ಆ್ಯಪ್ನಗರ

ಶಾಮಿಯಾನ ಉದ್ಯಮ ಸಣ್ಣ ಕೈಗಾರಿಕೆಗೆ ಸೇರಿಸಿ ;ಹಿರೇಮಠ

ಶಾಮಿಯಾನ ಉದ್ಯಮ ಸಣ್ಣ ಕೈಗಾರಿಕೆಗೆ ಸೇರಿಸಿ-ಜಿಲ್ಲೆಯಲ್ಲಿ600 ಶಾಮಿಯಾನ ಅಂಗಡಿ, 3000 ಕಾರ್ಮಿಕರಿದ್ದಾರೆಹುಬ್ಬಳ್ಳಿ: ಲಾಕ್‌ಡೌನ್‌ ಮತ್ತು ಕೊರೊನಾ ಹಾವಳಿಯಿಂದಾಗಿ ಶಾಮಿಯಾನ ...

Vijaya Karnataka 18 Aug 2020, 5:00 am
ಹುಬ್ಬಳ್ಳಿ: ಲಾಕ್‌ಡೌನ್‌ ಮತ್ತು ಕೊರೊನಾ ಹಾವಳಿಯಿಂದಾಗಿ ಶಾಮಿಯಾನ ಉದ್ಯಮ ತೊಂದರೆಗೊಳಗಾಗಿದ್ದು, ಇದನ್ನು ನಂಬಿಕೊಂಡಿರುವ ಕಾರ್ಮಿಕ ಬದುಕು ದುಸ್ತರವಾಗಿದೆ. ಶಾಮಿಯಾನ ಉದ್ಯಮವನ್ನು ಸಣ್ಣ ಕೈಗಾರಿಕೆಯಲ್ಲಿಸೇರ್ಪಡೆಗೊಳಿಸಿ, ಬ್ಯಾಂಕ್‌ನಿಂದ ಬಡ್ಡಿರಹಿತ ಸಾಲಸೌಲಭ್ಯಗಳನ್ನು ಒದಗಿಸಬೇಕೆಂದು ಕರ್ನಾಟಕ ರಾಜ್ಯ ಶಾಮಿಯಾನ ಡೆಕೋರೇಶನ್‌, ಧ್ವನಿ ಮತ್ತು ಬೆಳಕು ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶಿವಕುಮಾರ ಹಿರೇಮಠ ಒತ್ತಾಯಿಸಿದರು.
Vijaya Karnataka Web shamiyan


-ಜಿಲ್ಲೆಯಲ್ಲಿ600 ಶಾಮಿಯಾನ ಅಂಗಡಿ, 3000 ಕಾರ್ಮಿಕರಿದ್ದಾರೆ

ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಸಾಮಾನ್ಯವಾಗಿ ಫೆಬ್ರವರಿಯಿಂದ ಜೂನ್‌ ತಿಂಗಳವರೆಗೆ ವಿವಿಧ ಸಭೆ, ಸಮಾರಂಭ, ಶುಭ ಕಾರ್ಯಕ್ರಮ ಜರುಗುತ್ತವೆ. ಈ ವರ್ಷ ಕೊರೋನಾದಿಂದ ಉದ್ಯೋಗ ನಡೆಯಲಾರದ ಸ್ಥಿತಿ ಇದೆ. ಸರಕಾರ ಇನ್ನಿತರ ಕ್ಷೇತ್ರಗಳಿಗೆ ಸಹಾಯ ನೀಡಿದಂತೆ ಶಾಮಿಯಾನ ಉದ್ಯೋಗಿಗಳಿಗೂ ಸಹಾಯ ನೀಡಬೇಕೆಂದು ಮುಖ್ಯಮಂತ್ರಿಗೆ ಹಲವಾರು ಬಾರಿ ಮನವಿ ಸಲ್ಲಿಸಲಾಗಿದೆ. ಆದರೂ ಸ್ಪಂದಿಸಿಲ್ಲಎಂದರು.

ಜಿಲ್ಲೆಯಲ್ಲಿರುವ 600 ಶಾಮಿಯಾನ ಅಂಗಡಿಗಳವರು, 3000 ಕಾರ್ಮಿಕರ ಬದುಕು ಈಗ ಅತಂತ್ರವಾಗಿದೆ. 2 ತಿಂಗಳಿಂದ ಕೆಲಸವಿಲ್ಲದೆ ಸಾಕಷ್ಟು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ