಕಡ್ಡಾಯಗೊಳಿಸಿದ್ದು, ಆಧಾರ ಸಂಖ್ಯೆ ಪೂರೈಸದೇ ಇರುವ ಪಿಂಚಣಿದಾರರು ಜೂ.31ರೊಳಗೆ ಆಧಾರ ಕಾರ್ಡ್ನ ಝೆರಾಕ್ಸ್ ಮತ್ತು ಪಿಂಚಣಿದಾರರ ಆದೇಶ ಪ್ರತಿ ನೀಡಲು ಕೋರಲಾಗಿದೆ.
ಇಲ್ಲಿವರೆಗೆ ಕೆಲವರು ಮಾತ್ರ ಆಧಾರ ಸಂಖ್ಯೆ ಪೂರೈಸಿದ್ದು, ಉಳಿದವರು ಜೂ.31 ರೊಳಗೆ ಜಿಲ್ಲಾ ಖಜಾನೆ ಎಂ.ಓ. ಪ್ರತಿಯನ್ನು ಸಂಬಂಧಿಸಿದ ಗ್ರಾಮಲೆಕ್ಕಾಧಿಕಾರಿಗಳ ಬಳಿ ನೀಡಬೇಕು. ತಪ್ಪಿದಲ್ಲಿ ಪಿಂಚಣಿ ತಡೆಹಿಡಿಯಲಾಗುವುದು ಎಂದು ಅಪರ ತಹಸೀಲ್ದಾರ ಕಚೇರಿ ಪ್ರಕಟಣೆ ತಿಳಿಸಿದೆ.