ಆ್ಯಪ್ನಗರ

ಕುಂದಗೋಳಕ್ಕೆ 1973ರಲ್ಲಿ ಆಗಮಿಸಿದ್ದ ಶಿವಕುಮಾರ ಶ್ರೀ

ಕುಂದಗೋಳ: ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ 1973ರಲ್ಲಿ ಪ್ರಥಮ ಬಾರಿಗೆ ಪಟ್ಟಣದ ಟಿಎಪಿಸಿಎಂ ಸೊಸೈಟಿ ರಜತ ಮಹೋತ್ಸವಕ್ಕೆ ಆಗಮಿಸಿದ್ದರು ಎಂದು ಸ್ಥಳೀಯರು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ.

Vijaya Karnataka 22 Jan 2019, 5:00 am
ಕುಂದಗೋಳ: ನಡೆದಾಡುವ ದೇವರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ 1973ರಲ್ಲಿ ಪ್ರಥಮ ಬಾರಿಗೆ ಪಟ್ಟಣದ ಟಿಎಪಿಸಿಎಂ ಸೊಸೈಟಿ ರಜತ ಮಹೋತ್ಸವಕ್ಕೆ ಆಗಮಿಸಿದ್ದರು ಎಂದು ಸ್ಥಳೀಯರು ಇಂದಿಗೂ ಸ್ಮರಿಸಿಕೊಳ್ಳುತ್ತಿದ್ದಾರೆ.
Vijaya Karnataka Web arrived in 1973 for the cave shivakumar shree
ಕುಂದಗೋಳಕ್ಕೆ 1973ರಲ್ಲಿ ಆಗಮಿಸಿದ್ದ ಶಿವಕುಮಾರ ಶ್ರೀ


ಸೊಸೈಟಿ ಅಂದಿನ ಅಧ್ಯಕ್ಷ ಸಂಶಿ ಗ್ರಾಮದ ದೇವೆಂದ್ರಪ್ಪ ಸುಂಕದ ರಜತ ಮುಹೋತ್ಸವದ ದಿನವನ್ನು ನೆನಯುತ್ತ ''ನಮ್ಮ ಸೊಸೈಟಿ ಆಡಳಿತ ಮಂಡಳಿ ಸದಸ್ಯರು ಅಂದು ಸಿದ್ಧಗಂಗಾ ಮಠಕ್ಕೆ ಭೇಟಿನೀಡಿ ಸೊಸೈಟಿ ರಜತ ಮಹೋತ್ಸವಕ್ಕೆ ಶಿವಕುಮಾರ ಸ್ವಾಮಿಗಳನ್ನು ಆಹ್ವಾನಿಸಿದಾಗ ಶ್ರೀಗಳು ನಗುಮೊಗದಲ್ಲೇ ಒಪ್ಪಿಕೊಂಡು ತಮ್ಮ ಸ್ವಂತ ಕಾರಿನಲ್ಲೇ ಕುಂದಗೋಳಕ್ಕೆ ಆಗಮಿಸಿದ್ದರು'' ಎಂದು ನೆನಪು ಬಿಚ್ಚಿಟ್ಟರು. ರಜತ ಮುಹೋತ್ಸವದ ಸಾನ್ನಿಧ್ಯ ವಹಿಸಿ ಮಂಡಳಿ ನಿರ್ದೇಶಕರೆಲ್ಲರೂ ''ಎಷ್ಟೇ ಕಷ್ಟಬಂದರೂ ಒಟ್ಟಾಗಿ ಕೆಲಸ ಮಾಡಿಕೊಂಡು ಮುನ್ನುಗ್ಗಿ, ರೈತಾಭಿವೃದ್ಧಿಗೆ ಹಾಗೂ ಕಾರ್ಮಿಕರಿಗೆ ಕಣ್ಣಾಗಿದ್ದುಕೊಂಡು ನೀವು ಸಾಗಿದರೆ ಮಾತ್ರ ನಿಮ್ಮ ಸೊಸೈಟಿ ದಶಕಗಳುದ್ದಕ್ಕೂ ನೂರಾರು ಬದುಕಿಗೆ ಜೀವತುಂಬಿದಂತೆ ಎಂದು'' ಶಿವಕುಮಾರ ಸ್ವಾಮೀಜಿ ಹೇಳಿದ ಮಾತುಗಳನ್ನು ಮೆಲುಕು ಹಾಕಿದರು. ಅಂದು ರಾಜ್ಯದಲ್ಲಿ ರಾಷ್ಟ್ರಪತಿ ಆಡಳಿತ ಕಾಲವಾದ್ದರಿಂದ ರಾಜ್ಯಪಾಲ ಮೋಹನಲಾಲ ಸುಕಾಡಿಯಾ ಅವರೂ ಆಗಮಿಸಿದ್ದರು ಎಂದು ಸುಂಕದ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ