ಧಾರವಾಡ: ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳ ವಿಶೇಷ ಘಟಕ ಯೋಜನೆಯ ಅನುದಾನದಡಿ ಎಸ್ಸಿ ,ಎಸ್ಟಿ ಹಾಗೂ ಕೊಳಚೆ ಪ್ರದೇಶಗಳಲ್ಲಿಬಾಲ ಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ದತಿ ನಿರ್ಮೂಲನೆಗಾಗಿ ಜನಜಾಗೃತಿ ಮೂಡಿಸಲು ಜಿಲ್ಲಾಡಳಿತ ಧಾರವಾಡ, ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನಾ ಸಂಘ ಧಾರವಾಡ, ಸಂಕಲ್ಪ ಸಂಸ್ಥೆ ಉಪ್ಪಿನಬೆಟಗೇರಿ ಸಹಭಾಗಿತ್ವದಲ್ಲಿಧಾರವಾಡದ ಹಳೆ ಬಸ್ ನಿಲ್ದಾಣದ ಬಳಿಯ ರಿಕ್ಷಾ ಸ್ಟಾತ್ರ್ಯಂಡಿನಲ್ಲಿರುವ ಅಟೋಗಳಿಗೆ ಬ್ಯಾನರ್ ಅಳವಡಿಸಲಾಯಿತು.
ಕಾರ್ಯಕ್ರಮ ಉದ್ಘಾಟಿಸಿದ ಟ್ರಾಫಿಕ್ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಮಾತನಾಡಿ, ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಿ ಅಂತಹ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಬಾಳನಗೌಡ ಪಾಟೀಲ್, ಪ್ರಕಾಶ ಹೂಗಾರ, ಜೀವನ್ ಉತ್ಕುರಿ, ಸತೀಶ ನಾಯಕ್, ಎಂ.ಎಂ ಖಾಜಿ, ಮೆಹಬೂಬಲಿ ಕಲಕೇರಿ, ಬಾಷಾ ಪಠಾಣ, ಬಸೀರ ಖಾಜಿ, ಅಹ್ಮದ ಹುಂಡೆಕರ್, ಬಸವರಾಜ ಹಿರೇಮಠ ಇದ್ದರು.
ಕಾರ್ಯಕ್ರಮ ಉದ್ಘಾಟಿಸಿದ ಟ್ರಾಫಿಕ್ ಇನ್ಸ್ಪೆಕ್ಟರ್ ಮುರುಗೇಶ ಚನ್ನಣ್ಣವರ ಮಾತನಾಡಿ, ಮಕ್ಕಳು ಶಾಲೆಯಿಂದ ಹೊರಗುಳಿಯುವುದನ್ನು ತಪ್ಪಿಸಿ ಅಂತಹ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವ ಮೂಲಕ ಅವರನ್ನು ಮುಖ್ಯ ವಾಹಿನಿಗೆ ತರಲು ಎಲ್ಲರೂ ಪ್ರಯತ್ನಿಸಬೇಕು ಎಂದರು.
ಬಾಳನಗೌಡ ಪಾಟೀಲ್, ಪ್ರಕಾಶ ಹೂಗಾರ, ಜೀವನ್ ಉತ್ಕುರಿ, ಸತೀಶ ನಾಯಕ್, ಎಂ.ಎಂ ಖಾಜಿ, ಮೆಹಬೂಬಲಿ ಕಲಕೇರಿ, ಬಾಷಾ ಪಠಾಣ, ಬಸೀರ ಖಾಜಿ, ಅಹ್ಮದ ಹುಂಡೆಕರ್, ಬಸವರಾಜ ಹಿರೇಮಠ ಇದ್ದರು.