ಆ್ಯಪ್ನಗರ

ಕ್ರೀಡಾ ಮನೋಭಾವ ಅಳವಡಿಕೆ ಮುಖ್ಯ

ಧಾರವಾಡ: ರಾಯಾಪೂರದಲ್ಲಿನ ಮಹಾಂತ ಮಹಾವಿದ್ಯಾಲಯದಲ್ಲಿನಡೆದ ಕರ್ನಾಟಕ ವಿಶ್ವವಿದ್ಯಾಲಯ ಮಹಿಳೆಯರ ಏಕವಲಯ ಬಾಲ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿಶಿರಸಿಯ ಜಿಎಫ್‌ಜಿ ಮಹಾವಿದ್ಯಾಯ ಪ್ರಥಮ, ಹಂಸಬಾವಿಯ ಎಂಎಎಸ್‌ಸಿ ಮಹಾವಿದ್ಯಾಲಯ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಶಿರಶಿಯ ಎಂಇಎಸ್‌ ವಾಣಿಜ್ಯ ಕಾಲೇಜು ಪಡೆದಿದೆ.

Vijaya Karnataka 26 Dec 2019, 5:00 am
ಧಾರವಾಡ: ರಾಯಾಪೂರದಲ್ಲಿನ ಮಹಾಂತ ಮಹಾವಿದ್ಯಾಲಯದಲ್ಲಿನಡೆದ ಕರ್ನಾಟಕ ವಿಶ್ವವಿದ್ಯಾಲಯ ಮಹಿಳೆಯರ ಏಕವಲಯ ಬಾಲ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿಶಿರಸಿಯ ಜಿಎಫ್‌ಜಿ ಮಹಾವಿದ್ಯಾಯ ಪ್ರಥಮ, ಹಂಸಬಾವಿಯ ಎಂಎಎಸ್‌ಸಿ ಮಹಾವಿದ್ಯಾಲಯ ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ಶಿರಶಿಯ ಎಂಇಎಸ್‌ ವಾಣಿಜ್ಯ ಕಾಲೇಜು ಪಡೆದಿದೆ.
Vijaya Karnataka Web adopting a sports mindset is important
ಕ್ರೀಡಾ ಮನೋಭಾವ ಅಳವಡಿಕೆ ಮುಖ್ಯ


ಪಂದ್ಯಾವಳಿ ಉದ್ಘಾಟಿಸಿದ ಗದಗ ಎಎಸ್‌ಎಸ್‌ ಕಾಲೇಜಿನ ಪ್ರಾಚಾರ್ಯ ಹಾಗೂ ಕವಿವಿ ಸಿಂಡಿಕೇಟ್‌ ಸದಸ್ಯ ಡಾ.ಎಂ.ಎಲ್‌.ಗುಳೇದಗುಡ್ಡ, ವಿದ್ಯಾರ್ಥಿಗಳು ಪ್ರಸ್ತುತದಲ್ಲಿಕ್ರೀಡಾ ಮನೋಭಾವನೆ ಬೆಳೆಸಿಕೊಳ್ಳಬೇಕು. ಅದರಲ್ಲೂಮಹಿಳೆಯರು ಅಥ್ಲೆಟಿಕ್ಸ್‌ನಂತಹ ಕ್ರೀಡೆಗಳತ್ತ ಹೆಚ್ಚಿನ ಗಮನ ಹರಿಸುವುದರ ಮೂಲಕ ವ್ಯಕ್ತಿತ್ವ ವಿಕಾಸಕ್ಕೆ ಮುನ್ನುಡಿ ಬರೆಯಬೇಕು ಎಂದರು.

ಪಂದ್ಯಾವಳಿ ಅಧ್ಯಕ್ಷತೆ ವಹಿಸಿ ವಿಜೇತರಿಗೆ ಬಹುಮಾನ ವಿತರಿಸಿದ ಪ್ರಾಚಾರ್ಯ ಡಾ.ಸಿಎಂ.ಕಡಕೋಳ ಮಾತನಾಡಿ, ವಿದ್ಯಾರ್ಥಿಗಳು ಪಠ್ಯದ ಜತೆಗೆ ಕ್ರೀಡಾ ಚಟುವಟಿಕೆಗಳಲ್ಲಿಯೂ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಅಂದಾಗ ಬೌದ್ಧಿಕ ಸಾಮರ್ಥ್ಯದ ಜತೆಗೆ ಮಾನಸಿಕ, ದೈಹಿಕ ಸಾಮರ್ಥ್ಯ ವೃದ್ಧಿಯಾಗುತ್ತದೆ ಎಂದರು.

ನಿರ್ಣಾಯಕರಾಗಿ ಡಿ.ಬಿ.ಗೋವಿಂದಪ್ಪ, ವಿರುಪಾಕ್ಷಪ್ಪ ಕುರ್ತುಕೋಟಿ, ಪರ್ವತಗೌಡ, ಮಹಾಂತೇಶ ಮಾಳಣ್ಣವರ, ಪಾಟೀಲ ಕಾರ್ಯ ನಿರ್ವಹಿಸಿದರು. ಕವಿವಿ ಮಹಿಳಾ ಬಾಲ ಬ್ಯಾಡ್ಮಿಂಟನ್‌ ತಂಡದ ಆಯ್ಕೆ ಪ್ರಕ್ರಿಯೆ ನಡೆಯಿತು.

ಕ್ರೀಡಾ ವಿಭಾಗದ ಕಾರ್ಯಾಧ್ಯಕ್ಷ ಡಾ.ರಾಜಶೇಖರಪ್ಪ, ದೈಹಿಕ ನಿರ್ದೇಶಕ ಡಿ.ನಾಗರಾಜಪ್ಪ, ವಿದ್ಯಾರ್ಥಿ ಒಕ್ಕೂಟದ ಕಾರ್ಯಾಧ್ಯಕ್ಷ ಡಾ.ಕೆ.ಎಸ್‌.ಶಾಂತಯ್ಯ, ಡಾ.ಎಸ್‌.ಎಚ್‌.ಪಂಚಾಕ್ಷರಿ, ಪ್ರೊ.ಎ.ಬಿ.ಶಿರಿಯಣ್ಣವರ, ಕವಿವಿ ಆಯ್ಕೆ ಸಮಿತಿ ಸದಸ್ಯರಾದ ವೆಂಕಟೇಶ, ಕೊಟ್ರೆಶ್‌.ಕೆ, ಮಹಾವಿದ್ಯಾಲಯದ ಸಿಬ್ಬಂದಿವರ್ಗ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ವಿದ್ಯಾರ್ಥಿ ಕಾರ್ಯದರ್ಶಿ ಕಾವೇರಿ ಸೂರ್ಯವಂಶಿ ಕಾರ್ಯಕ್ರಮ ನಿರ್ವಹಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ