ಆ್ಯಪ್ನಗರ

ಮುನ್ಸೂಚನೆ ಇಲ್ಲದೇ ದಾರಿ ಬಂದ್‌: ಆರೋಪ

ಧಾರವಾಡ : ದಡ್ಡಿ ಕಮಲಾಪೂರ ಬಳಿ ಇರುವ ಮಹಿಷಿ ಟ್ರಸ್ಟ್‌ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರಕ್ಕೆ ಇರುವ ಏಕೈಕ ದಾರಿಯನ್ನು ಕಂದಾಯ ಅಧಿಕಾರಿಗಳು ಯಾವುದೇ ಮನ್ಸೂಚನೆ ನೀಡದ ಸೋಮವಾರ ದಿಢೀರ್‌ ಬಂದ್‌ ಮಾಡಿದ್ದಾರೆ ಎಂದು ಮಹಿಷಿ ಟ್ರಸ್ಟ್‌ ತಿಳಿಸಿದೆ.

Vijaya Karnataka 16 Jul 2019, 5:00 am
ಧಾರವಾಡ : ದಡ್ಡಿ ಕಮಲಾಪೂರ ಬಳಿ ಇರುವ ಮಹಿಷಿ ಟ್ರಸ್ಟ್‌ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರಕ್ಕೆ ಇರುವ ಏಕೈಕ ದಾರಿಯನ್ನು ಕಂದಾಯ ಅಧಿಕಾರಿಗಳು ಯಾವುದೇ ಮನ್ಸೂಚನೆ ನೀಡದ ಸೋಮವಾರ ದಿಢೀರ್‌ ಬಂದ್‌ ಮಾಡಿದ್ದಾರೆ ಎಂದು ಮಹಿಷಿ ಟ್ರಸ್ಟ್‌ ತಿಳಿಸಿದೆ.
Vijaya Karnataka Web DRW-15RANGA11
ಧಾರವಾಡ ದಡ್ಡಿ ಕಮಲಾಪೂರ ಬಳಿ ಇರುವ ಮಹಿಷಿ ಟ್ರಸ್ಟ್‌ ಯೋಗ ಮತ್ತು ನಿಸರ್ಗ ಚಿಕಿತ್ಸಾ ಕೇಂದ್ರದ ದಾರಿಯನ್ನು ಕಂದಾಯ
ಅಧಿಕಾರಿಗಳು ಜೆಸಿಬಿ ಮೂಲಕ ತಗ್ಗು ತೋಡಿರುವುದು.


ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರಿ, ಜೆಸಿಬಿ ಬಳಸಿದ ತಹಸೀಲ್ದಾರ ನೇತೃತ್ವದ ತಂಡ ಆಸ್ಪತ್ರೆಗೆ ಇದ್ದ ಮಾರ್ಗದ ಮೂರು ಕಡೆ ತಗ್ಗು ತೋಡಿದ್ದು ಆಸ್ಪತ್ರೆಗೆ ಬರುವವರು ಪರದಾಡುವಂತೆ ಮಾಡಿದೆ. ಯಾವುದೇ ಮುನ್ನೆಚ್ಚರಿಕೆ ನೊಟೀಸ್‌ ನೀಡದೇ ಅಧಿಕಾರಿಗಳು ಈ ರೀತಿ ಮಾಡಿದ್ದಾರೆ. ಹೀಗಾಗಿ ಕೂಡಲೇ ಜಿಲ್ಲಾಧಿಕಾರಿಗಳು ಮಧ್ಯ ಪ್ರವೇಶ ಮಾಡಿ ಅಗತ್ಯ ಅನುಕೂಲ ಮಾಡಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರಕೃತಿ ಚಿಕತ್ಸಾ ಕೇಂದ್ರಕ್ಕೆ ಧಾರವಾಡ-ಅಳ್ನಾವರ ಹೆದ್ದಾರಿಯಿಂದ ದಾರಿ ಇರಲಿಲ್ಲ.2003 ರಲ್ಲಿ ಅಂದಿನ ಜಿಲ್ಲಾಧಿಕಾರಿಗಳು ಸರಕಾರಿ ಜಾಗೆಯಲ್ಲಿ ದಾಟಿಕೊಂಡು ಹೋಗುವುದಕ್ಕೆ ಅನುಮತಿ ನೀಡಿದ್ದರು. ಮತ್ತು ಇದನ್ನು ಕಾಯಂ ಆಗಿ ಬಳಸಿಕೊಳ್ಳುವಂತೆ ಅಧಿಕೃತವಾಗಿ ಪತ್ರವನ್ನು ಯೋಗ ಚಿಕಿತ್ಸಾ ಕೇಂದ್ರಕ್ಕೆ ನೀಡಿದ್ದರು. ಈ ವರೆಗೂ ಅದೇ ರೀತಿಯಾಗಿ ಮಾರ್ಗವಿತ್ತು. ಆದರೆ ಇದ್ದಕ್ಕಿದ್ದಂತೆ ಇದೀಗ ಇದು ಸರಕಾರದ ಜಾಗೆ, ಇಲ್ಲಿ ನಿಮ್ಮ ಹಕ್ಕಿನ ಯಾವ ಪತ್ರವೂ ನಮ್ಮ ಬಳಿ ಇಲ್ಲ. ಕೂಡಲೇ ಇದನ್ನು ತೆರವುಗೊಳಿಸಿ ಎಂದು ಸ್ಥಳದಲ್ಲಿಯೇ ಎಚ್ಚರಿಕೆ ನೀಡಿದ್ದಾರೆ ಇದರಿಂದ ಜನರಿಗೆ ತೊಂದರೆಯಾಗಿದೆ ಎಂದು ಅವರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ