ಆ್ಯಪ್ನಗರ

ಅಲ್ಲಾಪುರ: ಮನೆಗಳಿಗೆ ನುಗ್ಗಿದ ನೀರು

ಕುಂದಗೋಳ : ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಶನಿವಾರ ಹಾಗೂ ಭಾನುವಾರ ಸುರಿದ ಮಳೆ ನೀರು ಗಟಾರ್‌ ಇಲ್ಲದೆ ರಸ್ತೆ ಮಧ್ಯೆಯೇ ಹರಿದು 10ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ.

Vijaya Karnataka 2 Jul 2019, 5:00 am
ಕುಂದಗೋಳ : ತಾಲೂಕಿನ ಅಲ್ಲಾಪುರ ಗ್ರಾಮದಲ್ಲಿ ಶನಿವಾರ ಹಾಗೂ ಭಾನುವಾರ ಸುರಿದ ಮಳೆ ನೀರು ಗಟಾರ್‌ ಇಲ್ಲದೆ ರಸ್ತೆ ಮಧ್ಯೆಯೇ ಹರಿದು 10ಕ್ಕೂ ಹೆಚ್ಚು ಮನೆಗಳಿಗೆ ನುಗ್ಗಿದೆ.
Vijaya Karnataka Web DRW-1KND4
ಕುಂದಗೋಳ ತಾಲೂಕು ಅಲ್ಲಾಪುರ ಗ್ರಾಮದಲ್ಲಿ ಸುರಿದ ಮಳೆಯಿಂದ ಮನೆಗಳಿಗೆ ನುಗ್ಗಿದ ನೀರು.


ಗ್ರಾಮದ ನಿಂಗಪ್ಪ ಹೊರಟ್ಟಿ, ಸಿದ್ದು ಯಲಿವಾಳ, ನಿಂಗಪ್ಪ ಯಲಿವಾಳ, ರಾಜು ನದಾಫ್‌, ಈರಪ್ಪ ದಳವಾಯಿ, ಗುರುಸಿದ್ದಪ್ಪ ಕಟವಿ ಅವರ ಮನೆಗಳು ಸೇರಿದಂತೆ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಗ್ರಾಮ ಚಿಕ್ಕದಾಗಿದ್ದರೂ ಕಾಂಕ್ರೀಟ್‌ ರಸ್ತೆ ಇದೆ. ಆದರೆ ಪಕ್ಕದಲ್ಲೇ ಗಟಾರ್‌ ಇಲ್ಲದ್ದರಿಂದ ಮಳೆ ನೀರು ಮನೆಗೆ ನುಗ್ಗಿ, ಸಾಕಷ್ಟು ಅವಾಂತರ ಸೃಷ್ಟಿಸಿದೆ. ಮನೆಯಲ್ಲಿನ ನೀರು ಹೊರ ಹಾಕಲು ಪರದಾಡುವಂತಾಗಿ, ಯುವಕರು ನೀರನ್ನು ಬೇರೆಡೆಗೆ ಸಾಗಿಸಲು ಯತ್ನಿಸಿದರು. ಇದರಿಂದ ಸಂಚಾರಕ್ಕೆ ತೊಂದರೆಯಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಇತ್ತ ಗಮನ ಹರಿಸದಿರುವುದು ಸೋಚನೀಯ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ