ಧಾರವಾಡ :ನಗರದ ಡಾ. ವಿರೇಂದ್ರ ಹೆಗ್ಗಡೆ ಕಲಾಕ್ಷೇತ್ರದಲ್ಲಿ ಶನಿವಾರ ಎಸ್ಡಿಎಂ ದಂತ ಮಹಾವಿದ್ಯಾಲಯ ಮತ್ತು ಆಸ್ಪತ್ರೆಯ 28ನೇ ಪದವಿ ಪ್ರದಾನ ಸಮಾರಂಭ ನಡೆಯಿತು. ಈ ವೇಳೆ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಿದ ತುಮಕೂರಿನ ಶ್ರೀ ಸಿದ್ದಾರ್ಥ ಅಕಾಡೆಮಿ ಆಫ್ ಹೈಯರ್ ಏಜುಕೇಶನ ಕುಲಪತಿ ಡಾ.ಬಾಲಕೃಷ್ಣ ಪಿ. ಶೆಟ್ಟಿ ಮಾತನಾಡಿ, ಪದವಿ ಪಡೆದ ಮೇಲೆ ನಿಜವಾದ ಜೀವನ ಆರಂಭ ಆಗುತ್ತದೆ, ಈವರೆಗೆ ಪಾಲಕರ ಜವಾಬ್ದಾರಿಯಲ್ಲಿದ್ದ ನೀವು ಇನ್ನುಮೇಲೆ ಸ್ವತಂತ್ರ ಬದುಕು ಕಟ್ಟಿಕೊಳ್ಳಲು ನಿರಂತರ ಕೆಲಸ ಮಾಡಬೇಕು ಎಂದು ವಿದ್ಯಾರ್ಥಿಗಳನ್ನು ಹುರುದುಂಬಿಸಿದರು.
ಆಸ್ಪತ್ರೆಗೆ ಬಂದ ಜನರ ಮುಖದಲ್ಲಿ ನಗು ಅರಳಿಸುವುದೇ ದಂತ ವೈದ್ಯರ ಪ್ರಮುಖ ಕಾರ್ಯ. ದೇಹವನ್ನು ಸದೃಢವಾಗಿ ಬೆಳೆಸುವುದರಿಂದ ವ್ಯಕ್ತಿ ಆರೋಗ್ಯಕರವಾಗಿರುವುದಿಲ್ಲ. ಯಾವ ವ್ಯಕ್ತಿ ಬೆಳಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡುವನೋ ಅವನೇ ನಿಜವಾದ ಆರೋಗ್ಯಕರ ಮತ್ತು ಸಂತೋಷದಾಯಕ ವ್ಯಕ್ತಿ ಎಂದು ಬದುಕಿನ ಗುಟ್ಟನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಯಾವುದೇ ಶಿಕ್ಷ ಣ ಸಂಸ್ಥೆ ದೇಶಾದ್ಯಂತ ಉತ್ತಮ ಹೆಸರು ಗಳಿಸಲು ಕುಲಪತಿ, ಪ್ರಾಚಾರ್ಯರು, ಆಡಳಿತ ಮಂಡಳಿ ಕಾರಣವಲ್ಲ. ವಿದ್ಯಾರ್ಥಿಗಳ ಉತ್ತಮ ಪ್ರಯತ್ನವೇ ಕಾರಣವಾಗಿದ್ದು ಈ ನಿಟ್ಟಿನಲ್ಲಿ ಸಂಸ್ಥೆ ಹೆಸರು ಉಳಿಸುವ ಮಹತ್ವದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
ಧರ್ಮ ಎಂದರೇ ಹಿಂದೂ, ಮುಸ್ಲಿಂ, ಕ್ರಿಶ್ಚಯನ್ ಅಲ್ಲ. ಧರ್ಮಾ ಎಂದರೆ ಕಾಯಕ ನಮ್ಮ ಕಾಯಕವೇ ನಮ್ಮನ್ನು ರಕ್ಷಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಮುಂದಿನ ಅವಕಾಶಗಳ ಬಗ್ಗೆ ತಿಳಿಸಿ, ಶುಭಕೋರಿದರು.
ಅಧ್ಯಯನಶೀಲರಾಗಿ
ಪ್ರಾಚಾರ್ಯ ಡಾ. ಶ್ರೀನಾಥ ಠಾಕೂರ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ಸಾಧನೆ ಹಾಗೂ ವಿದ್ಯಾರ್ಥಿಗಳ ವೈಯಕ್ತಿಕ ಸಾಧನೆ ಪ್ರಸ್ತುತಪಡಿಸಿ, ವಿದ್ಯರ್ಥಿಗಳು ತಾವು ಕಂಡ ಕನಸುಗಳನ್ನು ನನಸಾಗಿಸಲು ಶ್ರಮವಹಿಸುವ ಮೂಲಕ ನಿರಂತರವಾಗಿ ಅಧ್ಯಯನಶೀಲರಾಗಬೇಕು ಎಂದರು.
ಎಸ್ಡಿಎಂ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ನಿರಂಜನಕುಮಾರ, ಪದಕ ವಿಜೇತರ ವಿದ್ಯಾರ್ಥಿಗಳ ಪರವಾಗಿ ಡಾ. ತನಿಷಾ ಕೌಲಾವಕರ ಮಾತನಾಡಿದರು. ಡಾ. ಬಲರಾಮ ನಾಯ್ಕ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿದರು.
ಎಸ್ಡಿಎಂ ಕಾರ್ಯದರ್ಶಿ ಜೀವಂಧರಕುಮಾರ, ಮಹಾವಿದ್ಯಾಲಯದ ಡೀನ್, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಪಾಲಕರು, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಡಾ.ಸಾಗರ ಪ್ರಾರ್ಥಿಸಿದರು. ರಶ್ಮಿತಾ, ಡಾ. ಐಶ್ವರ್ಯ ನಾಯಕ ನಿರೂಪಿಸಿದರು. ಡಾ. ಪ್ರೀತಾ ಶೆಟ್ಟಿ ವಂದಿಸಿದರು.
ಪದಕ ವಿಜೇತರ ಪಟ್ಟಿ
ಡಾ. ಡಿ. ವೀರೇಂದ್ರ ಹೆಗ್ಗಡೆ ಹೆಸರಿನ ಚಿನ್ನದ ಪದಕ ಸೇರಿದಂತೆ ಒಟ್ಟು 4 ಚಿನ್ನದ ಪದಕಗಳನ್ನು ಡಾ. ತನಿಷಾ ಕೌಲಾವಕರ ಪಡೆದರು. ಉಳಿದಂತೆ ಡಾ. ಐಶ್ವರ್ಯ ಶೆಟ್ಟಿ ಮೂರು ಪದಕ, ಡಾ. ಜೋನಿತಾ ಲೋಬೋ ಹಾಗೂ ಡಾ. ಅನುಷಾ ಸರ್ದೇಸಾಯಿ ತಲಾ ಎರಡು ಪದಕಗಳನ್ನು ಪಡೆದರು. ಉಳಿದಂತೆ ಡಾ. ಡಬ್ಲೂೃ.ಎಂ. ಶಕುಂತ ರತ್ನಪ್ರಿಯಾ, ಡಾ. ಅಕ್ಷ ತಾ ರೋಡಗಿ, ಡಾ. ಮೊಹಮ್ಮದ ಹ್ಯಾರಿಸ್ ಖಾನ್, ಡಾ. ಅಲೀಸಾ ವರೆಲ್ಲಾ, ಡಾ. ಶ್ಯಾಲಿ ಅಗರವಾಲ್ ಒಂದು ಚಿನ್ನದ ಪದಕ ಪಡೆದರು.
ಆಸ್ಪತ್ರೆಗೆ ಬಂದ ಜನರ ಮುಖದಲ್ಲಿ ನಗು ಅರಳಿಸುವುದೇ ದಂತ ವೈದ್ಯರ ಪ್ರಮುಖ ಕಾರ್ಯ. ದೇಹವನ್ನು ಸದೃಢವಾಗಿ ಬೆಳೆಸುವುದರಿಂದ ವ್ಯಕ್ತಿ ಆರೋಗ್ಯಕರವಾಗಿರುವುದಿಲ್ಲ. ಯಾವ ವ್ಯಕ್ತಿ ಬೆಳಗ್ಗೆಯಿಂದ ಸಂಜೆವರೆಗೆ ಕೆಲಸ ಮಾಡುವನೋ ಅವನೇ ನಿಜವಾದ ಆರೋಗ್ಯಕರ ಮತ್ತು ಸಂತೋಷದಾಯಕ ವ್ಯಕ್ತಿ ಎಂದು ಬದುಕಿನ ಗುಟ್ಟನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ಯಾವುದೇ ಶಿಕ್ಷ ಣ ಸಂಸ್ಥೆ ದೇಶಾದ್ಯಂತ ಉತ್ತಮ ಹೆಸರು ಗಳಿಸಲು ಕುಲಪತಿ, ಪ್ರಾಚಾರ್ಯರು, ಆಡಳಿತ ಮಂಡಳಿ ಕಾರಣವಲ್ಲ. ವಿದ್ಯಾರ್ಥಿಗಳ ಉತ್ತಮ ಪ್ರಯತ್ನವೇ ಕಾರಣವಾಗಿದ್ದು ಈ ನಿಟ್ಟಿನಲ್ಲಿ ಸಂಸ್ಥೆ ಹೆಸರು ಉಳಿಸುವ ಮಹತ್ವದ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ ಎಂದರು.
ಧರ್ಮ ಎಂದರೇ ಹಿಂದೂ, ಮುಸ್ಲಿಂ, ಕ್ರಿಶ್ಚಯನ್ ಅಲ್ಲ. ಧರ್ಮಾ ಎಂದರೆ ಕಾಯಕ ನಮ್ಮ ಕಾಯಕವೇ ನಮ್ಮನ್ನು ರಕ್ಷಿಸುತ್ತದೆ ಎಂದು ವಿದ್ಯಾರ್ಥಿಗಳಿಗೆ ಮುಂದಿನ ಅವಕಾಶಗಳ ಬಗ್ಗೆ ತಿಳಿಸಿ, ಶುಭಕೋರಿದರು.
ಅಧ್ಯಯನಶೀಲರಾಗಿ
ಪ್ರಾಚಾರ್ಯ ಡಾ. ಶ್ರೀನಾಥ ಠಾಕೂರ ಪ್ರಾಸ್ತಾವಿಕವಾಗಿ ಮಾತನಾಡಿ, ಕಾಲೇಜಿನ ಸಾಧನೆ ಹಾಗೂ ವಿದ್ಯಾರ್ಥಿಗಳ ವೈಯಕ್ತಿಕ ಸಾಧನೆ ಪ್ರಸ್ತುತಪಡಿಸಿ, ವಿದ್ಯರ್ಥಿಗಳು ತಾವು ಕಂಡ ಕನಸುಗಳನ್ನು ನನಸಾಗಿಸಲು ಶ್ರಮವಹಿಸುವ ಮೂಲಕ ನಿರಂತರವಾಗಿ ಅಧ್ಯಯನಶೀಲರಾಗಬೇಕು ಎಂದರು.
ಎಸ್ಡಿಎಂ ಮಹಾವಿದ್ಯಾಲಯದ ವೈದ್ಯಕೀಯ ನಿರ್ದೇಶಕ ಡಾ. ನಿರಂಜನಕುಮಾರ, ಪದಕ ವಿಜೇತರ ವಿದ್ಯಾರ್ಥಿಗಳ ಪರವಾಗಿ ಡಾ. ತನಿಷಾ ಕೌಲಾವಕರ ಮಾತನಾಡಿದರು. ಡಾ. ಬಲರಾಮ ನಾಯ್ಕ ವಿದ್ಯಾರ್ಥಿಗಳಿಗೆ ಪ್ರತಿಜ್ಞೆ ಬೋಧಿಸಿದರು.
ಎಸ್ಡಿಎಂ ಕಾರ್ಯದರ್ಶಿ ಜೀವಂಧರಕುಮಾರ, ಮಹಾವಿದ್ಯಾಲಯದ ಡೀನ್, ವಿವಿಧ ವಿಭಾಗಗಳ ಮುಖ್ಯಸ್ಥರು, ವಿದ್ಯಾರ್ಥಿಗಳು, ಪಾಲಕರು, ಸಿಬ್ಬಂದಿ ಸೇರಿದಂತೆ ಇತರರು ಇದ್ದರು.
ಡಾ.ಸಾಗರ ಪ್ರಾರ್ಥಿಸಿದರು. ರಶ್ಮಿತಾ, ಡಾ. ಐಶ್ವರ್ಯ ನಾಯಕ ನಿರೂಪಿಸಿದರು. ಡಾ. ಪ್ರೀತಾ ಶೆಟ್ಟಿ ವಂದಿಸಿದರು.
ಪದಕ ವಿಜೇತರ ಪಟ್ಟಿ
ಡಾ. ಡಿ. ವೀರೇಂದ್ರ ಹೆಗ್ಗಡೆ ಹೆಸರಿನ ಚಿನ್ನದ ಪದಕ ಸೇರಿದಂತೆ ಒಟ್ಟು 4 ಚಿನ್ನದ ಪದಕಗಳನ್ನು ಡಾ. ತನಿಷಾ ಕೌಲಾವಕರ ಪಡೆದರು. ಉಳಿದಂತೆ ಡಾ. ಐಶ್ವರ್ಯ ಶೆಟ್ಟಿ ಮೂರು ಪದಕ, ಡಾ. ಜೋನಿತಾ ಲೋಬೋ ಹಾಗೂ ಡಾ. ಅನುಷಾ ಸರ್ದೇಸಾಯಿ ತಲಾ ಎರಡು ಪದಕಗಳನ್ನು ಪಡೆದರು. ಉಳಿದಂತೆ ಡಾ. ಡಬ್ಲೂೃ.ಎಂ. ಶಕುಂತ ರತ್ನಪ್ರಿಯಾ, ಡಾ. ಅಕ್ಷ ತಾ ರೋಡಗಿ, ಡಾ. ಮೊಹಮ್ಮದ ಹ್ಯಾರಿಸ್ ಖಾನ್, ಡಾ. ಅಲೀಸಾ ವರೆಲ್ಲಾ, ಡಾ. ಶ್ಯಾಲಿ ಅಗರವಾಲ್ ಒಂದು ಚಿನ್ನದ ಪದಕ ಪಡೆದರು.