ಆ್ಯಪ್ನಗರ

ತರಕಾರಿ ವ್ಯಾಪಾರಸ್ಥರ ಸ್ಥಳಾಂತರಕ್ಕೆ ಮಾ.31ರವರೆಗೆ ಅವಕಾಶ

ಧಾರವಾಡ : ಹಳೆ ಎಪಿಎಂಸಿ ಬಳಿಯ ತರಕಾರಿ ವ್ಯಾಪಾರಸ್ಥರು ಮಾ.31ರೊಳಗೆ ನೂತನ ಎಪಿಎಂಸಿಗೆ ಸ್ಥಳಾಂತರಗೊಳ್ಳದಿದ್ದರೆ ಅವರ ಅಂಗಡಿಗಳನ್ನು ಮುಟ್ಟುಗೋಲು ಹಾಕುವುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಹಾವೀರ ಜೈನರ್‌ ಎಚ್ಚರಿಕೆ ನೀಡಿದರು.

Vijaya Karnataka 10 Feb 2019, 5:00 am
ಧಾರವಾಡ : ಹಳೆ ಎಪಿಎಂಸಿ ಬಳಿಯ ತರಕಾರಿ ವ್ಯಾಪಾರಸ್ಥರು ಮಾ.31ರೊಳಗೆ ನೂತನ ಎಪಿಎಂಸಿಗೆ ಸ್ಥಳಾಂತರಗೊಳ್ಳದಿದ್ದರೆ ಅವರ ಅಂಗಡಿಗಳನ್ನು ಮುಟ್ಟುಗೋಲು ಹಾಕುವುದಾಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಹಾವೀರ ಜೈನರ್‌ ಎಚ್ಚರಿಕೆ ನೀಡಿದರು.
Vijaya Karnataka Web allowing vegetarian traders to mobilize until 31st may
ತರಕಾರಿ ವ್ಯಾಪಾರಸ್ಥರ ಸ್ಥಳಾಂತರಕ್ಕೆ ಮಾ.31ರವರೆಗೆ ಅವಕಾಶ


ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೂತನ ಎಪಿಎಂಸಿಯಲ್ಲಿ ವ್ಯಾಪಾರಸ್ಥರಿಗೆ 93 ಅಂಗಡಿ ನೀಡಲಾಗಿದೆ. ಈಗಾಗಲೇ ಸ್ಥಳಾಂತರವಾಗುವಂತೆ ನೋಟಿಸ್‌ ನೀಡಿದರೂ ಸೂಕ್ತ ಸ್ಪಂದನೆ ನೀಡದ ಕಾರಣ ಕೆಲವರ ಪರವಾನಗಿ ಅಮಾನತ್ತಿನಲ್ಲಿಡಲಾಗಿತ್ತು. ಫೆ.5ರಂದು 5ಜನರ ಎಪಿಎಂಸಿ ಲೈಸನ್ಸ್‌ ರದ್ದು ಮಾಡಲಾಗಿದೆ ಎಂದು ತಿಳಿಸಿದರು.

ಕಳೆದ 2 ದಿನಗಳ ಹಿಂದೆ ನಡೆದ ಸಭೆಯಲ್ಲಿ ವ್ಯಾಪಾರಸ್ಥರು ಸ್ಥಳಾಂತರಕ್ಕೆ 6 ತಿಂಗಳು ಅವಕಾಶ ಕೇಳಿದ್ದರು. ಆದರೆ, ಇದಕ್ಕೆ ಒಪ್ಪಿಗೆ ನೀಡದೆ ಮಾ.31ರವರೆಗೆ ಅವಕಾಶ ನೀಡಲಾಗಿದೆ. ಒಂದು ವೇಳೆ ನಿಗದಿತ ದಿನಾಂಕದಂದು ಬರದಿದ್ದರೆ ಎಪಿಎಂಸಿ ಕಾಯ್ದೆ ಪ್ರಕಾರ ಅಂಗಡಿ ಮುಟ್ಟುಗೋಲು ಹಾಕಲು ನಿರ್ಧರಿಸಲಾಗಿದೆ ಎಂದರು.

ವ್ಯಾಪಾರಸ್ಥರು ರೈತರಿಗೆ ಕೇವಲ ಬಿಳಿ ಚೀಟಿ ಮೇಲೆ ಬಿಲ್‌ ಬರೆದು ಕೊಟ್ಟರೆ ಸಾಲದು. ಪರವಾನಗಿ, ಅಂಗಡಿ ಸಂಖ್ಯೆ ಹೊಂದಿರುವ ಅಧಿಕೃತ ಬಿಲ್‌ ಮೂಲಕ ಹಣದ ವ್ಯವಹಾರ ನಡೆಸುವಂತೆ ಎಚ್ಚರಿಕೆ ನೀಡಲಾಗುವುದು ಎಂದರು.

ರೈತರಿಂದ ಅನಧಿಕೃತವಾಗಿ ಕಮೀಶನ್‌ ಪಡೆಯುವ ಕುರಿತು ಏಪ್ರಿಲ್‌ನಿಂದ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗುತ್ತೇವೆ. ಅಂಗಡಿಗಳ ಬಾಡಿಗೆ ನೀಡಬೇಕಿರುವ ಹಾಗೂ ಬೇರೆಯವರಿಗೆ ಅಂಗಡಿ ಬಾಡಿಗೆ ನೀಡಿರುವ ಬಗ್ಗೆ ವಿಚಾರಿಸಲು ತೀರ್ಮಾನಿಸಲಾಗಿದೆ. ಬಾಡಿಗೆ ಪಡೆದು ಬೇರೆಯವರಿಗೆ ನೀಡಿದವರ ಬಗ್ಗೆ ಸಮಗ್ರ ಪರಿಶೀಲಿಸಲಾಗುವುದು. ಒಂದು ವೇಳೆ ಅಂಗಡಿದಾರರು ಎಪಿಎಂಸಿ ಕಾಯ್ದೆಗೆ ವಿರುದ್ಧವಾಗಿ ನಡೆದುಕೊಂಡಲ್ಲಿ 15ದಿನದೊಳಗೆ ಅಂಗಡಿಗೆ ಬೀಗ ಹಾಕಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಅಧ್ಯಕ್ಷ ಸಿದ್ದಪ್ಪ ಪ್ಯಾಟಿ, ಉಪಾಧ್ಯಕ್ಷೆ ಬಸವ್ವ ಶಿರಕೋಳ, ಸದಸ್ಯರಾದ ರೇಣುಕಾ ಕಳ್ಳಿಮನಿ, ಬಸಪ್ಪ ಮೇಗಡೆ, ಅಜ್ಜಪ್ಪಗೌಡ ಪಾಟೀಲ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ