ಹುಬ್ಬಳ್ಳಿ: ದಾಖಲೆ ಇಲ್ಲದ ಹಣ ಇಟ್ಟುಕೊಂಡು ಬೆಂಗಳೂರಿಗೆ ಹೊರಟಿದ್ದ ವ್ಯಕ್ತಿಯನ್ನು ವಿಚಾರಣೆಗೆ ಒಳಪಡಿಸಿ 2.40 ಲಕ್ಷ ರೂ. ಜಪ್ತಿ ಮಾಡಿರುವ ಘಟನೆ ನಗರದ ವಿಮಾನ ನಿಲ್ದಾಣದಲ್ಲಿ ಶನಿವಾರ ನಡೆದಿದೆ.
ಉತ್ತರಪ್ರದೇಶದ ನೋಯ್ಡಾ ನಿವಾಸಿ ನಿತೀನ್ ಮೇಶವಾಡೆ ಎಂಬುವರಿಗೆ ಸೇರಿದ ಹಣ ಇದಾಗಿದೆ. ಹುಬ್ಬಳ್ಳಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ನಿತೀನ್ ಆಗಮಿಸಿದ್ದರು.
ಬ್ಯಾಗೇಜ್ ಸ್ಕ್ಯಾನರ್ನಲ್ಲಿ ಬ್ಯಾಗ್ ಪರಿಶೀಲನೆ ಮಾಡುವಾಗ ಬ್ಯಾಗ್ನಲ್ಲಿ ಹಣ ಇರುವುದು ಕಂಡುಬಂದಿದೆ. ತಕ್ಷಣ ಬ್ಯಾಗ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ ವಿಮಾನ ನಿಲ್ದಾಣ ಸಿಬ್ಬಂದಿ, ತಕ್ಷಣ ಗೋಕುಲ್ರೋಡ್ ಠಾಣೆ ಹಾಗೂ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಿಲ್ದಾಣಕ್ಕೆ ಆಗಮಿಸಿದ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಪೊಲೀಸರು ಹಣದ ಬಗ್ಗೆ ದಾಖಲೆ ನೀಡದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹಣ ಜಪ್ತಿ ಮಾಡಿಕೊಂಡಿದ್ದಾರೆ.
ಉತ್ತರಪ್ರದೇಶದ ನೋಯ್ಡಾ ನಿವಾಸಿ ನಿತೀನ್ ಮೇಶವಾಡೆ ಎಂಬುವರಿಗೆ ಸೇರಿದ ಹಣ ಇದಾಗಿದೆ. ಹುಬ್ಬಳ್ಳಿಯಿಂದ ವಿಮಾನ ಮೂಲಕ ಬೆಂಗಳೂರಿಗೆ ತೆರಳಲು ವಿಮಾನ ನಿಲ್ದಾಣಕ್ಕೆ ನಿತೀನ್ ಆಗಮಿಸಿದ್ದರು.
ಬ್ಯಾಗೇಜ್ ಸ್ಕ್ಯಾನರ್ನಲ್ಲಿ ಬ್ಯಾಗ್ ಪರಿಶೀಲನೆ ಮಾಡುವಾಗ ಬ್ಯಾಗ್ನಲ್ಲಿ ಹಣ ಇರುವುದು ಕಂಡುಬಂದಿದೆ. ತಕ್ಷಣ ಬ್ಯಾಗ್ ಮಾಲೀಕರನ್ನು ವಿಚಾರಣೆಗೆ ಒಳಪಡಿಸಿದ ವಿಮಾನ ನಿಲ್ದಾಣ ಸಿಬ್ಬಂದಿ, ತಕ್ಷಣ ಗೋಕುಲ್ರೋಡ್ ಠಾಣೆ ಹಾಗೂ ಚುನಾವಣಾಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.
ನಿಲ್ದಾಣಕ್ಕೆ ಆಗಮಿಸಿದ ಫ್ಲೈಯಿಂಗ್ ಸ್ಕ್ವಾಡ್ ಹಾಗೂ ಪೊಲೀಸರು ಹಣದ ಬಗ್ಗೆ ದಾಖಲೆ ನೀಡದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಹಣ ಜಪ್ತಿ ಮಾಡಿಕೊಂಡಿದ್ದಾರೆ.