ಆ್ಯಪ್ನಗರ

ಕೆವಿಜಿ ಬ್ಯಾಂಕ್‌ ಸಿಬ್ಬಂದಿಯಿಂದ 50 ಲಕ್ಷ ರೂ. ದೇಣಿಗೆ

ಧಾರವಾಡ: ಕೊರೊನಾ ವೈರಸ್‌ ನಿಯಂತ್ರಿಸಲು ಪ್ರತ್ಯೇಕ ನಿಧಿ ಸ್ಥಾಪಿಸಲು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳು ನೀಡಿರುವ ಕರೆಗೆ ಸ್ಪಂದಿಸಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿ ವರ್ಗದವರು 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ.

Vijaya Karnataka 21 Apr 2020, 5:00 am
ಧಾರವಾಡ: ಕೊರೊನಾ ವೈರಸ್‌ ನಿಯಂತ್ರಿಸಲು ಪ್ರತ್ಯೇಕ ನಿಧಿ ಸ್ಥಾಪಿಸಲು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿಗಳು ನೀಡಿರುವ ಕರೆಗೆ ಸ್ಪಂದಿಸಿರುವ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್‌ ಸಿಬ್ಬಂದಿ ವರ್ಗದವರು 50 ಲಕ್ಷ ರೂ. ದೇಣಿಗೆ ನೀಡಿದ್ದಾರೆ.
Vijaya Karnataka Web 50 lakh from kvg bank staff donations
ಕೆವಿಜಿ ಬ್ಯಾಂಕ್‌ ಸಿಬ್ಬಂದಿಯಿಂದ 50 ಲಕ್ಷ ರೂ. ದೇಣಿಗೆ


ಬ್ಯಾಂಕ್‌ ಸಿಬ್ಬಂದಿಯಿಂದ ಸಂಗ್ರಹಿಸಿದ ದೇಣಿಗೆ ಚೆಕ್‌ನ್ನು ಸೋಮವಾರ ಬ್ಯಾಂಕ್‌ ಅಧ್ಯಕ್ಷ ಪಿ. ಗೋಪಿ ಕೃಷ್ಣ ಸಾಂಕೇತಿಕವಾಗಿ ಧಾರವಾಡ ಜಿಲ್ಲಾಧಿಕಾರಿ ದೀಪಾ ಎಂ. ಅವರಿಗೆ ಹಸ್ತಾಂತರಿಸಿದರು.

ಈ ವೇಳೆ ಮಾತನಾಡಿದ ಬ್ಯಾಂಕ್‌ ಅಧ್ಯಕ್ಷ ಪಿ ಗೋಪಿಕೃಷ್ಣ, ಇಂತಹ ಸಂಕಟದ ಸಮಯದಲ್ಲಿಬ್ಯಾಂಕ್‌ ಮತ್ತು ಬ್ಯಾಂಕ್‌ ಸಿಬ್ಬಂದಿ ಸದಾ ಸ್ಪಂದಿಸಿದ್ದಾರೆ. ಸಮರ್ಪಣಾ ಮನೋಭಾವದ 3500ಕ್ಕೂ ಹೆಚ್ಚಿನ ಸಿಬ್ಬಂದಿ ಬ್ಯಾಂಕಿನ ಪ್ರಗತಿಯ ಹಿಂದಿದ್ದು ಬ್ಯಾಂಕ್‌ ಸದಾ ಜನತೆಯೊಂದಿಗೆ ಸಾಗಲಿದೆ ಎಂದರು.

ಕೊರೊನಾ ವೈರಸ್‌ ಒಂದೆಡೆ ಜನತೆಯ ಜೀವದೊಂದಿಗೆ ಚೆಲ್ಲಾಟ ನಡೆಸುತ್ತಿದ್ದರೆ ಇನ್ನೊಂದಡೆ ದೇಶದ ಆರ್ಥಿಕತೆಗೂ ಹೊಡೆತ ನೀಡಿದೆ. ಈ ಸಂದರ್ಭದಲ್ಲಿಸರಕಾರದ ಆದೇಶಗಳನ್ನು ಚಾಚು ತಪ್ಪದೆ ಪಾಲಿಸಿಕೊಂಡು ನಿರಾತಂಕ ಬ್ಯಾಂಕ್‌ ವ್ಯವಹಾರಕ್ಕೆ ಅನುವು ಮಾಡಿಕೊಡಲಾಗಿದೆ. ಶಾಖೆ ಮತ್ತು ಎಟಿಎಂಗಳಲ್ಲಿಗ್ರಾಹಕರಿಗೆ ಸ್ನಾನಿಟೈಸರ್‌ ವ್ಯವಸ್ಥೆ ಮಾಡಲಾಗಿದೆ. ಸರಕಾರದಿಂದ ಬರುವ ಹಣಕ್ಕೆ ಜನ ಒಮ್ಮೆಗೇ ಮುಗಿ ಬೀಳವುದರಿಂದ ಕೊರೋನಾ ವೈರಸ್‌ ಹರಡುವ ಭೀತಿಯಿದ್ದು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಬಗ್ಗೆ ತಿಳುವಳಿಕೆ ನೀಡಲಾಗುತ್ತಿದೆ. ಒಮ್ಮೆ ಜಮೆ ಆದ ಹಣ ಮತ್ತೆ ಮರಳಿ ಹೋಗುವುದಿಲ್ಲ. ಹಾಗಾಗಿ ಅವಶ್ಯವಿದ್ದರಷ್ಟೇ ಹಣ ಹಿಂಪಡೆಯಲು ಶಾಖೆಗೆ ಬರುವಂತೆ ಅವರು ವಿನಂತಿಸಿದರು.

ಸಂಗ್ರಹಗೊಂಡ ಹಣದಲ್ಲಿ ಧಾರವಾಡಕ್ಕೂ ಪಾಲು:
ಸಂಗ್ರಹಗೊಂಡ 50 ಲಕ್ಷ ರೂ. ಗಳಲ್ಲಿ 22.50 ಲಕ್ಷ ರೂ. ಪ್ರಧಾನಮಂತ್ರಿ ಕೇರ್‌ ಫಂಡ್‌, 20 ಲಕ್ಷ ರೂ. ಮುಖ್ಯಮಂತ್ರಿ ಪರಿಹಾರ ನಿಧಿ ಮತ್ತು 7.50 ಲಕ್ಷ ರೂ. ಕೊರೊನಾ ವೈರಸ್‌ ಪೀಡಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಧಾರವಾಡ ಸಿವಿಲ್‌ ಆಸ್ಪತ್ರೆಯಲ್ಲಿರೋಟರಿ ಕ್ಲಬ್‌ ನೇತೃತ್ವದಲ್ಲಿಕಟ್ಟಲುದ್ದೇಶಿಸಿರುವ ಸುಸಜ್ಜಿತ ಚಿಕಿತ್ಸಾ ಕೊಠಡಿಗೆ ನೀಡಲಾಗುವುದು ಎಂದು ಗೋಪಿ ಕೃಷ್ಣ ಹೇಳಿದರು.

ಚೆಕ್‌ ಸ್ವೀಕರಿಸಿ ಮಾತನಾಡಿದ ಜಿಲ್ಲಾಧಿಕಾರಿ ದೀಪಾ ಎಂ., ಬ್ಯಾಂಕ್‌ನ ಸಮಾಜ ಮುಖಿ ಕಾರ್ಯವನ್ನು ಶ್ಲಾಘಿಘಿಸಿದರು. ಜಿಪಂ ಸಿಇಒ ಡಾ. ಬಿ.ಸಿ. ಸತೀಶ, ಬ್ಯಾಂಕಿನ ಮಹಾಪ್ರಬಂಧಕ ಪಿ. ನಾಗೇಶ್ವರ ರಾವ್‌, ಸಹಾಯಕ ಮಹಾಪ್ರಬಂಧಕ ಶ್ರೀಕಾಂತ ಹೆಗಡೆ, ಮುಖ್ಯ ಪ್ರಬಂಧಕ ತಿರುಮಲೇಶ್ವರ ಭಟ್‌, ಹಿರಿಯ ಪ್ರಬಂಧಕ ಉಲ್ಲಾಸ ಗುನಗಾ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ