ಆ್ಯಪ್ನಗರ

ಪೊಲೀಸ್ VS ವಕೀಲರು: ಸಾಮೂಹಿಕ ವರ್ಗಾವಣೆಗೆ ಆಗ್ರಹಿಸಿದ ನವನಗರ ಪೊಲೀಸರು?

ಪ್ರಕರಣವೊಂದರ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ವಕೀಲರ ನಡುವೆ ನಿನ್ನೆ(ನ.26-ಗುರುವಾರ) ರಾತ್ರಿ ನಡೆದ ವಾಗ್ವಾದದ ಗಲಾಟೆ ಇದೀಗ ತಿರುವು ಪಡೆದುಕೊಳ್ಳುತ್ತಿದೆ. ಪೊಲೀಸರ ವಿರುದ್ಧ ವಕೀಲರು ಪ್ರತಿಭಟನೆ ನಡೆಸಿದರೆ, ಸಾಮೂಹಿಕ ವರ್ಗಾವಣೆಗೆ ಆಗ್ರಹಿಸಿ ಪೊಲೀಸರೂ ಒತ್ತಾಯಿಸಿದ ಘಟನೆ ನಡೆದಿದೆ.

Vijaya Karnataka Web 27 Nov 2020, 9:44 pm
ಹುಬ್ಬಳ್ಳಿ: ಪ್ರಕರಣವೊಂದರ ವಿಚಾರಕ್ಕೆ ಸಂಬಂಧಿಸಿದಂತೆ ಪೊಲೀಸರು ಮತ್ತು ವಕೀಲರ ನಡುವೆ ನಿನ್ನೆ(ನ.26-ಗುರುವಾರ) ರಾತ್ರಿ ನಡೆದ ವಾಗ್ವಾದದ ಗಲಾಟೆ ಇದೀಗ ತಿರುವು ಪಡೆದುಕೊಳ್ಳುತ್ತಿದೆ.
Vijaya Karnataka Web Police Protest1
ಎಪಿಎಂಸಿ ಠಾಣೆ ಮುಂದೆ ಜಮಾಯಿಸಿದ ಅತೃಪ್ತ ಪೊಲೀಸರು


ಒಂದೆಡೆ ಪೊಲೀಸರ ವಿರುದ್ಧ ವಕೀಲರು ಧಾರವಾಡದಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿದರೆ, ಇತ್ತ ನವನಗರ ಠಾಣೆ (ಎಪಿಎಂಸಿ) ಪೊಲೀಸರು ಸಾಮೂಹಿಕ ವರ್ಗಾವಣೆ ಮಾಡಿ ಎಂದು ಬೇಡಿಕೆ ಮುಂದಿಟ್ಟಿರುವುದು ಚರ್ಚೆಗೆ ಮತ್ತಷ್ಟು ಗ್ರಾಸವೊದಗಿಸಿದೆ.

ನವನಗರದ ಕರ್ನಾಟಕ ಸರ್ಕಲ್‌ನಲ್ಲಿ ವಕೀಲ ವಿನೋದ್ ಪಾಟೀಲ್, ಪ್ರವೀಣ ಪೂಜಾರಿ ಹಾಗೂ ಮಲ್ಲಯ್ಯ ಹಿರೇಮಠ ನಡುವೆ ಜಗಳ ನಡೆದಿತ್ತು. ಈ ವಿಷಯ ಗೊತ್ತಾಗಿ ಎಪಿಎಂಸಿ ಠಾಣೆಯ ಇನ್ಸಫೆಕ್ಟರ್ ಪ್ರಭು ಸೂರಿನ್ ಮತ್ತು ಇತರೆ ಸಿಬ್ಬಂದಿ ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಪೊಲೀಸರು ಮತ್ತು ವಕೀಲ ವಿನೋದ್ ನಡುವೆ ಚಕಮಕಿ ನಡೆದಿದೆ.

ದಿಲ್ಲಿ ಪೊಲೀಸ್ V/S ಲಾಯರ್ ವಾರ್! ಗಂಡ-ಹೆಂಡ್ತಿ ಜಗಳ ಎಂದು ಕಾಲೆಳೆದ ನೆಟ್ಟಿಗರು!

ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಠಾಣೆಗೆ ಬರುವಂತೆ ಪೊಲೀಸರು ವಕೀಲ ವಿನೋದ್ ಅವರನ್ನು ಒತ್ತಾಯಿಸಿದ್ದಾರೆ. ವಿನೋದ್ ಇದಕ್ಕೆ ಒಪ್ಪದಾದಾಗ, ಬಂಧಿಸಿ ಠಾಣೆಗೆ ಕರೆದೊಯ್ದಿದ್ದಾರೆ.

ಸದ್ಯ ಈ ಸಂಬಂಧ ನವನಗರ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ನಡುವೆ ಇಂದು (ನ.28-ಶುಕ್ರವಾರ) ವಕೀಲ ವಿನೋದ್ ಅವರಿಗೆ ಜಾಮೀನು ದೊರೆತಿದೆ.

ವರ್ಗಕ್ಕೆ ಪೊಲೀಸರ ಬೇಡಿಕೆ:

ಈ ನಡುವೆ ವಕೀಲ ವಿನೋದ್ ಬಂಧನ ಖಂಡಿಸಿ ಧಾರವಾಡದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ ನಡೆಸಲಾಗಿತ್ತು. ಇದರಿಂದ ಬೇಸರಗೊಂಡು ಇತ್ತ ಎಪಿಎಂಸಿ ಠಾಣೆಯ ಪೊಲೀಸರು ಠಾಣೆಯಿಂದ ಹೊರಬಂದು ತಹೀಗೆ ಒತ್ತಡ ತಂದರೆ ಕೆಲಸ ಮಾಡಲು ಸಾಧ್ಯವಿಲ್ಲ ಎಂದು ಅಸಮಾಧಾನ ಹೊರಹಾಕಿದರಲ್ಲದೇ, ಸಾಮೂಹಿಕ ವರ್ಗಕ್ಕೂ ಬೇಡಿಕೆ ಸಲ್ಲಿಸಿದರು.

‘ನಮಗೆ ರಕ್ಷಣೆ ಕೊಡಿ’ ! ದೆಹಲಿಯಲ್ಲಿ ಬೀದಿಗಿಳಿದಿದ್ದಾರೆ ಪೊಲೀಸರು

ಇನ್‌ಸ್ಪೆಕ್ಟರ್ ಪ್ರಭು ಸೂರಿನ್, ಕಳೆದ ನಾಲ್ಕು ವರ್ಷದಿಂದ ಇಂತ ಒತ್ತಡಗಳೆಲ್ಲವನ್ನು ಸಿಬ್ಬಂದಿ ಎದುರಿಸುತ್ತಿದ್ದಾರೆ. ಸ್ಥಳೀಯ ಒಂದು ಗುಂಪಿನವರು ತಪ್ಪೆಸಗಿದಾಗ ನಾವು ಕ್ರಮಕ್ಕೆ ಮುಂದಾದರೆ ಇಂಥ ತೊಂದರೆ ಎದುರಿಸಬೇಕಾಗಿದೆ. ಈ ಬಗ್ಗೆ ಸಿಬ್ಬಂದಿ ಬೇಸರ ಹೊರಹಾಕಿದ್ದಾರೆ.

ಎಪಿಎಂಸಿ ಠಾಣೆ ಮುಂದೆ ಜಮಾಯಿಸಿದ ಅತೃಪ್ತ ಪೊಲೀಸರು


ಹಿರಿಯ ಅಧಿಕಾರಿಗಳ ಸ್ಪಷ್ಟನೆ:

ಇನ್ನು ಘಟನೆಗೆ ಪ್ರತಿಕ್ರಿಯೆ ನೀಡಿರುವ ಉತ್ತರ ವಿಭಾಗದ ಎಸಿಪಿ ಎಸ್.ಎಂ. ರಾಗಿ, ಯಾವ ಪೊಲೀಸರೂ ವರ್ಗಾವಣೆ ಮಾಡುವಂತೆ ಕೇಳಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಠಾಣೆಯೆದುರು ಸೇರಿದ್ದವರು ಭದ್ರತೆಗೆ ಆಗಮಿಸಿದ್ದ ಸಿಬ್ಬಂದಿ. ಪ್ರಕರಣದ ಹಿನ್ನೆಲೆಯಲ್ಲಿ ಒತ್ತಡ ಬಂದಿದ್ದಕ್ಕಾಗಿ ಬೇಸರಗೊಂಡಿದ್ದಾರೆ ಅಷ್ಟೆ. ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದು ಎಲ್ಲವೂ ಸರಿಹೋಗಲಿದೆ ಎಂದು ಎಸಿಪಿ ಎಸ್.ಎಂ. ರಾಗಿ ಭರವಸೆ ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ