ಆ್ಯಪ್ನಗರ

ಶಿಕ್ಷಕ ವೃತ್ತಿಗೆ ಎಲ್ಲ ಕಾಲದಲ್ಲೂ ಗೌರವ

ಧಾರವಾಡ : ಸಮಾಜದಲ್ಲಿಬದಲಾವಣೆ ತರಬಲ್ಲಅದಮ್ಯ ಶಕ್ತಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿಗೆ ಎಲ್ಲಕಾಲದಲ್ಲೂಗೌರವ ಸ್ಥಾನವಿದೆ. ಶಿಕ್ಷಕರನ್ನು ಗೌರವಿಸುವುದೆಂದರೆ ಒಂದು ಸಂಸ್ಕೃತಿಯನ್ನೇ ಗೌರವಿಸಿದಂತೆ ಎಂದು ವಿದ್ವಾಂಸ ಡಾ.ಗುರುಲಿಂಗ ಕಾಪಸೆ ಹೇಳಿದರು.

Vijaya Karnataka 10 Sep 2019, 5:00 am
ಧಾರವಾಡ : ಸಮಾಜದಲ್ಲಿಬದಲಾವಣೆ ತರಬಲ್ಲಅದಮ್ಯ ಶಕ್ತಿ ಶಿಕ್ಷಕರ ಮೇಲಿದೆ. ಶಿಕ್ಷಕ ವೃತ್ತಿಗೆ ಎಲ್ಲಕಾಲದಲ್ಲೂಗೌರವ ಸ್ಥಾನವಿದೆ. ಶಿಕ್ಷಕರನ್ನು ಗೌರವಿಸುವುದೆಂದರೆ ಒಂದು ಸಂಸ್ಕೃತಿಯನ್ನೇ ಗೌರವಿಸಿದಂತೆ ಎಂದು ವಿದ್ವಾಂಸ ಡಾ.ಗುರುಲಿಂಗ ಕಾಪಸೆ ಹೇಳಿದರು.
Vijaya Karnataka Web all time honors for the teaching profession
ಶಿಕ್ಷಕ ವೃತ್ತಿಗೆ ಎಲ್ಲ ಕಾಲದಲ್ಲೂ ಗೌರವ


ನಗರದ ಕರ್ನಾಟಕ ವಿದ್ಯಾವರ್ಧಕ ಸಂಘವು ಸೋಮವಾರ ಹಮ್ಮಿಕೊಂಡ ಶಿವಗಂಗಾ ಮತ್ತು ವೀರಪ್ಪ ರಾಮಾಪೂರ ದತ್ತಿ ಉದ್ಘಾಟನೆ ಹಾಗೂ ಆದರ್ಶ ಶಿಕ್ಷಕ ದಂಪತಿ ಪುರಸ್ಕಾರ ಪ್ರದಾನ ಸಮಾರಂಭದಲ್ಲಿಅಧ್ಯಕ್ಷತೆ ವಹಿಸಿ ಮಾತನಾಡಿದರು.

ಶಿಕ್ಷಕ ವೃತ್ತಿ ಲಾಭಕ್ಕಾಗಿ ಅಲ್ಲ. ಆತ್ಮತೃಪ್ತಿಗಾಗಿ ಇರಬೇಕು. ಸಮರ್ಥ ಶಿಕ್ಷಕರು ಮಾತ್ರ ಮಗು, ಸಮಾಜ, ದೇಶ ರಕ್ಷಕರು ಎಂದರು.

ಹಿರಿಯ ಸಾಹಿತಿ ರಾಮಚಂದ್ರ ಪಾಟೀಲ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಕರು ಬೋಧನಾ ಕೌಶಲ್ಯದ ಶಾಸ್ತ್ರೀಯ ಜ್ಞಾನ ಹೊಂದಿರಬೇಕು. ಶಿಕ್ಷಕರ ಯಶಸ್ವಿ ಪಾಠ ಬೋಧನೆಯೂ ಒಳ್ಳೆಯ ಹೃದಯವಂತಿಕೆ ಅವಲಂಬಿಸಿದೆ. ಮಕ್ಕಳಿಗೆ ಇಂದು ಬೇಕಿರುವುದು ಬದುಕುವ ಶಿಕ್ಷಣ ಎಂದು ಹೇಳಿದರು.

ಆದರ್ಶ ಶಿಕ್ಷಕ ದಂಪತಿ ಪುರಸ್ಕಾರಕ್ಕೆ ಪುರಸ್ಕೃತರಾದ ಅಶೋಕ ನಾಡಿಗೇರ್‌ ಮಾತನಾಡಿ, ಮನುಷ್ಯನಿಗೆ ಜೀವನದಲ್ಲಿಸಂಸ್ಕಾರ ಮುಖ್ಯ. ಸಂಸ್ಕಾರವಿಲ್ಲದ ಬದುಕಿಗೆ ಭವಿಷ್ಯವಿಲ್ಲಎಂದರು.

ಧಾರವಾಡ ಗ್ರಾಮೀಣ ಕ್ಷೇತ್ರ ಶಿಕ್ಷಣಾಧಿಕಾರಿ ವಿದ್ಯಾ ನಾಡಿಗೇರ ಪುರಸ್ಕಾರ ಸ್ವೀಕರಿಸಿ ಮಾತನಾಡಿ, ಜಗತ್ತಿನಲ್ಲಿಶಿಕ್ಷಕ ವೃತ್ತಿಗೆ ಸಮಾನವಾದ ಇನ್ನೊಂದು ವೃತ್ತಿ ಇಲ್ಲಎಂದರು.

ದತ್ತಿ ದಾನಿಗಳಾದ ಡಾ.ಲಿಂಗರಾಜ ರಾಮಾಪೂರ್‌, ಶಿವಗಂಗಾ ಮತ್ತು ವೀರಪ್ಪ ರಾಮಾಪೂರ ದಂಪತಿ, ಕವಿವ ಸಂಘದ ಕಾರ್ಯಾಧ್ಯಕ್ಷ ಶಿವಣ್ಣ ಬೆಲ್ಲದ, ಸದಾನಂದ ಶಿವಳ್ಳಿ, ಶಿವಾನಂದ ಭಾವಿಕಟ್ಟಿ, ಮನೋಜ ಪಾಟೀಲ, ವೀರಣ್ಣ ಒಡ್ಡೀನ ಸೇರಿದಂತೆ ಇತರರು ಇದ್ದರು. ಭಾರತಿ ಮನ್ನಿಕೇರಿ ಪ್ರಾರ್ಥಿಸಿದರು. ಪ್ರಕಾಶ ಉಡಿಕೇರಿ ಸ್ವಾಗತಿಸಿದರು. ಕೃಷ್ಣ ಜೋಶಿ ಪ್ರಾಸ್ತಾವಿಸಿದರು. ನಿಂಗಣ್ಣ ಕುಂಟಿ ನಿರೂಪಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ