ಆ್ಯಪ್ನಗರ

ರೌಡಿಶೀಟರ್‌ ಸೇರಿ ನಾಲ್ವರ ಬಂಧನ

ಹುಬ್ಬಳ್ಳಿ: ಸಾರಾಯಿ ಕೊಡಲಿಲ್ಲಎಂಬ ಕಾರಣಕ್ಕಾಗಿ ಬಾರ್‌ ಮಾಲೀಕನ ಮೇಲೆ ಹಲ್ಲೆನಡೆಸಿದ್ದ ರೌಡಿಶೀಟರ್‌ ವಿಜಯ ಬಿಜವಾಡ ಸೇರಿದಂತೆ ನಾಲ್ವರನ್ನು ಕೇಶ್ವಾಪುರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.

Vijaya Karnataka 29 Dec 2019, 6:21 pm
ಹುಬ್ಬಳ್ಳಿ: ಸಾರಾಯಿ ಕೊಡಲಿಲ್ಲಎಂಬ ಕಾರಣಕ್ಕಾಗಿ ಬಾರ್‌ ಮಾಲೀಕನ ಮೇಲೆ ಹಲ್ಲೆನಡೆಸಿದ್ದ ರೌಡಿಶೀಟರ್‌ ವಿಜಯ ಬಿಜವಾಡ ಸೇರಿದಂತೆ ನಾಲ್ವರನ್ನು ಕೇಶ್ವಾಪುರ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದಾರೆ.
Vijaya Karnataka Web arrest of four men
ರೌಡಿಶೀಟರ್‌ ಸೇರಿ ನಾಲ್ವರ ಬಂಧನ


ವಿಜಯ ಬಿಜವಾಡ, ವಿನಾಯಕ ಮೊರಬ, ಅಭಿಷೇಕ ಹುಬ್ಬಳ್ಳಿ ಮತ್ತು ಪ್ರಸಾದ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಡಿ.24ರಂದು ರಾತ್ರಿ 11.30ರ ವೇಳೆ ನಾಗಶೆಟ್ಟಿಕೊಪ್ಪದ ಬಾರ್‌ಗೆ ತೆರಳಿ ಸಾರಾಯಿ ನೀಡುವಂತೆ ಮಾಲೀಕ ಜಯಶೀಲ ಮಡಿವಾಳರನ್ನು ಒತ್ತಾಯಿಸಿದ್ದಾರೆ. ಇದಕ್ಕೆ ನಿರಾಕರಿಸಿದ್ದರಿಂದ ಆರೋಪಿಗಳು ಹಲ್ಲೆನಡೆಸಿದ್ದರು. ಅಲ್ಲದೇ ಅಂಗಡಿಯಲ್ಲಿಸಾಮಗ್ರಿಗಳನ್ನು ಧ್ವಂಸಗೊಳಿಸಿ, ಜೀವ ಬೆದರಿಕೆ ಹಾಕಿದ್ದರು. ಈ ಕುರಿತು ಕೇಶ್ವಾಪುರ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿತ್ತು.

ನಗರದ ವಿವಿಧ ಠಾಣೆ ವ್ಯಾಪ್ತಿಯಲ್ಲಿನಡೆದ ಅಪರಾಧ ಚಟುವಟಕೆಗಳಲ್ಲಿವಿಜಯ ಬಿಜವಾಡ ಭಾಗಿಯಾಗಿದ್ದ ಹಿನ್ನೆಲೆಯಲ್ಲಿ, ಹುಬ್ಬಳ್ಳಿ ಉಪನಗರ ಠಾಣೆ ಹಾಗೂ ಕೇಶ್ವಾಪುರ ಠಾಣೆಯಲ್ಲಿಈತ ವಿರುದ್ಧ ರೌಡಿಶೀಟರ್‌ ಪಟ್ಟಿ ಸಹ ತೆರೆಯಲಾಗಿದೆ. ಈ ಹಿಂದೆ ಎಂ.ಎನ್‌.ನಾಗರಾಜ ಪೊಲೀಸ್‌ ಕಮಿಷನರ್‌ ಆಗಿದ್ದ ವೇಳೆ, ಗಡಿಪಾರು ಸಹ ಮಾಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ