ಆ್ಯಪ್ನಗರ

ಹುಬ್ಬಳ್ಳಿ: ಅವಳಿ ನಗರಕ್ಕೆ ಮತ್ತೆ ವರುಣನ ಕಾಟ, ಜನಜೀವನ ಅಸ್ತವ್ಯಸ್ತ

ಹುಬ್ಬಳ್ಳಿ-ಧಾರವಾಡ ಜನತೆಗೆ ಮತ್ತೆ ಮಳೆಯ ಕಾಟ ಆರಂಭವಾಗಿದೆ. ಮೂರು ದಿನದಿಂದ ನಿಂತಿದ್ದ ಮಳೆ ಸೋಮವಾರ ಸಂಜೆ ಮತ್ತೆ ಸುರಿದು ಜನಜೀವನ ಅಸ್ತವ್ಯಸ್ತಗೊಂಡಿದೆ. ರಾತ್ರಿ 8 ಗಂಟೆಗೆ ಜೋರಾಗಿ ಸುರಿದ ಮಳೆಗೆ ಜನ ಹೈರಾಣರಾಗಿದ್ದರು.

Vijaya Karnataka Web 5 Nov 2019, 11:42 am
ಹುಬ್ಬಳ್ಳಿ: ಮೂರು ದಿನದಿಂದ ನಿಂತಿದ್ದ ಮಳೆ ಸೋಮವಾರ ಸಂಜೆ ಮತ್ತೆ ಆರಂಭವಾಯ್ತು. ಎರಡೂವರೆ ಗಂಟೆ ಬಿಟ್ಟೂ ಬಿಡದೆ ಸುರಿದಿದ್ದರಿಂದ ಜನಜೀವನ ಅಸ್ತವ್ಯಸ್ತಗೊಂಡಿತು.
Vijaya Karnataka Web Hubli


ಶನಿವಾರದಿಂದ ಸೋಮವಾರದ ವರೆಗೆ ಬಿಸಿಲು ಇದ್ದಿದ್ದರಿಂದ ಇನ್ನಾದರೂ ಮಳೆ ಮಾಯವಾಯಿತು ಎಂದು ಹುಬ್ಬಳ್ಳಿ-ಧಾರವಾಡ ಜನತೆ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಸೋಮವಾರ ಸಂಜೆ ಜಿಟಿ ಜಿಟಿ ಮಳೆ ಆರಂಭವಾಗಿ ರಾತ್ರಿ 8 ಗಂಟೆಗೆ ಬಿರುಸಾಗಿ ಸುರಿಯಿತು. ಇದರಿಂದ ಕೆಲ ನಿಮಿಷಗಳಲ್ಲಿ ರಸ್ತೆಗಳು ಜಲಾವೃತಗೊಂಡವು.

ತಗ್ಗು ಪ್ರದೇಶದಲ್ಲಿನ ಕೆಲ ಮನೆಗಳಿಗೆ ನೀರು ನುಗ್ಗಿತು. ದಾಜಿಬಾನ ಪೇಟೆ, ಮೂರುಸಾವಿರ ಮಠ ಎದುರಿನ ರಸ್ತೆಗಳು ನೀರಿನಿಂದ ತುಂಬಿ ವಾಹನ ಸಂಚಾರಕ್ಕೆ ಅಡ್ಡಿಯಾಯಿತು. ಬೆಳಗ್ಗೆ ಮಳೆಯ ಯಾವ ಲಕ್ಷಣವೂ ಇಲ್ಲದ್ದರಿಂದ ಜನರು ಕೊಡೆ ಹಾಗೂ ರೇನ್‌ಕೋಟ್‌ ಇಲ್ಲದೆ ಮನೆಯಿಂದ ಹೊರ ಬಂದಿದ್ದರು. ಆದರೆ, ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಹೋಗುವವರು ಮಳೆಗೆ ಸಿಕ್ಕು ಮಾರ್ಗ ಮಧ್ಯದಲ್ಲಿಯೇ ಗಂಟೆಗಟ್ಟಲೇ ನಿಲ್ಲಬೇಕಾಯಿತು. ಕೆಲವರು ಮಳೆಯಲ್ಲಿಯೇ ತೋಯ್ದುಕೊಂಡು ಮನೆಯತ್ತ ಹೆಜ್ಜೆ ಹಾಕುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ