ಆ್ಯಪ್ನಗರ

ಯಾರದೋ ಮೇಲಿನ ಕೋಪ, ಮಕ್ಕಳಿಗೆ ತಾಪ

ಹುಬ್ಬಳ್ಳಿ: ತಮ್ಮ ಬೈಕ್‌ಗೆ ವ್ಯಾನ್‌ ತಾಗಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬರು ಕಾಲೊನಿಯ ಜನರೊಟ್ಟಿಗೆ ಸೇರಿ ಶಾಲೆಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಗಳನ್ನು ಜೆಸಿಬಿಯಿಂದ ಅಗೆದು ಮಕ್ಕಳಿಗೆ ಮನೆ ತಲುಪಲು ತಾಪತ್ರಯ ನೀಡಿದ ಪ್ರಸಂಗ ನಗರ ಹೊರವಲಯದ ಅಕ್ಷಯ ನಗರದಲ್ಲಿ ಗುರುವಾರ ಮಧ್ಯಾಹ್ನ ನಡದಿದೆ.

Vijaya Karnataka 6 Dec 2019, 5:00 am
ಹುಬ್ಬಳ್ಳಿ: ತಮ್ಮ ಬೈಕ್‌ಗೆ ವ್ಯಾನ್‌ ತಾಗಿದ್ದರಿಂದ ಕೋಪಗೊಂಡ ವ್ಯಕ್ತಿಯೊಬ್ಬರು ಕಾಲೊನಿಯ ಜನರೊಟ್ಟಿಗೆ ಸೇರಿ ಶಾಲೆಗಳಿಗೆ ಸಂಪರ್ಕಿಸುವ ಮುಖ್ಯ ರಸ್ತೆಗಳನ್ನು ಜೆಸಿಬಿಯಿಂದ ಅಗೆದು ಮಕ್ಕಳಿಗೆ ಮನೆ ತಲುಪಲು ತಾಪತ್ರಯ ನೀಡಿದ ಪ್ರಸಂಗ ನಗರ ಹೊರವಲಯದ ಅಕ್ಷಯ ನಗರದಲ್ಲಿ ಗುರುವಾರ ಮಧ್ಯಾಹ್ನ ನಡದಿದೆ.
Vijaya Karnataka Web anger on someone heat on children
ಯಾರದೋ ಮೇಲಿನ ಕೋಪ, ಮಕ್ಕಳಿಗೆ ತಾಪ


ಗುರುಕುಲ ಪರಿವರ್ತನ ಮತ್ತು ಚೇತನ್‌ ಪಬ್ಲಿಕ್‌ ಸ್ಕೂಲ್‌ಗಳಿಗೆ ಸಂಪರ್ಕ ಕಲ್ಪಿಸುವ ಮೂರು ರಸ್ತೆಗಳನ್ನು ಅಗೆದಿದ್ದರಿಂದ ಮಕ್ಕಳು ಮನೆಗೆ ಹಿಂತಿರುಗಲು ಹರಸಾಹಸ ಪಡಬೇಕಾಯಿತು. ಕೊನೆಗೆ ಗೋಕುಲ ಠಾಣೆ ಮತ್ತು ಉತ್ತರ ಸಂಚಾರಿ ಠಾಣೆ ಪೊಲೀಸರ ಮಧ್ಯಸ್ಥಿಕೆಯಲ್ಲಿರಸ್ತೆ ಸಂಚಾರ ಪುನಾರಂಭಿಸಲಾಯಿತು.

ಹಠಾತ್‌ ಆಗಿದ್ದೇನು?: ಎಂದಿನಂತೆ ವ್ಯಾನ್‌ಗಳು ಸ್ಕೂಲ್‌ಗೆ ಮಕ್ಕಳನ್ನು ಬಿಡಲು ಸಂಚರಿಸುತ್ತಿದ್ದವು. ಗುರುವಾರ ಬೆಳಗ್ಗೆ ಶಾಲೆ ಸಂಪರ್ಕಿಸುವ ರಸ್ತೆಯಲ್ಲಿನ ನಿವಾಸಿಯೊಬ್ಬರು ಬೈಕ್‌ ಮೇಲಿದ್ದುಕೊಂಡೇ ಗೇಟ್‌ ತೆಗೆದರು. ಹಾಗೇ ಗೇಟ್‌ ಜತೆಗೆ ಬೈಕ್‌ ಹಿಂದಕ್ಕೆ ಬಂದಿತು. ಈ ವೇಳೆ ಸ್ಕೂಲ್‌ ಕಡೆಗೆ ಹೋಗುವ ವ್ಯಾನ್‌ ಬಂದು ಬೈಕ್‌ಗೆ ತಾಕಿದೆ. ತಕ್ಷಣ ನಿವಾಸಿಯು ಬೈಕ್‌ನಿಂದ ಕೆಳಕ್ಕುರುಳಿದರು. ಅದೃಷ್ಟವಶಾತ್‌ ಅವರಿಗೆ ಪ್ರಾಣಾಪಾಯ ಉಂಟಾಗಲಿಲ್ಲ. ಇದರಿಂದ ಆಕ್ರೋಶಗೊಂಡ ನಿವಾಸಿಯು ವ್ಯಾನ್‌ ಚಾಲಕರ ಜತೆ ವಾಗ್ವಾದಕ್ಕಿಳಿದರು. ''ಹದಗೆಟ್ಟ ರಸ್ತೆಯನ್ನು ಕಾಡಿಬೇಡಿ ಡಾಂಬರೀಕರಣ ಮಾಡಿಸಿಕೊಂಡಿದ್ದೇವೆ. ನಿಮ್ಮದು ಅತಿಯಾಯಿತು, ರಸ್ತೆಯನ್ನೇ ಬಂದ್‌ ಮಾಡುತ್ತೇನೆ'' ಎಂದು ಎಚ್ಚರಿಕೆ ರೂಪದಲ್ಲಿತರಾಟೆಗೆ ತೆಗೆದುಕೊಂಡರು. ವ್ಯಾನ್‌ ಚಾಲಕರು ನಿಂದಿಸಿಕೊಂಡು ಸ್ಕೂಲ್‌ಗೆ ತೆರಳಿದರು.

ಇಷ್ಟಕ್ಕೇ ಸುಮ್ಮನಾಗದ ನಿವಾಸಿಯು ಸ್ಥಳೀಯ ನಿವಾಸಿಗಳನ್ನು ಸೇರಿಸಿ ರಸ್ತೆ ಬಂದ್‌ ಮಾಡಲು ನಿರ್ಧರಿಸಿ ಜೆಸಿಬಿ ಗಳೊಂದಿಗೆ ಆಗಮಿಸಿ ಸ್ಕೂಲ್‌ಗೆ 600-700 ಮೀಟರ್‌ ದೂರದಲ್ಲಿಯೇ ರಸ್ತೆಯಲ್ಲಿದೊಡ್ಡ ತಗ್ಗು ತೋಡಿ ಸಂಪರ್ಕ ಕಡಿತಗೊಳಿಸಿದರು. ಮಧ್ಯಾಹ್ನ ಸ್ಕೂಲ್‌ ಮುಗಿಸಿ ವಾಪಸ್‌ ಬರಬೇಕೆಂದು ಮಕ್ಕಳು ವ್ಯಾನ್‌ಗೆ ದಾರಿ ಕಾಯುತ್ತಿದ್ದರು. ಸಂಪರ್ಕ ಇಲ್ಲದೆ ವ್ಯಾನ್‌ದವರು ಮತ್ತು ಪಾಲಕರು ರಸ್ತೆ ಈ ಕಡೆ ನಿಂತುಕೊಂಡೆ ಶಾಲಾ ಆಡಳಿತ ಮಂಡಳಿ ಗಮನಕ್ಕೆ ತಂದಿದ್ದಾರೆ.

ತಕ್ಷಣ ಎಚ್ಚೆತ್ತ ಶಾಲೆಯ ಪ್ರಿನ್ಸಿಪಾಲರು ಪಾಲಕರಿಗೆ ಮಕ್ಕಳು ತಡವಾಗಿ ಬರುತ್ತಾರೆ ಎಂದು ಸಂದೇಶ ತಲುಪಿಸಿ, ಬಳಿಕ ಆಡಳಿತ ಮಂಡಳಿ ಕಾರ್ಯದರ್ಶಿಗಳಿಗೆ ವಿಷಯ ತಿಳಿಸಿದ್ದಾರೆ. ಆಡಳಿತ ಮಂಡಳಿಯವರು ಪೊಲೀಸರೊಂದಿಗೆ ಸ್ಥಳಕ್ಕೆ ಧಾವಿಸಿದರು. ಪೊಲೀಸರು ಸ್ಥಳೀಯ ನಿವಾಸಿಗಳ ಮನವೊಲಿಸಿ ಸಂಪರ್ಕ ಪುನರ್‌ ಕಲ್ಪಿಸುವಲ್ಲಿಯಶಸ್ವಿಯಾದರು ಎಂದು ಪ್ರತ್ಯಕ್ಷದರ್ಶಿಗಳು ಪತ್ರಿಕೆಗೆ ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ