ಆ್ಯಪ್ನಗರ

ಪ್ರೇಯಸಿ‌ ಮನೆಯವರು ಮದುವೆಗೆ ಒಪ್ಪದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ಪ್ರೇಮಿ ;ಕೊನೇ ಕ್ಷಣದಲ್ಲಿ ಪಾರು..!

ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ ಮಲೀಕ್ ಎಂಬಾತ, ಅವರ ಮನೆಯವರ ಒಪ್ಪಿಗೆ ಪಡೆದು ಅವಳನ್ನೇ ಮದುವೆಯಾಗಬೇಕೆಂದು ನಿರ್ಧಾರ ಮಾಡಿದ್ದ. ಆದರೆ ಮದುವೆಗಾಗಿ ಕಾದು ಕುಳಿತಿದ್ದ ಮಲೀಕ್‌ಗೆ ಪ್ರೇಯಸಿಯ ಮನೆಯವರು ಹೆಣ್ಣು ಕೊಡಲ್ಲ ಎಂದಿದ್ದಾರೆ. ಇದರಿಂದ ಆತ ನೇಣಿಗೆ ಶರಣಾಗಲು ಯತ್ನಿಸಿದ್ದಾನೆ.

Vijaya Karnataka Web 19 Nov 2020, 10:37 am
ಹುಬ್ಬಳ್ಳಿ: ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗಬೇಕೆಂದುಕೊಂಡಿದ್ದ ಯುವಕನಿಗೆ ಯುವತಿಯ ಮನೆಯವರು ಹೆಣ್ಣು ಕೊಡಲ್ಲ ಎಂದಿದ್ದಕ್ಕೆ ಮನನೊಂದ ಪ್ರೇಮಿಯೊಬ್ಬ, ನೇಣಿಗೆ ಶರಣಾಗಿ ಕೊನೇಕ್ಷಣದಲ್ಲಿ ಬಚಾವ್‌ ಆದ ಘಟನೆ ಹಳೇಹುಬ್ಬಳ್ಳಿಯಲ್ಲಿ ಬುಧವಾರ ನಡೆದಿದೆ.
Vijaya Karnataka Web suicide- hang.
Representative image


ನನ್ನನ್ನು ಸಂಪುಟದಿಂದ ಕೈ ಬಿಟ್ಟರೂ ಸಿಎಂ ನಿರ್ಧಾರಕ್ಕೆ ನಾನು ಬದ್ಧಳಾಗಿರುತ್ತೇನೆ; ಶಶಿಕಲಾ ಜೊಲ್ಲೆ

ಮಲೀಕ್ ಎಂಬಾತ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಅವರ ಮನೆಯವರ ಒಪ್ಪಿಗೆ ಪಡೆದು ಅವಳನ್ನೇ ಮದುವೆಯಾಗಬೇಕೆಂದು ನಿರ್ಧಾರ ಮಾಡಿದ್ದ. ಆದರೆ ಮದುವೆಗಾಗಿ ಕಾದು ಕುಳಿತಿದ್ದ ಮಲೀಕ್‌ಗೆ ಪ್ರೇಯಸಿಯ ಮನೆಯವರು ಹೆಣ್ಣು ಕೊಡಲ್ಲ ಎಂದಿದ್ದಾರೆ. ಇದರಿಂದ ಆತ ನೇಣಿಗೆ ಶರಣಾಗಲು ಯತ್ನಿಸಿದ್ದಾನೆ.

ವಿಶೇಷಚೇತನ ಮಕ್ಕಳೊಂದಿಗೆ ಜನ್ಮದಿನ ಆಚರಣೆ; ಭಾವುಕರಾದ ಸಚಿವೆ ಶಶಿಕಲಾ ಜೊಲ್ಲೆ..!

ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಗೆಳೆಯರಿಗೆ ವಾಟ್ಸ್‌ಆ್ಯಪ್‌ ಮಾಡಿ ನಾನು ಸಾಯುತ್ತೇನೆ ಎಂದು ಸಂದೇಶ ಕಳಿಸಿದ್ದ. ಇದನ್ನು ಗಮನಿಸಿದ ಆತನ ಗೆಳೆಯರು ತಕ್ಷಣವೇ ಓಡಿ ಬಂದು ನೋಡಿದಾಗ, ಮಲೀಕ್‌ ನೇಣು ಬಿಗಿದುಕೊಂಡು ಉಸಿರಾಟದ ತೊಂದರೆಯಿಂದ ನರಳುತ್ತಿದ್ದನು. ತಕ್ಷಣವೇ ಆತನನ್ನು ಗೆಳೆಯರು ಕಿಮ್ಸ್‌ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪ್ರತ್ಯಕ್ಷ ದರ್ಶಿಗಳು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ