ಆ್ಯಪ್ನಗರ

ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ಸಾಧಕರಿಗೆ ಸನ್ಮಾನ

ಧಾರವಾಡ : ಹುಬ್ಬಳ್ಳಿ ಶ್ರೀನಿವಾಸ ಕಲಾ ಸಂಗಮ, ಕಲಾಶ್ರೀ ಸಾಂಸ್ಕೃತಿಕ ಸಂಘದಿಂದ ನಗರದ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ವೀರ ವಿರಾಗಿಣಿ ಅಕ್ಕಮಹಾದೇವ ಸಮಗ್ರ ಸಾಹಿತ್ಯ ಆಧಾರಿತ ಭಾವನೆಗಳ ಸ್ಪಂದನ ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಲಾ ಸಂಗಮ ಪ್ರಶಸ್ತಿಯನ್ನು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡಿದರು.

Vijaya Karnataka 11 Feb 2019, 5:00 am
ಧಾರವಾಡ : ಹುಬ್ಬಳ್ಳಿ ಶ್ರೀನಿವಾಸ ಕಲಾ ಸಂಗಮ, ಕಲಾಶ್ರೀ ಸಾಂಸ್ಕೃತಿಕ ಸಂಘದಿಂದ ನಗರದ ವಿದ್ಯಾವರ್ಧಕ ಸಂಘದಲ್ಲಿ ಭಾನುವಾರ ನಡೆದ ವೀರ ವಿರಾಗಿಣಿ ಅಕ್ಕಮಹಾದೇವ ಸಮಗ್ರ ಸಾಹಿತ್ಯ ಆಧಾರಿತ ಭಾವನೆಗಳ ಸ್ಪಂದನ ಮಕ್ಕಳ ಪ್ರತಿಭಾ ಪ್ರದರ್ಶನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಲಾ ಸಂಗಮ ಪ್ರಶಸ್ತಿಯನ್ನು ಚಿತ್ರದುರ್ಗದ ಡಾ. ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡಿದರು.
Vijaya Karnataka Web DRW-10RANGA02
ಧಾರವಾಡ ಹುಬ್ಬಳ್ಳಿ ಶ್ರೀನಿವಾಸ ಕಲಾ ಸಂಗಮ, ಕಲಾಶ್ರೀ ಸಾಂಸ್ಕೃತಿಕ ಸಂಘದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕಲಾ ಸಂಗಮ ಪ್ರಶಸ್ತಿಯನ್ನು ಚಿತ್ರದುರ್ಗದ ಡಾ.ಶಿವಮೂರ್ತಿ ಮುರುಘಾ ಶರಣರು ಪ್ರದಾನ ಮಾಡಿದರು. ಗುರುಬಸವ ಮಠದ ಬಸವಗೀತಾ ಮಾತಾಜಿ ಇದ್ದರು.


ಈ ವೇಳೆ ಮಾತನಾಡಿದ ಅವರು, ಮಕ್ಕಳಿಗೆ ಜಾತಿ, ಮತ, ದ್ವೇಷ ಎಂಬ ವಿಷ ಬೀಜ ಬಿತ್ತುವ ಕೆಲಸ ಮಾಡಬಾರದು. ಬದಲಿಗೆ ನೃತ್ಯ, ಸಂಗೀತ, ಕಲೆ, ಸಾಹಿತ್ಯ ಸೇರಿದಂತೆ ವಿವಿಧ ಕಲಾ ಪ್ರವೃತ್ತಿಯ ಸಾಂಸ್ಕೃತಿಕ ಪ್ರಪಂಚ ಪರಿಚಯಿಸಿ ಉತ್ತಮ ಸಮಾಜ ನಿರ್ಮಾಣ ಮಾಡಬೇಕು ಎಂದರು.

ಬುದ್ಧ, ಬಸವ, ಅಂಬೇಡ್ಕರ್‌ ಸೇರದಿಂತೆ ದಾರ್ಶನಿಕರು, ಚಿಂತಕರು, ತತ್ತ್ವಶಾಸ್ತ್ರಜ್ಞರು ಸಮ ಸಮಾಜ ನಿರ್ಮಾಣಕ್ಕೆ ಈ ಹಿಂದೆಯೇ ಶ್ರಮಿಸಿದ್ದಾರೆ. ಆದರೆ ಮನುಷ್ಯ ತನ್ನ ನೀಚ ಬುದ್ಧಿಯ ಗುಣದಿಂದ ಹೊರಗಡೆ ಬಂದಿಲ್ಲ. ಮನುಷ್ಯ ಮೃಗತ್ವ ಗುಣದಿಂದ ದಾರ್ಶನಿಕರ ಆದರ್ಶಗಳಿಗೆ ಮಸಿ ಬಳೆಯವ ಕೆಲಸ ಮಾಡುತ್ತಿದ್ದಾನೆ ಎಂದು ಹೇಳಿದರು.

21ನೇ ಶತಮಾನದ ಆಧುನಿಕ ಮನುಷ್ಯ ತನ್ನ ಸುತ್ತಲೂ ಹಾಕಿಕೊಂಡ ಬೇಲಿ ಕಿತ್ತೆಸೆದು ಬದುಕನ್ನು ಹಂತ-ಹಂತವಾಗಿಯೇ ಅನಾವರಣಗೊಳಿಸುತ್ತ ಹೋದಾಗ ಮನುಷ್ಯನ ಬದುಕು ಸುಖ, ಶಾಂತಿ, ನೆಮ್ಮದಿ, ಆನಂದ ಹಾಗೂ ಮುಖ್ಯವಾಗಿ ಸಮೃದ್ಧಿಯಿಂದ ಕೂಡಿರುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ ಸುಪ್ರಜಾ ಕಾಮತ, ಸೃಷ್ಟಿ ಹಿರೇಮಠ, ಸಿಂಚನಾ ದಾನಗೇರಿ, ತಸ್ಮಿಯಾನಾಜ್‌ ಟಿನ್‌ಮೇಕರ್‌, ರೋಶನಿ ಶೆಟ್ಟಿ, ಹರ್ಷಿತಾ ಇಜಾರಿ, ರಾಧಾ ದೇಸಾಯಿ(ಸಂಗೀತ) ಸುಜಾತಾ ರಾಜಗೋಪಾಲ (ನೃತ್ಯ), ಸವಿತಾ ನಡಕಟ್ಟಿ(ಸಾಹಿತ್ಯ), ಡಾ.ಇಸಬೆಲ್ಲಾ ಝೇವಿಯರ್‌(ಸಮಾಜಸೇವೆ) ಡಾ.ಅಫೊ್ರೕಜಾ ಕಾಥೇವಾರಿ(ಶಿಕ್ಷ ಣ) ಅವರಿಗೆ ಕಲಾ ಸಂಗಮ ಪ್ರಶಸ್ತಿ ನೀಡಿ ಗೌರವಿಸಲಾಯಿತು. ನಂತರ ಮಕ್ಕಳಿಂದ ನೃತ್ಯ, ನಾಟಕ, ಚಿತ್ರಕಲೆ, ಸಂಗೀತ ಕಲೆಗಳ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

ಗುರುಬಸವ ಮಠದ ಬಸವಗೀತಾ ಮಾತಾಜಿ ಸಾನ್ನಿಧ್ಯ ವಹಿಸಿದ್ದರು. ಬಸವ ಪ್ರಕಾಶ ಶ್ರೀ ಸಮ್ಮುಖ ವಹಿಸಿದ್ದರು. ಜಿಪಂ ಮಾಜಿ ಅಧ್ಯಕ್ಷೆ ಚೈತ್ರಾ ಶಿರೂರ, ಉಪಮೇಯರ್‌ ಮೇನಕಾ ಹುರಳಿ, ಭಾರತಿದೇವಿ ರಾಜಗುರು, ಸುಮಂಗಲಾ ಅಂಗಡಿ, ಡಾ.ಪಾರ್ವತಿ ಹಾಲಭಾವಿ, ಶ್ರೀನಿವಾಸ ಕಲಾ ಸಂಗಮ ಅಧ್ಯಕ್ಷ ರಾಜಶೇಖರ ಮಾಣಿಕ್ಯಂ, ಹನಮಂತಪ್ಪ ಹಳಿಯಾಳ, ಸೀತಾ ಚಪ್ಪರ, ಸವಿತಾ ಹೆಗಡೆ ಭಾಗವಹಿಸಿದ್ದರು. ಅಧ್ಯಕ್ಷ ತೆ ವಹಿಸಿದ್ದ ಸಾಹಿತಿ ರಂಜಾನ ದರ್ಗಾ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಲಾಶ್ರೀ ಸಾಂಸ್ಕೃತಿಕ ಸಂಘದ ಅಧ್ಯಕ್ಷ ವಾಸುದೇವ ಮಹಾಲೆ ಸ್ವಾಗತಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ