ಆ್ಯಪ್ನಗರ

ಎಚ್ಕೆ ವಿರುದ್ಧದ ಎಲೆಕ್ಷನ್‌ ಪಿಟಿಶನ್‌ ಅರ್ಜಿ ವಜಾ

ಧಾರವಾಡ :ಮಾಜಿ ಸಚಿವ ಎಚ್‌.ಕೆ. ಪಾಟೀಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಎಸಗಿದ್ದು, ಅವರ ಆಯ್ಕೆ ರದ್ದುಗೊಳಿಸುವಂತೆ ಬಿಜೆಪಿ ಪರಾಜಿತ ಅಭ್ಯರ್ಥಿ ಸಲ್ಲಿಸಿದ್ದ ಎಲೆಕ್ಷನ್‌ ಪಿಟಿಶನ್‌ ಅರ್ಜಿಯನ್ನು ಧಾರವಾಡ ಹೈಕೋರ್ಟ್‌ ಪೀಠ ಶುಕ್ರವಾರ ವಜಾಗೊಳಿಸಿದೆ.

Vijaya Karnataka 1 Sep 2018, 5:00 am
ಧಾರವಾಡ :ಮಾಜಿ ಸಚಿವ ಎಚ್‌.ಕೆ. ಪಾಟೀಲ ಕಳೆದ ವಿಧಾನಸಭೆ ಚುನಾವಣೆಯಲ್ಲಿ ಅಕ್ರಮ ಎಸಗಿದ್ದು, ಅವರ ಆಯ್ಕೆ ರದ್ದುಗೊಳಿಸುವಂತೆ ಬಿಜೆಪಿ ಪರಾಜಿತ ಅಭ್ಯರ್ಥಿ ಸಲ್ಲಿಸಿದ್ದ ಎಲೆಕ್ಷನ್‌ ಪಿಟಿಶನ್‌ ಅರ್ಜಿಯನ್ನು ಧಾರವಾಡ ಹೈಕೋರ್ಟ್‌ ಪೀಠ ಶುಕ್ರವಾರ ವಜಾಗೊಳಿಸಿದೆ.
Vijaya Karnataka Web a petition against the hc has been dismissed
ಎಚ್ಕೆ ವಿರುದ್ಧದ ಎಲೆಕ್ಷನ್‌ ಪಿಟಿಶನ್‌ ಅರ್ಜಿ ವಜಾ


ಕಳೆದ ಮೇನಲ್ಲಿ ನಡೆದ ಚುನಾವಣೆ ವೇಳೆ ಬೋಗಸ್‌ ಮತಗಳನ್ನು ಹಾಕಿಸಿ ಪಾಟೀಲ್‌ ಗೆದ್ದಿದ್ದಾರೆ. ನಕಲಿ ಮತಚೀಟಿಗಳನ್ನೂ ಮಾಡಲಾಗಿದೆ ಎಂದು ಎಚ್‌.ಕೆ. ಪಾಟೀಲ್‌ ವಿರುದ್ಧ ಕಡಿಮೆ ಅಂತರದಲ್ಲಿ ಸೋಲು ಅನುಭವಿಸಿದ್ದ ಬಿಜೆಪಿಯ ಅನಿಲ ಮೆಣಸಿನಕಾಯಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಜಿ. ನರೇಂದ್ರ ಅವರಿದ್ಧ ಏಕಸದಸ್ಯ ಪೀಠ, ಈ ಅರ್ಜಿ ಸಲ್ಲಿಕೆಯೇ ಸರಿಯಾಗಿಲ್ಲ. ಎಲೆಕ್ಷನ್‌ ಪಿಟಿಷನ್‌ ಕಾಯ್ದೆಯನ್ವಯ ಅರ್ಜಿ ಸಲ್ಲಿಸುವ ವೇಳೆ ಫಾರ್ಮೇಟ್‌ ಹಾಗೂ ಕೆಲ ನಿಯಮಗಳ ಪಾಲನೆ ಆಗಿಲ್ಲ ಎಂದು ಅರ್ಜಿ ವಜಾಗೊಳಿಸಿದರು. ಅರ್ಜಿದಾರರ ಪರವಾಗಿ ಸಂತೋಷ ಗೋಗಿ, ಶರತ್‌, ಶಿವಕುಮಾರ ವಾದ ಮಂಡಿಸಿದ್ದರು.

ಬಿಜೆಪಿಗೆ ಹಿನ್ನಡೆ

ಎಚ್‌.ಕೆ. ಪಾಟೀಲ ವಿರುದ್ಧ ಕೇಳಿ ಬಂದ ಚುನಾವಣೆ ಅಕ್ರಮದ ಆರೋಪ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಈ ವಿಚಾರವನ್ನು ಸಿಬಿಐಗೆ ವಹಿಸುವ ಜತೆಗೆ ಹೋರಾಟ ರೂಪಿಸುವುದಾಗಿ ಬಿಜೆಪಿ ಎಚ್ಚರಿಸಿತ್ತು. ಆದರೆ, ಈಗ ಹೈಕೋರ್ಟ್‌ಗೆ ಸಲ್ಲಿಕೆಯಾದ ಎಲೆಕ್ಷನ್‌ ಪಿಟಿಷನ್‌ ವಜಾಗೊಂಡಿರುವುದು ಬಿಜೆಪಿಗೆ ಹಿನ್ನಡೆಯಾದಂತಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ