ಹುಬ್ಬಳ್ಳಿಯಲ್ಲಿ ಪಾಕ್ ಪರ ಘೋಷಣೆ ಕೂಗಿದ ಕಾಶ್ಮೀರದ ದೇಶದ್ರೋಹಿಗಳು ಜೈಲಿಗೆ
ವಿದ್ಯಾರ್ಥಿಗಳ ಬಿಡುಗಡೆಗೆ ಪೊಲೀಸರ ಮೇಲೆ ಕಾಲೇಜು ಆಡಳಿತ ಮಂಡಳಿ ಒತ್ತಡ ಹೇರಿಲ್ಲ. ಯಾವುದೇ ಮುಚ್ಚಳಿಕೆ ಪತ್ರ, ಬಾಂಡ್ ಕೊಟ್ಟಿಲ್ಲ ಎಂದು ಹುಬ್ಬಳ್ಳಿಯ ಕೆಎಲ್ಇ ಐಟಿ ಕಾಲೇಜು ಸ್ಪಷ್ಟಪಡಿಸಿದೆ.
Vijaya Karnataka Web 18 Feb 2020, 7:18 am
ಹೈಲೈಟ್ಸ್:
- ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ್ದ ಮೂವರು ಕಾಶ್ಮೀರಿ ವಿದ್ಯಾರ್ಥಿಗಳು
- ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳಿಗೆ ಮಾರ್ಚ್ 2ರವರೆಗೆ ನ್ಯಾಯಾಂಗ ಬಂಧನ
- ವಿದ್ಯಾರ್ಥಿಗಳ ಬಿಡುಗಡೆಗೆ ಪೊಲೀಸರ ಮೇಲೆ ಒತ್ತಡ ಹೇರಿಲ್ಲ ಎಂದು ಸ್ಪಷ್ಟಪಡಿಸಿದ ಕಾಲೇಜು ಆಡಳಿತ ಮಂಡಳಿ
ಹುಬ್ಬಳ್ಳಿ: ಇಡೀ ದೇಶ ಪುಲ್ವಾಮಾ ದಾಳಿಗೆ ವರ್ಷ ತುಂಬಿದ ಶೋಕಾಚರಣೆಯಲ್ಲಿರುವಾಗಲೇ, ಪಾಕಿಸ್ತಾನ ವಿದ್ಯಾರ್ಥಿಗಳನ್ನು ಜನಾಕ್ರೋಶದ ನಡುವೆ ಪೊಲೀಸರು ಕೊನೆಗೂ ಜೈಲಿಗೆ ತಳ್ಳಿದ್ದಾರೆ. ಕೇಂದ್ರ ಸರಕಾರದ ಕೋಟಾದಲ್ಲಿ ಸೀಟು, ಸ್ಕಾಲರ್ಷಿಪ್ ಪಡೆದು, ಸರಕಾರ ಪುಕ್ಕಟೆಯಾಗಿ ನೀಡುವ ಅನ್ನ ಉಂಡು ದೇಶಕ್ಕೆ ದ್ರೋಹ ಬಗೆದ ಈ ಮೂವರು ಖದೀಮರಿಗೆ ಮಾರ್ಚ್ 2ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಈ ನಡುವೆ, ಈ ಕಿಡಿಗೇಡಿಗಳಿಗೆ ರಾಷ್ಟ್ರೀಯವಾದಿ ಸಂಘಟನೆಯ ಕಾರ್ಯಕರ್ತರು ಗೂಸಾ ಕೊಟ್ಟಿದ್ದಾರೆ. ಆರೋಪಿಗಳಾದ ಅಮೀರ್ ಮೊಯಿದ್ದಿನ್, ಬಾಸಿತ್ ಆಸಿಫ್ ಸೋಫಿ ಹಾಗೂ ತಾಲೀಬ್ ಮಾಜಿದ್ರನ್ನು ಬೆಳಗ್ಗೆ ಪೊಲೀಸರು ನ್ಯಾಯಾಲಯಕ್ಕೆ ಹಾಜರುಪಡಿಸಿದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶೆ ಪುಷ್ಪಾ ಜೋಗೋಜಿ ಅವರು ನ್ಯಾಯಾಂಗ ಬಂಧನಕ್ಕೆ ಆದೇಶ ಹೊರಡಿಸಿದರು. ಇಲ್ಲಿನ ಹುಬ್ಬಳ್ಳಿ ವಕೀಲರ ಸಂಘ ಆರೋಪಿಗಳ ಪರ ವಕಾಲತು ವಹಿಸದಿರಲು ತೀರ್ಮಾನಿಸಿದರು.
ವಿಚಾರಣೆ ವೇಳೆ ವಿದ್ಯಾರ್ಥಿಗಳು ತಮ್ಮ ಪರ ವಕೀಲರ ನೇಮಕಕ್ಕೆ ಕಾಲಾವಕಾಶ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸದೇ ಬಿಟ್ಟು ಕಳಿಸಿದ್ದಾರೆಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಭಾನುವಾರ ನಗರದ ಗೋಕುಲ್ ರೋಡ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.
ಹುಬ್ಬಳ್ಳಿಯಲ್ಲಿ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ ವಿದ್ಯಾರ್ಥಿಗಳ ಬಂಧನವೇ ಆಗಿಲ್ಲ?
ದೇಶದ್ರೋಹದಂತಹ ಗಂಭೀರ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ತೀವ್ರ ನಿರ್ಲಕ್ಷ್ಯ ತೋರಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ತಕ್ಷಣವೇ ಅಮಾನತು ಮಾಡಬೇಕು.
- ಅಶೋಕ ಅಣ್ವೇಕರ, ವಕೀಲರ ಸಂಘದ ಮುಖಂಡ
ಪಾಕ್ ಪರ ಘೋಷಣೆ ಕೂಗುದವರನ್ನು ಬಿಡುಗಡೆ ಮಾಡಿದ ಬಗ್ಗೆ ಇಲಾಖಾ ವರದಿ ಕೇಳಲಾಗಿದೆ. ದೇಶದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ.
- ಬಸವರಾಜ ಬೊಮ್ಮಾಯಿ, ಗೃಹ ಸಚಿವ
ವಿಚಾರಣೆ ವೇಳೆ ವಿದ್ಯಾರ್ಥಿಗಳು ತಮ್ಮ ಪರ ವಕೀಲರ ನೇಮಕಕ್ಕೆ ಕಾಲಾವಕಾಶ ಕೇಳಿದ್ದಾರೆ ಎಂದು ಮೂಲಗಳು ತಿಳಿಸಿವೆ. ಪೊಲೀಸರು ವಿದ್ಯಾರ್ಥಿಗಳ ವಿರುದ್ಧ ದೂರು ದಾಖಲಿಸದೇ ಬಿಟ್ಟು ಕಳಿಸಿದ್ದಾರೆಂದು ಆರೋಪಿಸಿ ಹಿಂದೂಪರ ಸಂಘಟನೆಗಳು ಭಾನುವಾರ ನಗರದ ಗೋಕುಲ್ ರೋಡ್ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.
ಹುಬ್ಬಳ್ಳಿಯಲ್ಲಿ 'ಪಾಕಿಸ್ತಾನ ಜಿಂದಾಬಾದ್' ಘೋಷಣೆ ಕೂಗಿದ ವಿದ್ಯಾರ್ಥಿಗಳ ಬಂಧನವೇ ಆಗಿಲ್ಲ?
ದೇಶದ್ರೋಹದಂತಹ ಗಂಭೀರ ಪ್ರಕರಣದಲ್ಲಿ ಪೊಲೀಸ್ ಆಯುಕ್ತರು ತೀವ್ರ ನಿರ್ಲಕ್ಷ್ಯ ತೋರಿದ್ದಾರೆ. ಅವರ ವಿರುದ್ಧ ಕಾನೂನು ಕ್ರಮ ತೆಗೆದುಕೊಂಡು, ತಕ್ಷಣವೇ ಅಮಾನತು ಮಾಡಬೇಕು.
- ಅಶೋಕ ಅಣ್ವೇಕರ, ವಕೀಲರ ಸಂಘದ ಮುಖಂಡ
ಪಾಕ್ ಪರ ಘೋಷಣೆ ಕೂಗುದವರನ್ನು ಬಿಡುಗಡೆ ಮಾಡಿದ ಬಗ್ಗೆ ಇಲಾಖಾ ವರದಿ ಕೇಳಲಾಗಿದೆ. ದೇಶದ್ರೋಹಿಗಳನ್ನು ಯಾವುದೇ ಕಾರಣಕ್ಕೂ ಕೈಬಿಡುವ ಪ್ರಶ್ನೆಯೇ ಇಲ್ಲ.
- ಬಸವರಾಜ ಬೊಮ್ಮಾಯಿ, ಗೃಹ ಸಚಿವ