ಆ್ಯಪ್ನಗರ

ರಸ್ತೆ ಮಧ್ಯೆಯೇ ದೊಡ್ಡ ಗುಂಡಿ

​ಹುಬ್ಬಳ್ಳಿ: ರಸ್ತೆಯಲ್ಲಿಯೇ ದೊಡ್ಡ ಗುಂಡಿ ತೆಗೆಯಲಾಗಿದೆ. ಇದರಿಂದಾಗಿಯೇ ಟ್ರಾಫಿಕ್‌ ಸಮಸ್ಯೆಯಷ್ಟೇಯಲ್ಲ, ಅನೇಕರು ಅದೇ ಗುಂಡಿಯಲ್ಲಿಬಿದ್ಡು ಪೆಟ್ಟು ತಿಂದಿದ್ದಾರೆ. ಇನ್ನು ಕೆಲವರಂತೂ ಆಸ್ಪತ್ರೆಯಲ್ಲಿಆರೈಕೆ ಆಗುತ್ತಿದ್ದಾರೆ. ಹೀಗಿದ್ದರೂ ಈ ಗುಂಡಿ ಮುಚ್ಚುವ ಕೆಲಸ ಮಾತ್ರ ಈವರೆಗೆ ಆಗಿಲ್ಲ.

Vijaya Karnataka 2 Jul 2020, 5:00 am
ಕಲ್ಮೇಶ ಪಟ್ಟಣದವರ,
Vijaya Karnataka Web a large pothole in the middle of the road
ರಸ್ತೆ ಮಧ್ಯೆಯೇ ದೊಡ್ಡ ಗುಂಡಿ

ಹುಬ್ಬಳ್ಳಿ: ರಸ್ತೆಯಲ್ಲಿಯೇ ದೊಡ್ಡ ಗುಂಡಿ ತೆಗೆಯಲಾಗಿದೆ. ಇದರಿಂದಾಗಿಯೇ ಟ್ರಾಫಿಕ್‌ ಸಮಸ್ಯೆಯಷ್ಟೇಯಲ್ಲ, ಅನೇಕರು ಅದೇ ಗುಂಡಿಯಲ್ಲಿಬಿದ್ಡು ಪೆಟ್ಟು ತಿಂದಿದ್ದಾರೆ. ಇನ್ನು ಕೆಲವರಂತೂ ಆಸ್ಪತ್ರೆಯಲ್ಲಿಆರೈಕೆ ಆಗುತ್ತಿದ್ದಾರೆ. ಹೀಗಿದ್ದರೂ ಈ ಗುಂಡಿ ಮುಚ್ಚುವ ಕೆಲಸ ಮಾತ್ರ ಈವರೆಗೆ ಆಗಿಲ್ಲ.

ಇಲ್ಲಿಯ ಕಾರವಾರ ರಸ್ತೆಯ ಶ್ರೀನಗರ ಮುಖ್ಯ ರಸ್ತೆಯಲ್ಲಿರುವ ಆಟೊ ಸ್ಟ್ಯಾಂಡ್‌ ಬಳಿ ಅನಾಥ ಸ್ಥಿತಿಯಂತಿರುವ ರಸ್ತೆ ಮಧ್ಯದ ದೊಡ್ಡ ಗುಂಡಿಯ ಕಥೆ ಇದು. ಕಳೆದ ಆರೇಳು ತಿಂಗಳ ಹಿಂದೆ ಕೇಬಲ್‌ ರಿಪೇರಿ ಕೆಲಸ ನಿಮಿತ್ತ ಈ ಗುಂಡಿ ತೆರೆಯಲಾಗಿತ್ತು. ರಿಪೇರಿ ಕಾರ್ಯ ಮುಗಿದಾದ ಬಳಿಕ ಕೇಬಲ್‌ ರಿಪೇರಿ ಮಾಡಿದವರೂ ಇಲ್ಲ. ಗುಂಡಿಯನ್ನೂ ಮುಚ್ಚಿಲ್ಲ.

ಇದರ ಪರಿಣಾಮದಿಂದ ಇತ್ತೀಚೆಗಷ್ಟೇ ಡಾಂಬರೀಕರಣ ಮಾಡಿದ್ದ ರಸ್ತೆಯೂ ಸಂಪೂರ್ಣ ಹಾಳಾಗಿ ಹೋಗುತ್ತಿದೆ. ಅಲ್ಲದೇ, ರಸ್ತೆಯೂ ಕುಸಿಯುತ್ತಿದೆ. ಇದೀಗ ಮಳೆಗಾಲವಾಗಿದ್ದರಿಂದ ಮಳೆ ನೀರು ತುಂಬಿ ಹರಿಯುತ್ತಿದ್ದರೆ, ಅಲ್ಲಿರುವ ಗುಂಡಿ ಇರುವುದು ಗೊತ್ತಾಗದಂತಾಗುತ್ತದೆ. ಹೀಗಾಗಿ ಮೊನ್ನೆಯಷ್ಟೇ ಸುರಿದ ಮಳೆ ಸಂದರ್ಭದಲ್ಲಿವಯೋವೃದ್ಧರೊಬ್ಬರು ಬಿದ್ದು ಪೆಟ್ಟು ತಿಂದಿದ್ದಾರೆ. ಇದೀಗ ಅವರ ಸ್ಥಿತಿ ಸಹ ಗಂಭೀರವಾಗಿದೆ.

ಈಗಾಗಲೇ ರಸ್ತೆಯ ಮಧ್ಯೆಯಿರುವ ಗುಂಡಿಯನ್ನು ಮುಚ್ಚುವಂತೆ ಸ್ಥಳೀಯರು ಸಾಕಷ್ಟು ಬಾರಿ ಮನವಿ ಮಾಡಿದ್ದಾರೆ. ಹೀಗಿದ್ದಾಗ್ಯೂ ಪಾಲಿಕೆ ಅಧಿಕಾರಿಗಳು ಮಾತ್ರ ಕ್ಯಾರೆ ಎನ್ನುತ್ತಿಲ್ಲ. ಅಲ್ಲದೇ, ಅಧಿಕಾರಿಗಳನ್ನು ಈ ಬಗ್ಗೆ ಕೇಳಿದರೆ, ''ಅದನ್ನು ಕೇಬಲ್‌ ರಿಪೇರಿ ಮಾಡುವವರು ತೆಗೆದಿದ್ದಾರೆ. ಅದು ಅವರ ಜವಾಬ್ದಾರಿ'' ಎಂದು ಜಾರಿಕೊಳ್ಳುತ್ತಿದ್ದಾರೆ. ಹೀಗಾಗಿ ಗುಂಡಿ ಕಳೆದ ಆರು ತಿಂಗಳಿಂದ ಬಾಯ್ತೆರದು ಹಾಗೇ ಕುಳಿತಿದೆ.

ಸೂಚನಾ ಫಲಕವೂ ಇಲ್ಲ

ದೊಡ್ಡ ಪ್ರಮಾಣದ ಗುಂಡಿ ತೋಡಿದ ನಂತರ ಅಲ್ಲಿರುವ ಗುಂಡಿ ಬಗ್ಗೆ ಮಾಹಿತಿ ನೀಡುವ ಸೂಚನಾ ಫಲಕವನ್ನು ಸಹ ಅಧಿಕಾರಿಗಳು ಹಾಕುವ ಕೆಲಸ ಮಾಡಿಲ್ಲ. ಇದರಿಂದ ಇಲ್ಲಿಗೆ ಅಪರಿಚಿತರು ವಾಹನ ತೆಗೆದುಕೊಂಡು ಹೋದರೆ, ಬಿದ್ದು ಬರುವುದಂತೂ ಗ್ಯಾರಂಟಿ. 2019 ಡಿಸೆಂಬರ್‌ ತಿಂಗಳೊಳಗಾಗಿ ಹು-ಧಾ ಮಹಾನಗರದಲ್ಲಿನ ತಗ್ಗು-ಗುಂಡಿಗಳನ್ನು ಸಂಪೂರ್ಣವಾಗಿ ಮುಚ್ಚಿ ಧೂಳು ಮುಕ್ತ ಮಾಡುವ ಬಗ್ಗೆ ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ ವಾಗ್ದಾನ ಮಾಡಿದ್ದರು. ಈ ವಾಗ್ದಾನವೂ ಈವರೆಗೆ ಈಡೇರಿಲ್ಲ.

ಟ್ರಾಫಿಕ್‌ ಕಿರಿಕಿರಿ
ಪಕ್ಕದಲ್ಲಿಯೇ ಆಟೊ ಸ್ಟ್ಯಾಂಡ್‌ ಇರುವುದರಿಂದ ರಸ್ತೆಯೂ ಇಕ್ಕಟ್ಟಾಗಿದೆ. ಸಾಲು ಸಾಲು ವಾಹನಗಳು ಇಲ್ಲಿಓಡಾಡುತ್ತವೆ. ಹೀಗಾಗಿ ಆಗಾಗ ಟ್ರಾಫಿಕ್‌ ಕಿರಿಕಿರಿಯೂ ಉಂಟಾಗುತ್ತಿದೆ. ಆದ್ದರಿಂದ ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ರಸ್ತೆ ಗುಂಡಿ ಮುಚ್ಚುವ ಕಾರ್ಯ ಮಾಡಬೇಕೆಂಬುದು ಸ್ಥಳೀಯರ ಆಗ್ರಹವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ