ಆ್ಯಪ್ನಗರ

ಗ್ರಾಪಂ ನಿರ್ಧಾರ ವಿರೋಧಿಸಿ ಮನವಿ

ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮ ಪಂಚಾಯತಿಯವರು ಗ್ರಾಮದ ದಲಿತ ಕೇರಿಯ ಜಾಗೆಯಲ್ಲಿಕೆಎಂಎಫ್‌ ಹಾಲು ಉತ್ಪಾದಕ ಘಟಕ ಕಟ್ಟಡಕ್ಕೆ ಅನುಮತಿ ನೀಡಿರುವುದನ್ನು ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಪದಾಧಿಕಾರಿಗಳು ಗುರುವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.

Vijaya Karnataka 30 Nov 2019, 5:00 am
ಹುಬ್ಬಳ್ಳಿ: ತಾಲೂಕಿನ ಛಬ್ಬಿ ಗ್ರಾಮ ಪಂಚಾಯತಿಯವರು ಗ್ರಾಮದ ದಲಿತ ಕೇರಿಯ ಜಾಗೆಯಲ್ಲಿಕೆಎಂಎಫ್‌ ಹಾಲು ಉತ್ಪಾದಕ ಘಟಕ ಕಟ್ಟಡಕ್ಕೆ ಅನುಮತಿ ನೀಡಿರುವುದನ್ನು ಖಂಡಿಸಿ ಕರ್ನಾಟಕ ದಲಿತ ವಿಮೋಚನಾ ಸಮಿತಿ ಪದಾಧಿಕಾರಿಗಳು ಗುರುವಾರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.
Vijaya Karnataka Web appeal against graphams decision
ಗ್ರಾಪಂ ನಿರ್ಧಾರ ವಿರೋಧಿಸಿ ಮನವಿ


ದಲಿತ ಕೇರಿಯಲ್ಲಿರುವ ಬಾವಿ ಮುಚ್ಚಿ ಸಮುದಾಯದ ಗಮನಕ್ಕೆ ತರದೇ ಕೆಎಂಎಫ್‌ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡಲಾಗಿದೆ. ಈ ಜಾಗೆ ಸಮುದಾಯದ ಅಭಿವೃದ್ಧಿಗೆ ಬೇಕು ಎಂದು ಮನವಿ ಸಲ್ಲಿಸಿದರೂ, ಗ್ರಾಪಂ ಸಹಕಾರ ನೀಡುತ್ತಿಲ್ಲ. ಅಲ್ಲದೇ ರಾತ್ರೋರಾತ್ರಿ ಕಟ್ಟಡ ನಿರ್ಮಾಣಕ್ಕೆ ಮುಂದಾದ ವೇಳೆ ಸಂಘಟನೆಯಿಂದ ಪ್ರತಿಭಟನೆ ನಡೆಸಿ ತಕಾರರು ಸಲ್ಲಿಸಿದ್ದು, ಡಾ. ಬಿ.ಆರ್‌. ಅಂಬೇಡ್ಕರ್‌ ಪ್ರತಿಮೆ ಸ್ಥಾಪನೆಗೆ ಈ ಜಾಗೆ ಬೇಕು ಎಂದು ತಿಳಿಸಲಾಗಿದೆ ಎಂದು ಮನವಿಯಲ್ಲಿತಿಳಿಸಿದ್ದಾರೆ.

ಈ ಸಂದರ್ಭದಲ್ಲಿಭೀಮಪ್ಪ ದೊಡ್ಡಮನಿ, ಸಿದ್ಧಾರ್ಥ ಮಲ್ಲಮ್ಮನವರ, ಫಕ್ಕೀರಪ್ಪ ಗದಿಗೆಪ್ಪನವರ, ದುರಗಪ್ಪ ದೊಡಮನಿ, ಲಕ್ಷ್ಮಣ ಅಂಬ್ಲೇನವರ, ಶಿವಾನಂದ ದೊಡಮನಿ, ಸಂತೋಷ ದೊಡಮನಿ, ಶಿವಾನಂದ ಗುಡಿಮನಿ, ಸಿದ್ದು ಕೊಂಡಿವಾಡ ಇತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ