ಆ್ಯಪ್ನಗರ

ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿ ರೌಡಿಶೀಟರ್‌ನ ಕೊಂದಿದ್ದ ಆರೋಪಿ ಆರೋಪಿ ಬಂಧನ

ಸೈಟ್‌ ಕೊಡಿಸುವುದಾಗಿ ಹೇಳಿ ಇಜಾಜ್‌ ಅಹ್ಮದ್‌ನಿಂದ 7 ಲಕ್ಷ ರೂ. ಪಡೆದಿದ್ದ ರಮೇಶ ಭಾಂಡಗೆ ನಿವೇಶನ ಕೊಡಿಸದೇ, ಹಣವನ್ನೂ ವಾಪಸ್‌ ಮಾಡದೇ ಸತಾಯಿಸುತ್ತಿದ್ದ. ಈ ವಿಷಯವಾಗಿ ಇಬ್ಬರ ನಡುವೆ ಆಗಾಗ ಜಗಳ ಸಹ ನಡೆಯುತ್ತಿತ್ತು. ಬುಧವಾರ ಸಹ ಇಜಾಜ್‌ ಅಹ್ಮದ್‌ ರಮೇಶನನ್ನು ಭೇಟಿ ಮಾಡಿದಾಗ ಆಕ್ರೋಶಗೊಂಡ ಇಜಾಜ್‌ ಚಾಕುವಿನಿಂದ ರಮೇಶನ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದನು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

Vijaya Karnataka Web 27 Nov 2020, 10:51 am
ಹುಬ್ಬಳ್ಳಿ: ಚಾಕು ಇರಿದು ಮಾಜಿ ರೌಡಿಶೀಟರ್‌ನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಘಟನೆ ನಡೆದ ಒಂದು ದಿನದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Vijaya Karnataka Web police arrest


ಬಂಧಿತ ಆರೋಪಿಯನ್ನು ಸಾರಿಗೆ ಸಂಸ್ಥೆಯ ಚಾಲಕ ಇಜಾಜ್‌ ಅಹ್ಮದ್‌ ಎಂದು ಗುರುತಿಸಲಾಗಿದೆ. ಬುಧವಾರ ಮಧ್ಯಾಹ್ನ ನಗರದ ಬಾಬಾಸಾನ ಗಲ್ಲಿಯಲ್ಲಿ ರಮೇಶ ಭಾಂಡಗೆನನ್ನು ಚಾಕುವಿನಿಂದ ಇರಿದು ಕೊಲೆ ಮಾಡಲಾಗಿತ್ತು. ಈ ಘಟನೆ ಸಿಸಿ ಕ್ಯಾಮರಾದಲ್ಲಿ ದಾಖಲಾಗಿತ್ತು. ಆ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

6 ಜನ ಬೆಂಗಳೂರು ಪೊಲೀಸ್ ಸಿಬ್ಬಂದಿ ಮೇಲೆ ಇರಾನಿ ಗ್ಯಾಂಗ್‌ ಹಲ್ಲೆ; ಧಾರವಾಡದಲ್ಲಿ ನಡೀತು ಭಯಾನಕ ಕೃತ್ಯ..!

ಸೈಟ್‌ ಕೊಡಿಸುವುದಾಗಿ ಹೇಳಿ ಇಜಾಜ್‌ ಅಹ್ಮದ್‌ನಿಂದ 7 ಲಕ್ಷ ರೂ. ಪಡೆದಿದ್ದ ರಮೇಶ ಭಾಂಡಗೆ ನಿವೇಶನ ಕೊಡಿಸದೇ, ಹಣವನ್ನೂ ವಾಪಸ್‌ ಮಾಡದೇ ಸತಾಯಿಸುತ್ತಿದ್ದ. ಈ ವಿಷಯವಾಗಿ ಇಬ್ಬರ ನಡುವೆ ಆಗಾಗ ಜಗಳ ಸಹ ನಡೆಯುತ್ತಿತ್ತು. ಬುಧವಾರ ಸಹ ಇಜಾಜ್‌ ಅಹ್ಮದ್‌ ರಮೇಶನನ್ನು ಭೇಟಿ ಮಾಡಿ ತಾನು ಕೊಟ್ಟಿರುವ ಹಣ ಕೊಡು ಇಲ್ಲವೇ ಸೈಟ್‌ನ್ನಾದರೂ ಕೊಡಿಸು ಎಂದು ಕೇಳಿದ್ದಾನೆ.

ಕನ್ನಡಪರ ಕಾರ್ಯಕರ್ತರು ರೋಲ್‌ಕಾಲ್‌ ಹೋರಾಟಗಾರರು ಎಂಬ ಹೇಳಿಕೆಗೆ ನಾನು ಬದ್ಧ; ಶಾಸಕ ಬೆಲ್ಲದ್

ಆಗಲೂ ವ್ಯವಹಾರ ಬಗೆಹರಿಯದ ಕಾರಣ ಮತ್ತೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ಆಗ ಆಕ್ರೋಶಗೊಂಡ ಇಜಾಜ್‌ ಚಾಕುವಿನಿಂದ ರಮೇಶನ ಹೊಟ್ಟೆಗೆ ಇರಿದು ಕೊಲೆ ಮಾಡಿದ್ದನು. ಶಹರ ಠಾಣೆಯಲ್ಲಿ ಪ್ರಕರಣ ದಾಖಲಾಗಿ ತನಿಖೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ