ಆ್ಯಪ್ನಗರ

ಸಾಧನೆಗೆ ಪ್ರೇರಣೆ ನೆರವಿಗೆ ಶ್ಲಾಘನೆ

ಹುಬ್ಬಳ್ಳಿ : ಬಡತನವನ್ನು ಸವಾಲಾಗಿಸಿಕೊಂಡು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ ಐವರು ಸಾಧಕ ವಿದ್ಯಾರ್ಥಿಗಳಿಗೆ 'ವಿಜಯ ಕರ್ನಾಟಕ' ವತಿಯಿಂದ ಶನಿವಾರ ವಿದ್ಯಾರ್ಥಿ ನಿಧಿ ಚೆಕ್‌ ವಿತರಣಾ ಕಾರ್ಯಕ್ರಮ ಜರುಗಿತು.

Vijaya Karnataka 7 Jul 2019, 5:00 am
ಹುಬ್ಬಳ್ಳಿ : ಬಡತನವನ್ನು ಸವಾಲಾಗಿಸಿಕೊಂಡು ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆಯುವ ಮೂಲಕ ಸಾಧನೆ ಮಾಡಿದ ಐವರು ಸಾಧಕ ವಿದ್ಯಾರ್ಥಿಗಳಿಗೆ 'ವಿಜಯ ಕರ್ನಾಟಕ' ವತಿಯಿಂದ ಶನಿವಾರ ವಿದ್ಯಾರ್ಥಿ ನಿಧಿ ಚೆಕ್‌ ವಿತರಣಾ ಕಾರ್ಯಕ್ರಮ ಜರುಗಿತು.
Vijaya Karnataka Web DRW-MAN_8027


ಹುಬ್ಬಳ್ಳಿ ವಿಜಯ ಕರ್ನಾಟಕ ಕಚೇರಿಯಲ್ಲಿ ಶನಿವಾರ ಧಾರವಾಡ ಜಿಲ್ಲೆಯ ಪ್ರತಿಭಾವಂತ ಐವರು ಬಡ ವಿದ್ಯಾರ್ಥಿಗಳಿಗೆ ದಾನಿಗಳು ನೀಡಿದ ಧನ ಸಹಾಯದ ಚೆಕ್‌ ವಿತರಿಸಲಾಯಿತು. ದ್ವಿತೀಯ ಪಿಯು ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕ ಪಡೆದ ವಿವಿಧ ಕಾಲೇಜಿನ ಸಾಧಕ ವಿದ್ಯಾರ್ಥಿಗಳಾದ ಜಯದೇವ ಪಾಟೀಲ, ಅರುಣ ಸಂಗೂರ, ಸಚಿನ್‌ ಪೂಲವಾಲೆ, ಚೈತನ್ಯ ಕೆರಣ್ಣವರ ಹಾಗೂ ಚನ್ನಮ್ಮ ಪಮ್ಮಾರ ಅವರಿಗೆ ಗಣ್ಯರು ಚೆಕ್‌ ವಿತರಿಸಿ ಶುಭ ಕೋರಿದರು.

ಶ್ರಮಕೃಷಿ ಅಗತ್ಯ
ಅತಿಥಿ ಖ್ಯಾತ ಉದ್ಯಮಿ ವಿ.ವಿ.ಎಸ್‌.ಪ್ರಸಾದ್‌ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಉತ್ತಮ ಗುರಿ ಇಟ್ಟುಕೊಂಡು ಅದರ ಸಾಕಾರಕ್ಕೆ ನಿರಂತರ ಪರಿಶ್ರಮ ಪಡಬೇಕು. ವಿದ್ಯಾರ್ಥಿಗಳಲ್ಲಿ ಶ್ರಮಕೃಷಿ ಮನೋಭಾವನೆ ಇದ್ದಾಗ ಮಾತ್ರ ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಬಡ ಕುಟುಂಬದಲ್ಲಿ ಜನಿಸಿದ ಹಾಗೂ ಅದನ್ನು ಸವಾಲಾಗಿ ಸ್ವೀಕರಿಸಿ ತಮ್ಮ ನಿರಂತರ ಪರಿಶ್ರಮದಿಂದ ಸಾಧನೆಯ ಶಿಖರ ಏರಿದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್‌ ಕಲಾಂ ಹಾಗೂ ಪ್ರಧಾನ ನರೇಂದ್ರ ಮೋದಿಯವರು ಪ್ರತಿಯೊಬ್ಬ ವಿದ್ಯಾರ್ಥಿಗಳಿಗೂ ಮಾದರಿಯಾಗಿದ್ದಾರೆ. ವಿದ್ಯಾರ್ಥಿಗಳಿಗೆ 'ವಿಕ' ವಿತರಿಸಿದ ಧನ ಸಹಾಯವನ್ನು ಮುಂದಿನ ಶಿಕ್ಷಣಕ್ಕೆ ಬಳಸಿಕೊಂಡು ಮತ್ತಷ್ಟು ಹೆಚ್ಚಿನ ಸಾಧನೆ ಮಾಡಬೇಕು ಎಂದರು.

ಜಿಲ್ಲೆಯ ಬಡ ವಿದ್ಯಾರ್ಥಿಗಳನ್ನು ಗುರುತಿಸಿ ಅವರಿಗೆ ಧನ ಸಹಾಯ ಕೊಡಿಸುವ ಮೂಲಕ ವಿಜಯ ಕರ್ನಾಟಕ ಪುಣ್ಯದ ಕೆಲಸ ಮಾಡುತ್ತಿದೆ. ವಿಕ ಈ ಸೇವಾ ಮನೋಭಾವನೆಯನ್ನು ಎಷ್ಟು ಶ್ಲಾಘಿಸಿದರೂ ಕಡಿಮೆಯೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಧೈರ್ಯಗುಂದದೇ ಮುನ್ನುಗ್ಗಿ
ಸುಧಾ ನಾಯಕ ಮಾತನಾಡಿ, ವಿದ್ಯಾರ್ಥಿಗಳು ತಾವು ಕಷ್ಟದ ದಿನದಲ್ಲಿ ಸಾಧನೆ ಮಾಡಿದಾಗ ಸಾಧನೆ ಪ್ರೋತ್ಸಾಹಿಸಿದವರನ್ನು ಹಾಗೂ ಸಹಾಯ ಹಸ್ತ ಚಾಚಿದವರನ್ನು ಎಂದಿಗೂ ಮರೆಯಬಾರದು ಎಂದರು.ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸಾಧ್ಯವಾದರೇ ಓಡುತ್ತಾ, ಇಲ್ಲವಾದರೇ ನಡೆಯುತ್ತಾ ಅದು ಸಾಧ್ಯವಾಗದಿದ್ದರೇ ಉರುಳಿಕೊಂಡಾದರು ಮುನ್ನುಗ್ಗುವ ಪ್ರವೃತ್ತಿ ಮೈಗೂಡಿಸಿಕೊಳ್ಳಬೇಕು. ಅಂದಾಗ ಮಾತ್ರ ಶ್ರೇಷ್ಠ ಸಾಧನೆ ಸಾಧ್ಯವಾಗುತ್ತದೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ