ಆ್ಯಪ್ನಗರ

ಸಚಿವ ಕುಲಕರ್ಣಿ ವಿರುದ್ಧ ಆರೋಪ ಬೇಸ್‌ಲೆಸ್‌: ಸಿದ್ದರಾಮಯ್ಯ

ಯೋಗಿಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿನಯ್ ಕುಲಕರ್ಣಿ ಮೇಲಿನ ಎಲ್ಲ ಆರೋಪಗಳು ಬೇಸಲೆಸ್. ರಾಜಕೀಯಗೋಸ್ಕರ ಆರೋಪಗಳನ್ನು ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿ ಸಂಧಾನಕ್ಕೆ ಹೋಗಿರುವ ಬಗ್ಗೆಯೂ ಯಾವುದೇ ದಾಖಲೆಗಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

Vijaya Karnataka Web 1 Dec 2017, 4:26 pm
ಹುಬ್ಬಳ್ಳಿ: ಯೋಗಿಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ವಿನಯ್ ಕುಲಕರ್ಣಿ ಮೇಲಿನ ಎಲ್ಲ ಆರೋಪಗಳು ಬೇಸಲೆಸ್. ರಾಜಕೀಯಗೋಸ್ಕರ ಆರೋಪಗಳನ್ನು ಮಾಡಲಾಗುತ್ತಿದೆ. ಪೊಲೀಸ್ ಅಧಿಕಾರಿ ಸಂಧಾನಕ್ಕೆ ಹೋಗಿರುವ ಬಗ್ಗೆಯೂ ಯಾವುದೇ ದಾಖಲೆಗಳಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
Vijaya Karnataka Web allegation against vinay kulkarni is baseless cm
ಸಚಿವ ಕುಲಕರ್ಣಿ ವಿರುದ್ಧ ಆರೋಪ ಬೇಸ್‌ಲೆಸ್‌: ಸಿದ್ದರಾಮಯ್ಯ


ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಕುಟುಂಬದವರು ಸಿಬಿಐ ತನಿಖೆಗೆ ಕೇಳಿದಾಕ್ಷಣ ಕೊಡಲಾಗುವುದಿಲ್ಲ. ಆದರೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನನ್ನನ್ನು ಬಚ್ಚಾ ಅನ್ನುವ ಯಡಿಯೂರಪ್ಪ ಏನು ಮೇಧಾವಿಯೇ, ಆತನಿಗೇನು ಗೊತ್ತಿದೆ ರಾಜಕೀಯ. ಯಾವ ಸಿದ್ಧಾಂತ, ತತ್ವ ಅವನಲ್ಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಯೋಗಿಶ್ ಗೌಡ ಕೊಲೆ ಪ್ರಕರಣದ ವಿಚಾರಣೆ ಸೆಷನ್ಸ್‌ ಕೋರ್ಟ್‌ನಲ್ಲಿ ನಡೆಯುತ್ತಿದೆ. ಸಚಿವರ ಕೈವಾಡದ ಬಗ್ಗೆ ಯಾವ ದಾಖಲೆ ಇದೆ‌. ಪೊಲೀಸ್ ಅಧಿಕಾರಿಯ ಸಂಧಾನಕ್ಕೆ ಯಾವುದೇ ದಾಖಲೆಗಳು ಇಲ್ಲ. ದಾಖಲೆ ಇದ್ದರೆ ಕೊಡಿ ಎಂದು ಸಿಎಂ ಹೇಳಿದರು. ದಾಖಲೆ ಎಲ್ಲಿಗೆ ತಲುಪಿಸಬೇಕು ಎಂಬ ಚಾನೆಲ್‌ನ ಪ್ರಶ್ನೆಗೆ 'ನನ್ನ ಕಚೇರಿಗೆ ತಲುಪಿಸಿ,'ಎಂದು ಸಿಎಂ ಉತ್ತರಿಸಿದರು.

ಪ್ರಕರಣದಲ್ಲಿ ವಕೀಲರಿಗೆ ಧಮ್ಕಿ ಹಾಕಿದ್ದು, ಸಂಧಾನ ಸಭೆ ನಡೆಸಿದ್ದನ್ನು ವಿನಯ್ ಕುಲಕರ್ಣಿ ಒಪ್ಪಿಕೊಂಡಿದ್ದಾರಾಲ್ಲ ಎಂಬ ಪ್ರಶ್ನೆಗೆ, ಅವರನ್ನೇ ಕೇಳಿ ಎಂದು ಸಿದ್ದರಾಮಯ್ಯ ಜಾರಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ