ಆ್ಯಪ್ನಗರ

ಬಾಕಿ ವೇತನ ಬಿಡುಗಡೆಗೆ ಒಪ್ಪಿಗೆ

ಧಾರವಾಡ : ರಾಜ್ಯದಲ್ಲಿನ ಎಲ್ಲಸರಕಾರಿ ಎಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ 80 ಲಕ್ಷ ವೇತನ ಬಿಡುಗಡೆಯಾಗಿದ್ದು, ಬಾಕಿ ಉಳಿದ 13 ಕೋಟಿ ಅನುದಾನ ಇನ್ನೊಂದು ವಾರದೊಳಗಾಗಿ ಬಿಡುಗಡೆಗೊಳಿಸಲು ಸರಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಒಪ್ಪಿರುವುದಾಗಿ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ತಿಳಿಸಿದ್ದಾರೆ.

Vijaya Karnataka 22 Jan 2020, 6:51 pm
ಧಾರವಾಡ : ರಾಜ್ಯದಲ್ಲಿನ ಎಲ್ಲಸರಕಾರಿ ಎಜಿನಿಯರಿಂಗ್‌ ಹಾಗೂ ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿಕಾರ್ಯನಿರ್ವಹಿಸುತ್ತಿರುವ ಅರೆಕಾಲಿಕ ಉಪನ್ಯಾಸಕರ 80 ಲಕ್ಷ ವೇತನ ಬಿಡುಗಡೆಯಾಗಿದ್ದು, ಬಾಕಿ ಉಳಿದ 13 ಕೋಟಿ ಅನುದಾನ ಇನ್ನೊಂದು ವಾರದೊಳಗಾಗಿ ಬಿಡುಗಡೆಗೊಳಿಸಲು ಸರಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಒಪ್ಪಿರುವುದಾಗಿ ವಿಧಾನ ಪರಿಷತ್‌ ಸದಸ್ಯ ಎಸ್‌.ವಿ. ಸಂಕನೂರ ತಿಳಿಸಿದ್ದಾರೆ.
Vijaya Karnataka Web agreed for release of dues
ಬಾಕಿ ವೇತನ ಬಿಡುಗಡೆಗೆ ಒಪ್ಪಿಗೆ


ಈ ಕುರಿತು ಪ್ರಕಟಣೆ ನೀಡಿದ ಅವರು, ರಾಜ್ಯದಲ್ಲಿನ ಸರಕಾರಿ ಇಂಜಿನೀಯರಿಂಗ್‌ ಹಾಗೂ ಪಾಲಿಟೆಕ್ನಿಕಲ್‌ ಕಾಲೇಜುಗಳಲ್ಲಿಸೇವೆ ಸಲ್ಲಿಸುತ್ತಿರುವ ಅರೆಕಾಲಿಕ ಉಪನ್ಯಾಸಕರಿಗೆ ಕಳೆದ 1 ವರ್ಷದಿಂದ ವೇತನವಿಲ್ಲದೇ ಬಹಳ ತೊಂದರೆ ಅನುಭವಿಸುತ್ತಿದ್ದರು. ಈ ಕುರಿತು ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದಶಿಶಯವರೊಂದಿಗೆ ಮಾತನಾಡಿ, ಅರೆಕಾಲಿಕ ಉಪನ್ಯಾಸಕರ 1 ವರ್ಷದ ವೇತನ ಒಟ್ಟು ಸುಮಾರು 13 ಕೋಟಿ 80 ಲಕ್ಷ ಆಗುತ್ತದೆ. ಈ ಕುರಿತು ತಕ್ಷಣವೇ ಆ ಎಲ್ಲವೇತನಾನುದಾನವನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಲಾಗಿತ್ತು. ಅದರಂತೆ ಅರೆಕಾಲಿಕ ಉಪನ್ಯಾಸಕರ ವೇತನಕ್ಕಾಗಿ ಸದ್ಯ 80ಲಕ್ಷ ಮಾತ್ರ ಬಿಡುಗಡೆ ಮಾಡಿದ್ದು, ಬಾಕಿ ಇನ್ನೂ 13 ಕೋಟಿ ಅನುದಾನವನ್ನು ಇನ್ನೊಂದು ವಾರದೊಳಗಾಗಿ ಬಿಡುಗಡೆ ಮಾಡಲಾಗುವದಾಗಿ ಸರಕಾರದ ಆರ್ಥಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಒಪ್ಪಿದ್ದಾರೆ. ಅರೆಕಾಲಿಕ ಉಪನ್ಯಾಸಕರು ಯಾವುದೇ ಆತಂಕಕ್ಕೆ ಒಳಗಾಗಬಾರದು ಎಂದು ಎಸ್‌.ವಿ.ಸಂಕನೂರ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ