ಆ್ಯಪ್ನಗರ

ಬಂದ್‌ಗೆ ಎಐಡಿಎಸ್‌ಓ ಬೆಂಬಲ

ಧಾರವಾಡ :ಪೆಟ್ರೋಲ್‌ ಉತ್ಪನ್ನಗಳ ಮತ್ತು ದಿನ ಬಳಕೆ ವಸ್ತುಗಳ ತೀವ್ರ ಬೆಲೆ ಏರಿಕೆ ವಿರೋಧಿಸಿ ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಹಾಗೂ ರೈತರ ಉತ್ಪನ್ನಗಳಿಗೆ ನಿಗದಿತ ಬೆಂಬಲ ಬೆಲೆ ಘೋಷಿಸಲು ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್‌ ಮತ್ತು ಇತರೆ ಎಡ ಪಕ್ಷ ಗಳು ಸೆ.10 ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಎಐಡಿಎಸ್‌ಓ ಬೆಂಬಲ ವ್ಯಕ್ತಪಡಿಸಿದೆ.

Vijaya Karnataka 10 Sep 2018, 5:00 am
ಧಾರವಾಡ :ಪೆಟ್ರೋಲ್‌ ಉತ್ಪನ್ನಗಳ ಮತ್ತು ದಿನ ಬಳಕೆ ವಸ್ತುಗಳ ತೀವ್ರ ಬೆಲೆ ಏರಿಕೆ ವಿರೋಧಿಸಿ ಮತ್ತು ರೈತರ ಸಂಪೂರ್ಣ ಸಾಲ ಮನ್ನಾ ಹಾಗೂ ರೈತರ ಉತ್ಪನ್ನಗಳಿಗೆ ನಿಗದಿತ ಬೆಂಬಲ ಬೆಲೆ ಘೋಷಿಸಲು ಆಗ್ರಹಿಸಿ ಎಸ್‌ಯುಸಿಐ ಕಮ್ಯುನಿಸ್ಟ್‌ ಮತ್ತು ಇತರೆ ಎಡ ಪಕ್ಷ ಗಳು ಸೆ.10 ರಂದು ಕರೆ ನೀಡಿರುವ ಅಖಿಲ ಭಾರತ ಮುಷ್ಕರಕ್ಕೆ ಎಐಡಿಎಸ್‌ಓ ಬೆಂಬಲ ವ್ಯಕ್ತಪಡಿಸಿದೆ.
Vijaya Karnataka Web aidso support for the bands
ಬಂದ್‌ಗೆ ಎಐಡಿಎಸ್‌ಓ ಬೆಂಬಲ


ಪೆಟ್ರೋಲ್‌ ಉತ್ಪನ್ನಗಳ ಅನಪೇಕ್ಷಿತ ಏರಿಕೆಯಿಂದಾಗಿ ಪ್ರಯಾಣ ದರ ,ಅಧ್ಯಯನ ಸಾಮಗ್ರಿಗಳ ಬೆಲೆ ಮತ್ತು ಭೋಜನ ವೆಚ್ಚ ಇತರೆ ಎಲ್ಲದರ ಬೆಲೆಗಳು ಹೆಚ್ಚಾಗಿ ಗಾಯದ ಮೇಲೆ ಭರೇ ಎಳೆದಂತೆ ಜನರ ಸಂಕಷ್ಟವನ್ನು ಇನ್ನು ಅಧಿಕಗೊಳಿಸುತ್ತದೆ ರಾಜ್ಯದ ಎಲ್ಲಾ ವಿದ್ಯಾರ್ಥಿಗಳು ತಮ್ಮ ಜವಾಬ್ದಾರಿಯನ್ನು ಅರಿತು ತರಗತಿಗಳನ್ನು ಬಹಿಷ್ಕರಿಸಿ ಮುಷ್ಕರದಲ್ಲಿ ಭಾಗವಹಿಸಲು ಎಸ್‌ಯುಸಿಐ ಜಿಲ್ಲಾ ಜಂಟಿ ಕಾರ್ಯದರ್ಶಿ ಮಹಾಂತೇಶ ಬಿಳೂರ ಪ್ರಕಟಣೆಯಲ್ಲಿ ಕೋರಿದ್ದಾರೆ.

ಎನ್‌ಸಿಆರ್‌ಎಚ್‌ಎಸ್‌

ಭಾರತ್‌ ಬಂದ್‌ಗೆ ನವನಗರದ ಎನ್‌ಸಿಆರ್‌ಎಚ್‌ಎಸ್‌ ದಳದಿಂದ ಬೆಂಬಲ ವ್ಯಕ್ತಪಡಿಸಿ ಸೆ.10 ರಂದು ಬೆಳಗ್ಗೆ 11ಕ್ಕೆ ಇಲ್ಲಿನ ಜುಬ್ಲಿ ವೃತ್ತದಲ್ಲಿ ಶಾಂತಿಯುತ ಪ್ರತಿಭಟನೆ ಹಮ್ಮಿಕೊಂಡಿದೆ. ಈ ವೇಳೆ ಸಂಸ್ಥೆಯ ಪದಾಧಿಕಾರಿಗಳು ಆಗಮಿಸಬೇಕು ಎಂದು ಸಂಸ್ಥೆಯ ಅಧ್ಯಕ್ಷ ರವಿ ಹಂದಿಗೋಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ