ಆ್ಯಪ್ನಗರ

ಇಂದು ಜಿಲ್ಲಾಮಟ್ಟದ 8ನೇ ಚುಟುಕು ಸಾಹಿತ್ಯ ಸಮ್ಮೇಳನ

ಹುಬ್ಬಳ್ಳಿ: ಕರ್ನಾಟಕ ಚುಟುಕು ಪರಿಷತ್‌ನ ಅಖಂಡ ಧಾರವಾಡ ಜಿಲ್ಲೆಯ ಎಂಟನೇ ಚುಟುಕು ಸಾಹಿತ್ಯ ಸಮ್ಮೇಳನ ಡಿ. 21ರಂದು ಬೆಳಗ್ಗೆ 10.30ಕ್ಕೆ ನಗರದ ಮೂರುಸಾವಿರಮಠದ ಡಾ.ಮೂಜಗಂ ಸಭಾಂಗಣದಲ್ಲಿಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.

Vijaya Karnataka 21 Dec 2019, 5:00 am
ಹುಬ್ಬಳ್ಳಿ: ಕರ್ನಾಟಕ ಚುಟುಕು ಪರಿಷತ್‌ನ ಅಖಂಡ ಧಾರವಾಡ ಜಿಲ್ಲೆಯ ಎಂಟನೇ ಚುಟುಕು ಸಾಹಿತ್ಯ ಸಮ್ಮೇಳನ ಡಿ. 21ರಂದು ಬೆಳಗ್ಗೆ 10.30ಕ್ಕೆ ನಗರದ ಮೂರುಸಾವಿರಮಠದ ಡಾ.ಮೂಜಗಂ ಸಭಾಂಗಣದಲ್ಲಿಹಮ್ಮಿಕೊಳ್ಳಲಾಗಿದೆ ಎಂದು ಸಂಚಾಲಕ ಕೃಷ್ಣಮೂರ್ತಿ ಕುಲಕರ್ಣಿ ಹೇಳಿದರು.
Vijaya Karnataka Web 8th chutuku literary conference in jillamatta today
ಇಂದು ಜಿಲ್ಲಾಮಟ್ಟದ 8ನೇ ಚುಟುಕು ಸಾಹಿತ್ಯ ಸಮ್ಮೇಳನ


ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಮೂರುಸಾವಿರಮಠದ ಶ್ರೀ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಚನ್ನಬಸಪ್ಪ ಧಾರವಾಡಶೆಟ್ರ ಸರ್ವಾಧ್ಯಕ್ಷೆತೆ ವಹಿಸಲಿದ್ದಾರೆ. ಸಿಎಂ ಕಾನೂನು ಸಲಹೆಗಾರ ಮೋಹನ ಲಿಂಬಿಕಾಯಿ ಸಮ್ಮೇಳನ ಉದ್ಘಾಟಿಸುವರು. ಕೆಎಲ್‌ಇ ಶಿಕ್ಷಣ ಸಂಸ್ಥೆಗಳ ನಿರ್ದೇಶಕ ಶಂಕರಣ್ಣ ಮುನವಳ್ಳಿ, ಕನಕದಾಸ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ರವಿ ದಂಡೀನ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದರು.

ಸಾಹಿತಿ ವೀರನಗೌಡ ಮರಿಗೌಡ ಅಭಿನಂದನಾ ನುಡಿ ಸಲ್ಲಿಸಲಿದ್ದಾರೆ. ಇದೇ ವೇಳೆ ಹಿರಿಯ ಕವಿ ಶ್ರೀಪಾದ್‌ ಬೋಗಾರ್‌ ಚುಟುಕು ಮಿಂಚು ಕವನ ಸಂಕಲನ ಬಿಡುಗಡೆಯಾಗಲಿದೆ. ಮಧ್ಯಾಹ್ನ 12.30ಕ್ಕೆ ರೋಹಿಣಿ ಎಸ್‌. ರಾವ್‌ ಅಧ್ಯಕ್ಷತೆಯಲ್ಲಿವಿಚಾರಗೋಷ್ಠಿ ನಡೆಯಲಿದ್ದು, ಸಂಧ್ಯಾ ದೀಕ್ಷಿತ್‌ ದಿಕ್ಸೂಚಿ ಭಾಷಣ ಮಾಡಲಿದ್ದಾರೆ. ಶಾಲಿನಿ ರುದ್ರಮುನಿ, ರೂಪಾ ಜೋಶಿ, ಸುಧಾ ಕಬ್ಬೂರ ಪ್ರಬಂಧ ಮಂಡಿಸಲಿದ್ದಾರೆ. ಪದ್ಮಜಾ ಉಮರ್ಜಿ ನಿರೂಪಿಸಲಿದ್ದಾರೆ ಎಂದರು.

ಮಧ್ಯಾಹ್ನ 2.30ಕ್ಕೆ ಕವಿಗೋಷ್ಠಿ ಜರುಗಲಿದ್ದು, ಡಾ.ಎಂ.ಎಸ್‌. ಹುಲ್ಲೋಳಿ ಅಧ್ಯಕ್ಷತೆ ವಹಿಸುವರು. ಶಿವಮೂರ್ತಿ ದೇವನೂರ ಆಶಯನುಡಿ ನುಡಿಯಲಿದ್ದಾರೆ. ಜಿಲ್ಲೆಯ ಹಿರಿಯ ಹಾಗೂ ಕಿರಿಯ ಕವಿಗಳಿಂದ ಚುಟುಕು ಹಾಗೂ ಕವನ ವಾಚನ ನಡೆಯಲಿದೆ. ನಂತರ ಸಮಾರೋಪದಲ್ಲಿಸರ್ವಾಧ್ಯಕ್ಷ ಚನ್ನಬಸಪ್ಪ ಧಾರವಾಡಶೆಟ್ಟರ ನಿರ್ಣಯ ಮಂಡಿಸಲಿದ್ದಾರೆ ಎಂದರು. ಚನ್ನಬಸಪ್ಪ ಧಾರವಾಡಶೆಟ್ಟರ್‌, ಪದ್ಮಜಾ ಉಮರ್ಜಿ, ಎಸ್‌.ಐ. ನೇಕಾರ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ