ಆ್ಯಪ್ನಗರ

ದಿ.ಎಸ್‌.ಎಸ್‌. ಶೆಟ್ಟರ್‌ ಜನಪರ ಕಾಳಜಿ ಅಪಾರ

ಹುಬ್ಬಳ್ಳಿ : ಬಹುತೇಕ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕವೇ ಬಗೆಹರಿಸುತ್ತಿದ್ದ ದಿ.ಎಸ್‌.ಎಸ್‌. ಶೆಟ್ಟರ್‌ ಅವರು ರಾಜಿ ವಕೀಲರೆಂದೇ ಖ್ಯಾತಿ ಪಡೆದಿದ್ದರು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.

Vijaya Karnataka 1 Feb 2019, 5:00 am
ಹುಬ್ಬಳ್ಳಿ : ಬಹುತೇಕ ವ್ಯಾಜ್ಯಗಳನ್ನು ರಾಜಿ ಸಂಧಾನದ ಮೂಲಕವೇ ಬಗೆಹರಿಸುತ್ತಿದ್ದ ದಿ.ಎಸ್‌.ಎಸ್‌. ಶೆಟ್ಟರ್‌ ಅವರು ರಾಜಿ ವಕೀಲರೆಂದೇ ಖ್ಯಾತಿ ಪಡೆದಿದ್ದರು ಎಂದು ಮಾಜಿ ಸಿಎಂ ಜಗದೀಶ ಶೆಟ್ಟರ್‌ ಹೇಳಿದರು.
Vijaya Karnataka Web news/dharawada
ದಿ.ಎಸ್‌.ಎಸ್‌. ಶೆಟ್ಟರ್‌ ಜನಪರ ಕಾಳಜಿ ಅಪಾರ


ನಗರದ ಕೃಷ್ಣ ಕಲ್ಯಾಣ ಮಂಟಪದಲ್ಲಿ ಕಸಾಪ ಮತ್ತು ಎಸ್‌ .ಎಸ್‌.ಶೆಟ್ಟರ ಫೌಂಡೇಶನ್‌ ಆಶ್ರಯದಲ್ಲಿ ಗುರುವಾರ ನಡೆದ ಎಸ್‌.ಎಸ್‌.ಶೆಟ್ಟರ್‌ ಸ್ಮಾರಕ ದತ್ತಿ ಉಪನ್ಯಾಸ ಹಾಗೂ ಸಾಧಕರಿಗೆ ಸನ್ಮಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ತಮ್ಮ ವಕೀಲ ವೃತ್ತಿಯ ಕೊನೆಯ ದಿನದವರೆಗೂ ವಕಾಲತ್ತಿಗೆ ಕಕ್ಷಿದಾರರಿಂದ ಹೆಚ್ಚಿನ ಹಣ ನಿರೀಕ್ಷಿಸುತ್ತಿರಲಿಲ್ಲ. ಅನೇಕರಿಗೆ ಉಚಿತವಾಗಿಯೇ ನ್ಯಾಯಕೊಡಿಸಿರುವ ಅವರು, ಬಡವರು, ನಿರ್ಗತಿಕರು ಹಾಗೂ ಅನ್ಯಾಯಕ್ಕೊಳಗಾದವರ ಬಗ್ಗೆ ಅಪಾರ ಕಾಳಜಿ ಹೊಂದಿದ್ದರು ಎಂದು ತಿಳಿಸಿದರು.

ಆದರ್ಶ ವಕೀಲರಾಗಿ ಹಾಗೂ ರಾಜಕಾರಣಿಯಾಗಿ ಎಸ್‌.ಎಸ್‌.ಶೆಟ್ಟರ್‌ ಅವರು ಮಾಡಿದ ಸೇವೆ ಅಪಾರವಾಗಿದೆ. ತಮ್ಮ ವೃತ್ತಿ ಜೀವನದ ಕೊನೆಯವರೆಗೂ ಒಂದೇ ಒಂದು ಕಪ್ಪು ಚುಕ್ಕೆ ತಮ್ಮನ್ನು ಅಂಟಿಕೊಳ್ಳದಂತೆ ಜೀವನ ಸಾಗಿಸಿದ್ದಾರೆ ಎಂದರು.

ಮಾದರಿ ವ್ಯಕ್ತಿ : 'ಅಪ್ಪಾ ಅಂದರೆ ಅಮೃತ' ವಿಷಯ ಕುರಿತು ಉಪನ್ಯಾಸದಲ್ಲಿ ಎಸ್‌.ಎಸ್‌.ಹರ್ಲಾಪೂರ ಮಾತನಾಡಿ, ಪ್ರಸ್ತುತ ವ್ಯಾಜ್ಯದ ವಕೀಲರ ಸಂಖ್ಯೆ ಹೆಚ್ಚಾಗುತ್ತಿದೆ. ರಾಜಿ ಮಾಡಿಸುವವರು ಕಡಿಮೆ ಆಗುತ್ತಿದ್ದಾರೆ. ದಿ.ಎಸ್‌.ಎಸ್‌. ಶೆಟ್ಟರ್‌ ಅವರು ತಮ್ಮ ವೃತ್ತಿ ಜೀವನದಲ್ಲಿ ರಾಜಿ ಸಂಧಾನವನ್ನೇ ಪ್ರಧಾನವಾಗಿಸಿಕೊಂಡಿದ್ದರು. ತಮ್ಮ ವಕೀಲ ವೃತ್ತಿಯಿಂದ ಹಾಗೂ ರಾಜಕೀಯ ಕ್ಷೇತ್ರದಲ್ಲಿ ದಿ.ಶೆಟ್ಟರ್‌ ಮಾದರಿ ವ್ಯಕ್ತಿಯಾಗಿದ್ದರು.

ಪ್ರಾಮಾಣಿಕ ದುಡಿಮೆ ಹಾಗೂ ಜನರೊಂದಿಗೆ ಉತ್ತಮ ಒಡನಾಟ ಹೊಂದಿದ್ದ ಅವರು, ಮಕ್ಕಳಿಗೂ ಉತ್ತಮ ಸಂಸ್ಕಾರ ನೀಡಿದ್ದಾರೆ ಎಂದು ಬಣ್ಣಿಸಿದರು.

ಮಲ್ಲಿಕಾರ್ಜುನ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಮಲ್ಲಿಕಾರ್ಜುನ ಸಾವಕಾರ ಪ್ರಾಸ್ತಾವಿಕ ಮಾತನಾಡಿದರು. ಡಾ.ರಾಮು ಮೂಲಗಿ ತತ್ವಪದಗಳನ್ನು ಪ್ರಸ್ತುತಪಡಿಸಿದರು. ಪಾಲಿಕೆ ಸದಸ್ಯ ಶಿವಾನಂದ ಮುತ್ತಣ್ಣವರ, ರವಿ ನಾಯಕ, ಶರಣು ಅಂಗಡಿ ಮತ್ತಿತರರು ಈ ಸಂದರ್ಭದಲ್ಲಿದ್ದರು.ಜಿಲ್ಲಾ ಕಸಾಪ ಅಧ್ಯಕ್ಷ ಡಾ.ಲಿಂಗರಾಜ ಅಂಗಡಿ ಸ್ವಾಗತಿಸಿದರು. ಕೆ.ಎ.ದೊಡ್ಡಮನಿ ನಿರೂಪಿಸಿದರು. ಬಿ.ಎಸ್‌.ಮಾಳವಾಡ ವಂದಿಸಿದರು.

ಸಾಧಕರಿಗೆ ಸನ್ಮಾನ: ಡಾ. ಜಿ.ಎಚ್‌.ನರೇಗಲ್‌, ವಿರೂಪಾಕ್ಷಪ್ಪ ಜಾಬಿನ, ಬಸವನಗೌಡ ಪಾಟೀಲ, ಎಸ್‌.ಎನ್‌.ಕಿಣಿ, ಎಸ್‌.ಎಸ್‌.ಖತೀಬ, ಎಸ್‌.ಟಿ.ಡೋಣಿಮಠ, ಆರ್‌.ಸಿ.ಹಲಗತ್ತಿ, ಅಚ್ಯುತ ಬಂಡಿವಾಡ, ಆರ್‌.ಜಿ.ಕೊಡ್ಲಿ, ಎಂ.ಆರ್‌.ಮುಲ್ಲಾ ಅವರನ್ನು ಈಸಂದರ್ಭದಲ್ಲಿ ಸನ್ಮಾನಿಸಲಾಯಿತು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ