ಆ್ಯಪ್ನಗರ

ಅಭಿನಂದನ್ ಬಿಡುಗಡೆ ಭಾರತದ ರಾಜತಾಂತ್ರಿಕತೆಗೆ ಸಂದ ಜಯ: ಪ್ರಹ್ಲಾದ ಜೋಶಿ

ಭಾರತ ಎಷ್ಟೊಂದು ಪ್ರಭಾವಶಾಲಿ ಎಂಬುದಕ್ಕೆ ಇಡಿ ಜಗತ್ತಿನ ರಾಷ್ಟ್ರಗಳು ಭಾರತದ ಪರ ನಿಂತಿರುವುದೇ ಊದಾಹರಣೆ ಎಂದರು.

Vijaya Karnataka Web 1 Mar 2019, 2:52 pm
ಧಾರವಾಡ: ವಿಂಗ ಕಮಾಂಡರ ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತಿರುವುದು ಭಾರತದ ರಾಜತಾಂತ್ರಿಕತೆಗೆ ಸಂದ ಜಯ ಎಂದು ಸಂಸದ ಪ್ರಹ್ಲಾದ ಜೋಶಿ ತಿಳಿಸಿದರು.
Vijaya Karnataka Web joshi


ನಗರದಲದಲ್ಲಿ ಶುಕ್ರವಾರ ಸುದ್ದಿಗಾರೊಂದಿಗೆ ಮಾತನಾಡಿದ ಅವರು, ಭಾರತ ಎಷ್ಟೊಂದು ಪ್ರಭಾವಶಾಲಿ ಎಂಬುದಕ್ಕೆ ಇಡಿ ಜಗತ್ತಿನ ರಾಷ್ಟ್ರಗಳು ಭಾರತದ ಪರ ನಿಂತಿರುವುದೇ ಊದಾಹರಣೆ ಎಂದರು.

ಲೋಕಸಭೆ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು,ಕಳೆದ ಬಾರಿ ರಾಜ್ಯದಲ್ಲಿ 19 ಕ್ಚೇತ್ರಗಳಲ್ಲಿ ಗೆಲವು ನಿರೀಕ್ಷಿಸಿತ್ತು ಆದರೆ18 ಸ್ಥಾನಗಳಲ್ಲಿ ಗೆಲವು ಸಾಧಿಸಿತ್ತು. ಈ ಬಾರಿ ರಾಜ್ಯದಿಂದ 22 ಕ್ಷೇತ್ರಗಳಲ್ಲಿ ಗೆಲವು ಸಾಧಿಸುತ್ತೆವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ವಿನಯ ಕುಲಕರ್ಣಿಗೆ ಟಾಂಗ್ ನೀಡಿದ ಸಂಸದ ಜೋಶಿ , ವಿನಯ ಅವರು ಮೊದಲು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಎಷ್ಟು ಹಳ್ಳಿ ಬರುತ್ತೇವೆ ಎಂದು ಕ್ಷೇತ್ರ ಅದ್ಯಯನ ಮಾಡಿ ಮಾತನಾಡಲಿ. ಪ್ರಚಾರಕ್ಕಾಗಿ ಹೇಳಿಕೆ ನೀಡಬಾರದು ಎಂದು ಸಲಹೇ ನೀಡಿದರು.

ನನ್ನ ಅವಧಿಯಲ್ಲಿ ಏನೇನು ಕೆಲಸ ಮಾಡಿದ್ದೇನೆ ಎನ್ನುವುದನ್ನು ಪುಸ್ತಕ ರೂಪದಲ್ಲಿ ಹೋರತಂದಿದ್ದೆನೆ. ಇನ್ನೂ ಸಂಸದರ ಆದರ್ಶಗ್ರಾಮ ಕೇಂದ್ರದ ವಿಶೇಷ ಯೋಜನೆ ಇದಕ್ಕೆ ಹಣ ನೀಡುವುದು ಕೇಂದ್ರ ಸರಕಾರದ ಜವಬ್ದಾರಿ . ಆ ಗ್ರಾಮದಲ್ಲಿ ಕೆಲಸ ಮಾಡುವುದು ರಾಜ್ಯ ಸರಕಾರದ ಜವಾಬ್ದಾರಿ.ನಾಲ್ಕು ವರ್ಷದ ಮಂತ್ರಿಗಿರಿ ಅವಧಿಯಲ್ಲಿ ವಿನಯ ಕುಲಕರ್ಣಿ ಅವರು ಮಾಡಿದ ಕೆಲಸ ಹಾಗೂ ಸಾಧನೆಗಳೇನು ಎಂದು ಪ್ರಶ್ನಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ