ಆ್ಯಪ್ನಗರ

ಲಿಫ್ಟ್‌ ಕಟ್‌ ಆಗಿ 9 ಜನರಿಗೆ ಗಾಯ

ಧಾರವಾಡ: ಇಲ್ಲಿನ ಖಾಸಗಿ ಹೋಟೆಲ್‌ವೊಂದರಲ್ಲಿಲಿಫ್ಟ್‌ ಕಟ್‌ ಆಗಿ ಕೆಳಗೆ ಬಿದ್ದ ಪರಿಣಾಮ ಒಂಬತ್ತು ಜನರು ಗಾಯಗೊಂಡ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ.

Vijaya Karnataka 10 Mar 2020, 5:00 am
ಧಾರವಾಡ: ಇಲ್ಲಿನ ಖಾಸಗಿ ಹೋಟೆಲ್‌ವೊಂದರಲ್ಲಿಲಿಫ್ಟ್‌ ಕಟ್‌ ಆಗಿ ಕೆಳಗೆ ಬಿದ್ದ ಪರಿಣಾಮ ಒಂಬತ್ತು ಜನರು ಗಾಯಗೊಂಡ ಘಟನೆ ಭಾನುವಾರ ತಡರಾತ್ರಿ ಸಂಭವಿಸಿದೆ.
Vijaya Karnataka Web 9 people injured as lift cuts
ಲಿಫ್ಟ್‌ ಕಟ್‌ ಆಗಿ 9 ಜನರಿಗೆ ಗಾಯ


ನಗರದ ಕೃಷಿ ವಿಶ್ವವಿದ್ಯಾಲಯದ ಎದುರಿನ ದ್ವಾರವಾಟಾ ಹೋಟೆಲ್‌ನಲ್ಲಿಈ ದುರಂತ ಸಂಭವಿಸಿದೆ. ವಿವಿಧ ಖಾಸಗಿ ಕಂಪನಿಯ ಉದ್ಯೋಗಿಗಳಾದ ಆನಂದ ಪವಾರ್‌ (32), ಅನಿಲ್‌ ರಾಮಸಿಂಗ್‌ (34), ಕೆಂಪಯ್ಯ ಪುರಾಣಿಕ್‌ (34), ಆಂಟೋನಿ (44), ಬಸೀರ್‌ ಅಹ್ಮದ್‌ (22) ಸೇರಿದಂತೆ 9 ಜನ ಗಾಯಗೊಂಡಿದ್ದಾರೆ.

ಲಿಫ್ಟ್‌ನಲ್ಲಿಒಟ್ಟು 13 ಜನ ಇದ್ದರು. ನಿಗದಿತ ಭಾರಕ್ಕಿಂತ ಹೆಚ್ಚಿನ ಜನರು ಲಿಫ್ಟ್‌ನಲ್ಲಿಹತ್ತಿದ ಕಾರಣಕ್ಕೆ, ಲಿಫ್ಟ್‌ ಕಟ್‌ ಆಗಿ ಈ ದುರಂತ ಸಂಭವಿಸಿದೆ ಎಂದು ಹೇಳಲಾಗುತ್ತಿದೆ. ಗಾಯಗೊಂಡ 5 ಜನರನ್ನು ಜಿಲ್ಲಾಆಸ್ಪತ್ರೆಗೆ ಹಾಗೂ ಗಂಭೀರವಾಗಿ ಗಾಯಗೊಂಡ ನಾಲ್ವರನ್ನು ಎಡಿಎಂ ಆಸ್ಪತ್ರಗೆ ದಾಖಲಿಸಲಾಗಿದೆ ಎಂದು ಉಪನಗರ ಠಾಣೆ ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ