ಆ್ಯಪ್ನಗರ

ಸಿಪೆಟ್‌ ಸ್ಥಾಪನೆಗೆ ಒಡಂಬಡಿಕೆ : ಸದಾನಂದಗೌಡ

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಸಿಪೆಟ್‌ (Central Institute of Plastics Engeerg Technology) ಸ್ಥಾಪನೆ ಮಾಡಲು ಈ ಸಮಾವೇಶದಲ್ಲಿಯೇ ರಾಜ್ಯ ಸರಕಾರದೊಂದಿಗೆ ಒಡಬಂಡಿಕೆಗೆ ಸಹಿ ಹಾಕಲಾಗುವುದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.

Vijaya Karnataka 15 Feb 2020, 5:00 am
ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡದಲ್ಲಿ ಸಿಪೆಟ್‌ (Central Institute of Plastics Engeerg Technology) ಸ್ಥಾಪನೆ ಮಾಡಲು ಈ ಸಮಾವೇಶದಲ್ಲಿಯೇ ರಾಜ್ಯ ಸರಕಾರದೊಂದಿಗೆ ಒಡಬಂಡಿಕೆಗೆ ಸಹಿ ಹಾಕಲಾಗುವುದು ಎಂದು ಕೇಂದ್ರ ರಾಸಾಯನಿಕ ಹಾಗೂ ರಸಗೊಬ್ಬರ ಖಾತೆ ಸಚಿವ ಡಿ.ವಿ.ಸದಾನಂದಗೌಡ ಹೇಳಿದರು.
Vijaya Karnataka Web agreement for the establishment of cipet sadananda gowda
ಸಿಪೆಟ್‌ ಸ್ಥಾಪನೆಗೆ ಒಡಂಬಡಿಕೆ : ಸದಾನಂದಗೌಡ


ನಗರದ ಡೆನಿಸನ್ಸ್‌ ಹೋಟೆಲ್‌ನಲ್ಲಿಆಯೋಜಿಸಿದ್ದ ಇನ್ವೆಸ್ಟ್‌ ಕರ್ನಾಟಕ ಹುಬ್ಬಳ್ಳಿ ಸಮಾವೇಶದಲ್ಲಿಮಾತನಾಡಿದ ಅವರು, ಈ ಹಿಂದೆ ಅನಂತಕುಮಾರ ಅವರು ಕೇಂದ್ರ ಸಚಿವರಾಗಿದ್ದಾಗಲೇ ಸಿಪೆಟ್‌ ಸ್ಥಾಪನೆಗೆ ಮಂಜೂರಿ ದೊರೆತಿತ್ತು. ಆದರೆ, ರಾಜ್ಯ ಸರಕಾರ ಅಗತ್ಯ ಜಾಗ ನೀಡದ ಕಾರಣ ಸ್ಥಾಪನೆ ವಿಳಂಬವಾಗಿತ್ತು. ಇದೀಗ ರಾಜ್ಯ ಸರಕಾರ ಸಿಪೆಟ್‌ ಸ್ಥಾಪಿಸಲು ಉತ್ಸುಕವಾಗಿದ್ದರಿಂದ ಆದಷ್ಟು ಬೇಗ ಸ್ಥಾಪನೆ ಮಾಡಲಾಗುವುದು ಎಂದರು.

100 ಲಕ್ಷ ಕೋಟಿ ರೂ. ವೆಚ್ಚದಲ್ಲಿಮೂಲ ಸೌಕರ್ಯಗಳ ಅಭಿವೃದ್ಧಿ ಗುರಿ ಹೊಂದಲಾಗಿದೆ. 2025ರ ಹೊತ್ತಿಗೆ ಈ ಕಾಮಗಾರಿಗಳು ಪೂರ್ಣಗೊಳ್ಳಲಿವೆ. ಯಾದಗಿರಿಯಲ್ಲಿ100 ಕೋಟಿ ರೂ. ವೆಚ್ಚದಲ್ಲಿರಾಸಾಯನಿಕ ಮಂತ್ರಾಲಯದಿಂದ ಡ್ರಗ್‌ ಪಾರ್ಕ್ ನಿರ್ಮಿಸಲಾಗುತ್ತಿದೆ. ಬೆಂಗಳೂರು-ಮುಂಬಯಿ ಕೈಗಾರಿಕಾ ಕಾರಿಡಾರ್‌, ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್‌ ವೇ ಯೋಜನೆಗಳು ಅಭಿವೃದ್ಧಿಗೆ ಪೂರಕವಾದ ಬೆಳವಣಿಗೆಗಳಾಗಿವೆ ಎಂದು ಹೇಳಿದರು.

ಭಾರತದಲ್ಲಿಶೇ.22 ಮಾತ್ರ ಕಾರ್ಪೊರೇಟ್‌ ತೆರಿಗೆ ವಿಧಿಸಲಾಗುತ್ತಿದ್ದು, ಇದು ಏಷಿಯಾದ ರಾಷ್ಟ್ರಗಳಲ್ಲಿಯೇ ಕಡಿಮೆಯಾಗಿದೆ. ಇದರ ಉಪಯೋಗವನ್ನು ಉದ್ಯಮಿಗಳು ಪಡೆದುಕೊಂಡು ಹೆಚ್ಚೆಚ್ಚು ಹೂಡಿಕೆ ಮಾಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.

ಅಂತಾರಾಷ್ಟ್ರೀಯ ಏರ್‌ಪೋರ್ಟ್‌ ಆಗಲಿ: ಅಂಗಡಿ
ಹುಬ್ಬಳ್ಳಿ: ರೇಲ್ವೆ, ವಾಯುಯಾನ, ಆಟೋಮೊಬೈಲ…, ಜವಳಿ ವಲಯಗಳಿಗೆ ಬೇಕಾದ ಬಿಡಿ ಭಾಗಗಳನ್ನು ಪೂರೈಸುವ ಉದ್ಯಮಗಳು ಉತ್ತರ ಕರ್ನಾಟಕ ಭಾಗದಲ್ಲಿಸ್ಥಾಪನೆಯಾಗಬೇಕು. ಹುಬ್ಬಳ್ಳಿಗೆ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹೊಂದುವ ಎಲ್ಲಅರ್ಹತೆಗಳು ಇದ್ದು, ಬರುವ ದಿನಗಳಲ್ಲಿಆ ಕನಸನ್ನು ಸಾಕಾರಗೊಳಿಸಲಾಗುವುದು ಎಂದು ಕೇಂದ್ರ ರೇಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದರು.

ಕಲಬುರ್ಗಿಯಲ್ಲಿಸಿಮೆಂಚ್‌, ಬಳ್ಳಾರಿಯಲ್ಲಿಜವಳಿ, ಕೋಲಾರ, ಹಟ್ಟಿಯಲ್ಲಿಚಿನ್ನದ ಗಣಿಗಳಿವೆ. ಮೂಲ ಸೌಕರ್ಯಗಳನ್ನು ಒದಗಿಸಲು ಸರಕಾರಗಳು ಬದ್ಧವಾಗಿವೆ. ಬೆಂಗಳೂರು ದಟ್ಟಣೆ ಕಡಿಮೆ ಮಾಡಲು ಎರಡನೇ ಹಂತದ ನಗರಗಳ ಅಭಿವೃದ್ಧಿ ಅಗತ್ಯ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ