ಆ್ಯಪ್ನಗರ

ತುಪರಿ ಹಳ್ಳ ಅಭಿವೃದ್ಧಿಗೆ ಪ್ರಧಾನಿಗೆ ಮನವಿ

ಉಪ್ಪಿನ ಬೆಟಗೇರಿ : ತುಪರಿ ಹಳ್ಳ ಮತ್ತು ನೆರೆಹೊರೆಯ ರೈತರ ಅಭಿವೃದ್ಧಿ ಮತ್ತು ಶಾಶ್ವತ ಪರಿಹಾರಕ್ಕಾಗಿ ವಿಶೇಷ ಅನುದಾನ ನೀಡುವಂತೆ ಕೋರಿ ಹನಮನಾಳ ಗ್ರಾಮಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅಮೃತ ದೇಸಾಯಿ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಸ್ಥಳೀಯ ಸಂಕಲ್ಪ ಸಂಸ್ಥೆ ಹಾಗೂ ಅಧ್ಯಕ್ಷೆ ಝಾನ್ಸಿಲಕ್ಷ್ಮಿ ಹೂಗಾರ ಪ್ರತ್ಯೇಕ ಮನವಿ ಸಲ್ಲಿಸಿದರು.

Vijaya Karnataka 13 Aug 2019, 5:00 am
ಉಪ್ಪಿನ ಬೆಟಗೇರಿ : ತುಪರಿ ಹಳ್ಳ ಮತ್ತು ನೆರೆಹೊರೆಯ ರೈತರ ಅಭಿವೃದ್ಧಿ ಮತ್ತು ಶಾಶ್ವತ ಪರಿಹಾರಕ್ಕಾಗಿ ವಿಶೇಷ ಅನುದಾನ ನೀಡುವಂತೆ ಕೋರಿ ಹನಮನಾಳ ಗ್ರಾಮಕ್ಕೆ ಭೇಟಿ ನೀಡಿದ ಸಂಸದೆ ಶೋಭಾ ಕರಂದ್ಲಾಜೆ, ಶಾಸಕ ಅಮೃತ ದೇಸಾಯಿ ಅವರ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪನವರಿಗೆ ಸ್ಥಳೀಯ ಸಂಕಲ್ಪ ಸಂಸ್ಥೆ ಹಾಗೂ ಅಧ್ಯಕ್ಷೆ ಝಾನ್ಸಿಲಕ್ಷ್ಮಿ ಹೂಗಾರ ಪ್ರತ್ಯೇಕ ಮನವಿ ಸಲ್ಲಿಸಿದರು.
Vijaya Karnataka Web DRW-12UBT01 MANAVI TO PM
ತುಪರಿ ಹಳ್ಳದ ಅಭಿವೃದ್ಧಿ ಮತ್ತು ಶಾಶ್ವತ ಪರಿಹಾರಕ್ಕಾಗಿ ವಿಶೇಷ ಅನುದಾನ ನೀಡುವಂತೆ ಕೋರಿ ಪ್ರಧಾನಮಂತ್ರಿ ಹಾಗೂ ಮುಖ್ಯ ಮಂತ್ರಿಯವರಿಗೆ ಸಂಕಲ್ಪ ಸಂಸ್ಥೆಯಿಂದ ಮನವಿ ಮಾಡಲಾಯಿತು.


ರಾಜ್ಯ ಸರಕಾರ ಬರುವ ಬಜೆಟ್‌ನಲ್ಲಿ 200 ಕೋಟಿ ರೂ.ಗಳ ಅನುದಾನವನ್ನು ತುಪರಿ ಹಳ್ಳದ ಅಭಿವೃದ್ಧಿಗೆ ಮೀಸಲಿರಿಸಬೇಕು ಮತ್ತು ಕೇಂದ್ರ ಸರಕಾರ ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿಯಡಿ ವಿಶೇಷ ಅನುದಾನ ನೀಡುವಂತೆ ಮನವಿ ಪತ್ರದಲ್ಲಿ ಕೋರಲಾಗಿದೆ.

ಕಿತ್ತೂರಿನ ಪರಸನಟ್ಟಿ ಕೆರೆಯಿಂದ ಹುಟ್ಟಿ ತೇಗೂರು, ಬೋಗೂರು. ಗರಗ, ಹಂಗರಕಿ, ಲೋಕೂರು, ಉಪ್ಪಿನ ಬೆಟಗೇರಿ, ಕಬ್ಬೆನೂರು, ಹಾರೋ ಬೆಳವಡಿ, ಮೊರಬ ಮಾರ್ಗವಾಗಿ ನೂರಾರು ಕಿಲೋ ಮೀಟರ್‌ ತುಪರಿಹಳ್ಳ ಹರಿಯುತ್ತಿದೆ. ವಿಶಾಲ ವ್ಯಾಪ್ತಿಯ ವಿಸ್ತೀರ್ಣ ಹೊಂದಿದ ಹಳ್ಳ ನೆರೆಯ ಗ್ರಾಮಗಳ ಜೀವನಾಡಿಯಾಗಿತ್ತು. ಕ್ರಮೇಣವಾಗಿ ಬಹುತೇಕ ಕಡೆ ಎರಡೂ ಬದಿಗಳಲ್ಲಿ ಹಳ್ಳ ಅತಿಕ್ರಮಣವಾಗಿದ್ದು, ಭಾರಿ ಮಳೆಗಳ ಪರಿಣಾಮವಾಗಿ ಹರಿದು ಬರುವ ಅಪಾರ ಪ್ರಮಾಣದ ನೀರು ಒಡಲು ತುಂಬಿ ಹರಿಯುವುದರಿಂದ ನೆರೆಹೊರೆಯ ಸಾವಿರಾರು ಎಕರೆ ಕೃಷಿ ಜಮೀನು ಜಲಾವೃತವಾಗಿ ರೈತರು ಸಂಕಷ್ಟಕ್ಕೀಡಾಗಿ ಕಣ್ಣೀರು ಸುರಿಸುವಂತಾಗಿದೆ. ಅಲ್ಲದೇ ಅಪಾರ ಪ್ರಮಾಣದ ನೀರು ಹರಿದು ವ್ಯರ್ಥವಾಗುತ್ತಿದೆ.

ಇದನ್ನು ತಡೆದು ನೀರನ್ನು ಸದುಪಯೋಗ ಪಡಿಸಿಕೊಳ್ಳಲು ತುಪರಿ ಹಳ್ಳಕ್ಕೆ ಸೂಕ್ತ ಸ್ಥಳದಲ್ಲಿ ಅಣೆಕಟ್ಟು ಹಾಗೂ ಅಲ್ಲಲ್ಲಿ ಚೆಕ್‌ ಡ್ಯಾಮ್‌ಗಳನ್ನು ನಿರ್ಮಿಸಲು ಯೋಜನೆ ರೂಪಿಸುವ ಜತೆಗೆ ಶಾಶ್ವತ ಪರಿಹಾರ ಒದಗಿಸಲು ಸರಕಾರದ ಇಚ್ಛಾಶಕ್ತಿಯ ಅಗತ್ಯವಿದೆ. ಇದರಿಂದಾಗಿ ನೆರೆಹೊರೆಯ ಸಾವಿರಾರು ಎಕರೆ ಜಮೀನಿಗೆ ನೀರಾವರಿ ಸೌಲಭ್ಯ ಒದಗಿಸಬಹುದು. ಜತೆಗೆ ಪ್ರವಾಹದಿಂದ ಉಂಟಾಗುವ ಅಪಾರ ಪ್ರಮಾಣದ ಹಾನಿಯನ್ನು ತಡೆಯಬಹುದು.

ಈ ವರ್ಷ ಧಾರಾಕಾರವಾಗಿ ಸುರಿದ ಭಾರಿ ಮಳೆಗೆ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತಪರ ಕಾಳಜಿಯ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ತುಪರಿ ಹಳ್ಳ ಮತ್ತು ನೆರೆಹೊರೆಯ ರೈತರ ಅಭಿವೃದ್ಧಿ ಮತ್ತು ಶಾಶ್ವತ ಪರಿಹಾರಕ್ಕಾಗಿ ವಿಶೇಷ ಅನುದಾನ ನೀಡುವ ಮೂಲಕ ಅನ್ನದಾತರ ಬದುಕು ಹಸನುಗೊಳಿಸಲು ಕೇಂದ್ರ ಸರಕಾರಕ್ಕಿರುವ ಬದ್ಧತೆಯನ್ನು ಸ್ಪಷ್ಟಪಡಿಸಬೇಕು ಎಂದು ಸಂಸ್ಥೆ ಮನವಿ ಮಾಡಿದೆ.

ಬಿಜೆಪಿ ಮುಖಂಡ ತವನಪ್ಪ ಅಷ್ಟಗಿ, ಶಶಿಮೌಳಿ ಕುಲಕರ್ಣಿ, ಗ್ರಾಪಂ ಅಧ್ಯಕ್ಷ ಮಹಾವೀರ ಅಷ್ಟಗಿ, ಉಪಾಧ್ಯಕ್ಷೆ ರತ್ನವ್ವ ವಿಜಾಪೂರ, ಗ್ರಾಮ ಲೆಕ್ಕಾಧಿಕಾರಿ ರಾಮಚಂದ್ರ ನೆಮ್ಮದಿ, ಪಿಡಿಒ ಬಿ.ಎ.ಬಾವಾಖಾನ್‌, ಸಂಗನಗೌಡ ರಾಮನಗೌಡರ, ಶಿವಾನಂದ ದೇಶನೂರ, ಮಡಿವಾಳಪ್ಪ ಸಿಂದೋಗಿ, ನಿಂಗಪ್ಪ ದಿವಟಗಿ, ಡಿ.ಪಿ.ಅಷ್ಟಗಿ ಸೇರಿದಂತೆ ಅಧಿಕಾರಿಗಳು, ಗ್ರಾಮಸ್ಥರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ