ಆ್ಯಪ್ನಗರ

ವಚನ ಸಂಸ್ಕಾರ ಅಳವಡಿಸಿಕೊಳ್ಳಿ

ಧಾರವಾಡ : ಡಾ. ಹಳಕಟ್ಟಿ ಚಿದ್ರಗೊಂಡ ವಚನ ಕ್ರೂಢೀಕರಿಸಿ ವಚನ ಸಾಹಿತ್ಯ ಪ್ರಕಟಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಶರಣೆ ಗೀರಿಜಾ ಧರ್ಮರೆಡ್ಡಿ ಹೇಳಿದರು.

Vijaya Karnataka 4 Jul 2019, 5:00 am
ಧಾರವಾಡ : ಡಾ. ಹಳಕಟ್ಟಿ ಚಿದ್ರಗೊಂಡ ವಚನ ಕ್ರೂಢೀಕರಿಸಿ ವಚನ ಸಾಹಿತ್ಯ ಪ್ರಕಟಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಶರಣೆ ಗೀರಿಜಾ ಧರ್ಮರೆಡ್ಡಿ ಹೇಳಿದರು.
Vijaya Karnataka Web DRW-3MAILAR07


ನಗರದ ಅಕ್ಕನಬಳಗದ ಮೃತ್ಯುಂಜಯ ಅಪ್ಪಗಳ ಸಭಾಭವನದಲ್ಲಿ ಬುಧವಾರ ಹಮ್ಮಿಕೊಂಡ ಹಳಕಟ್ಟಿ 139ನೇ ಜಯಂತಿ ಅಂಗವಾಗಿ ಉಪನ್ಯಾಸ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ವಚನ ಸಾಹಿತ್ಯ ಕಡ್ಡಾಯ ಇರಬೇಕೆಂದು ಸಾಕಷ್ಟು ಶ್ರಮ ವಹಿಸಿದ್ದಾರೆ. ಪಾಲಕರು ಮಕ್ಕಳಿಗೆ ವಚನ ಸಂಸ್ಕಾರ ತಿಳಿಸಬೇಕು. ಸಮಾಜದ ಪ್ರತಿಯೊಬ್ಬರು ವಚನಗಳ ಸಂಸ್ಕಾರ ಅಳವಡಿಸಿಕೊಳ್ಳಬೇಕು ಎಂದರು.

ಇದೇ ವೇಳೆ ಕುಮಾರ ಸಂದೀಪರಾಜ ಹಾಸ್ಯ ಪ್ರಹಸನ ಪ್ರಸ್ತುತಪಡಿಸಿದರು. ಅಕ್ಕನ ಬಳಗದ ಅಧ್ಯಕ್ಷೆ ಮೀನಾಕ್ಷಿ ಕೋಟೂರ ಅಧ್ಯಕ್ಷ ತೆ ವಹಿಸಿದ್ದರು. ಭಾರತಿದೇವಿ ರಾಜಗುರು, ಲೀಲಾವತಿ ಬೆಲ್ಲದ, ಮಹಾದೇವಿ ಕೇಲಗೆರಿ ಉಪಸ್ಥಿತರಿದ್ದರು. ಕಲ್ಪನಾ ಕಟಗಿ ಸ್ವಾಗತಿಸಿದರು. ಸವಿತಾ ನಡಕಟ್ಟಿ ಹಾಗ ಕುಸೂಮಾ ಓತಗೇರಿ ಪರಿಚಯಿಸಿದರು. ಲತಾ ಶಹಪುರ ನಿರೂಪಿಸಿದರು. ಪುಷ್ಪಾ ಪಾಟೀಲ ವಂದಿಸಿದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ