Please enable javascript.Swamy Vivekananda Birthday,Sand Art By Manjunath Hiremath-ಮರಳಿನಲ್ಲಿ ಅರಳಿದ ಸ್ವಾಮಿ ವಿವೇಕಾನಂದ: ವರ್ಣರಂಜಿತ ಕಲಾಕೃತಿ ರಚಿಸಿದ ಕಲಾವಿದ ಮಂಜುನಾಥ ಹಿರೇಮಠ - artist manjunath hiremath creates sand art of swamy vivekanada - Vijay Karnataka

Sand Art By Manjunath Hiremath-ಮರಳಿನಲ್ಲಿ ಅರಳಿದ ಸ್ವಾಮಿ ವಿವೇಕಾನಂದ: ವರ್ಣರಂಜಿತ ಕಲಾಕೃತಿ ರಚಿಸಿದ ಕಲಾವಿದ ಮಂಜುನಾಥ ಹಿರೇಮಠ

Edited byGanesh | Lipi 24 Jan 2023, 5:53 pm
Subscribe

ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದಾಗ ಮಣ್ಣಿನಿಂದ ಶ್ರೀಗಳ ಕಲಾಕೃತಿ ರಚಿಸಿ ರಾಜ್ಯದ ಗಮನ ಸೆಳೆದಿದ್ದ ಧಾರವಾಡ ಮಣ್ಣಿನ ಶಾಲೆಯ ಕಲಾವಿದ ಮಂಜುನಾಥ ಹಿರೇಮಠ ಅವರು ಇದೀಗ ಸ್ವಾಮಿ ವಿವೇಕಾನಂದರ ಮರಳಿನ ಕಲಾಕೃತಿ ರಚಿಸಿದ್ದಾರೆ. ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಸ್ವಾಮಿ ವಿವೇಕಾನಂದ ಜಯಂತಿ ಸಂದರ್ಭದಲ್ಲಿ ರಚಿಸಲಾಗಿರುವ ಈ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದೆ.

ಹೈಲೈಟ್ಸ್‌:

  • ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಗಮನ ಸೆಳೆಯುತ್ತಿರುವ ಸ್ವಾಮಿ ವಿವೇಕಾನಂದರ ಮರಳಿನ ಕಲಾಕೃತಿ
  • ಸ್ವಾಮಿ ವಿವೇಕಾನಂದ ಜಯಂತಿ ಪ್ರಯುಕ್ತ ಮಣ್ಣಿನ ಶಾಲೆಯ ಕಲಾವಿದ ಮಂಜುನಾಥ್ ಹಿರೇಮಠ ಅವರಿಂದ ಕೈಚಳಕ
  • ತಂಡೋಪತಂಡವಾಗಿ ದೊಡ್ಡನಾಯಕನಕೊಪ್ಪಕ್ಕೆ ಬಂದು ಸ್ವಾಮಿ ವಿವೇಕಾನಂದರ ಕಲಾಕೃತಿ ನಮನ ಸಲ್ಲಿಸುತ್ತಿರುವ ಜನ
artist manjunath hiremath creates sand art of swamy vivekanada
Sand Art By Manjunath Hiremath-ಮರಳಿನಲ್ಲಿ ಅರಳಿದ ಸ್ವಾಮಿ ವಿವೇಕಾನಂದ: ವರ್ಣರಂಜಿತ ಕಲಾಕೃತಿ ರಚಿಸಿದ ಕಲಾವಿದ ಮಂಜುನಾಥ ಹಿರೇಮಠ
ಧಾರವಾಡ: ವಿಶ್ವ ಸಂತ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಮರಳಿನಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿ ಅರಳಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಈ ಆಕರ್ಷಕ ಮರಳಿನ ಕಲಾಕೃತಿಯೊಂದಿಗೆ ಸ್ವಾಮಿ ವಿವೇಕಾನಂದರ ಬದುಕು- ಬೋಧನೆ-ಆದರ್ಶಗಳನ್ನು ಯುವಜನತೆಗೆ ತಿಳಿಸಿಯುವ ಕಾರ್ಯವೂ ನಡೆಯುತ್ತಿದೆ.
ಧಾರವಾಡದ ದೊಡ್ಡನಾಯಕನಕೊಪ್ಪ ಬಡಾವಣೆಯಲ್ಲಿ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವ ಆಚರಿಸಲಾಗುತ್ತಿದ್ದು, ಇದರ ಅಂಗವಾಗಿ ದೊಡ್ಡನಾ ಯಕನಕೊಪ್ಪದಲ್ಲಿ ಧಾರವಾಡದ ಮಣ್ಣಿನ ಶಾಲೆಯ ಪರಿಸರ ಸ್ನೇಹಿ ಕಲಾವಿದರಾಗಿರುವ ಮಂಜುನಾಥ ಹಿರೇಮಠ ಅವರು ಮರಳಿನಲ್ಲಿ ಸ್ವಾಮಿ ವಿವೇಕಾನಂದರ ಕಲಾಕೃತಿ ರಚಿಸಿ ಅದಕ್ಕೆ ಬಣ್ಣ ಕೂಡ ಲೇಪನ ಮಾಡಿದ್ದಾರೆ. ದೊಡ್ಡನಾಯಕನಕೊಪ್ಪದ ಜನ ಈ ಮರಳು ಕಲಾಕೃತಿಗೆ ಮನಸೋತಿದ್ದು, ತಂಡೋಪಾದಿಯಲ್ಲಿ ಬಂದು ಮರಳಿನಲ್ಲಿ ಮಾಡಿದ ಸ್ವಾಮಿ ವಿವೇಕಾನಂದರ ಕಲಾಕೃತಿ ನಮನ ಸಲ್ಲಿಸಿದ್ದಾರೆ.

Clay Art Of Siddeshwara Sri -ನಡೆದಾಡುವ ದೇವರಿದ್ದಲ್ಲಿಗೆ ಹೋಗಲಾಗಲಿಲ್ಲ‌, ಮಣ್ಣಲ್ಲಿ ಅರಳಿದ ಶ್ರೀಗಳ ಕಣ್ತುಂಬಿಕೊಂಡು ಮತ್ತೆ ಹುಟ್ಟಿಬನ್ನಿರೆಂದು ಬೇಡಿಕೊಂಡೆವು...
ಸದ್ಯ ಮರಳಿನಲ್ಲಿ ಅರಳಿ ನಿಂತ ಸ್ವಾಮಿ ವಿವೇಕಾನಂದರ ಮೂರ್ತಿ ಎಲ್ಲರ ಗಮನ ಸೆಳೆಯುತ್ತಿದ್ದು, ದೊಡ್ಡನಾಯಕನಕೊಪ್ಪದ ಸುತ್ತಮುತ್ತಲಿನ ಜನರು ಈ ಕಲಾಕೃತಿಯನ್ನು ನೋಡಲು ಆಗಮಿಸುತ್ತಿದ್ದಾರೆ.

ವಿವೇಕಾನಂದರ ಬಗ್ಗೆ ಜಾಗೃತಿ

ಈ ಸಂದರ್ಭದಲ್ಲಿ ಹಳೆಯದನ್ನು ಪ್ರಶ್ನಿಸುವ ಒಂದು ಮುಖ್ಯ ಗುಣವನ್ನು ನಾವು ವಿವೇಕಾನಂದರಲ್ಲಿ ಕಾಣುವ ಕುರಿತು ಸವಿಸ್ತಾರವಾಗಿ ಸಾರ್ವಜನಿಕರಿಗೆ ತಿಳಿ ಹೇಳಲಾಯಿತು. ಸ್ವಾಮಿ ವಿವೇಕಾನಂದರ ತೀಕ್ಷ್ಣ ಬುದ್ಧಿಶಕ್ತಿಯ ಸಹಾಯದಿಂದ ಹಳೆಯ ಸಂಪ್ರದಾಯ ಮತ್ತು ಅವುಗಳಲ್ಲಿರುವ ದುರ್ಬಲ ಅಂಶಗಳನ್ನು ಎತ್ತಿ ತೋರಿಸಿದರು.

ಎಲ್ಲ ಬಗೆಯ ಮೂಢನಂಬಿಕೆಗಳನ್ನೂ ನಿರ್ದಾಕ್ಷಿಣ್ಯವಾಗಿ ಖಂಡಿಸಿದ್ದು ಹಳೆಯ ಸಂಪ್ರದಾಯದಲ್ಲಿ ಸಾವಿರಾರು ಹೊಸ ನಿರ್ಮಾಣಕ್ಕೆ ಸಾಕಾಗುವಷ್ಟು ಜೀವ ಶಕ್ತಿ ಇದೆ. ಹೊಸ ಪದ್ಧತಿಯು ಹಳೆಯದರ ವಿಕಾಸವಾಗಿರಬೇಕು ಎನ್ನುವುದರ ಕುರಿತು ಜಾಗೃತಿ ಯುವಕರಲ್ಲಿ ಆಶಾವಾದವು ವಿವೇಕಪೂರ್ಣವಾಗಿರಬೇಕು. ಯೌವನದ ಉತ್ಸಾಹದ ಹೊಳೆಯು ವಿವೇಕವೆಂಬ ಕಾಲುವೆಯ ಮೂಲಕ ಹರಿಯಬೇಕು.

ಧಾರವಾಡ: ಡಸ್ಟ್ ಆರ್ಟ್‌ನಲ್ಲಿ ಗಾನಸುಧೆ ಲತಾ ಮಂಗೇಶ್ಕರ್‌ಗೆ ಶೃದ್ದಾಂಜಲಿ ಸಲ್ಲಿಸಿದ ಕಲಾವಿದ
ಸ್ವಾಮಿ ವಿವೇಕಾನಂದರು ಅದ್ಭುತ ಆಶಾವಾದಿ, ಉಜ್ವಲ ಭವಿಷ್ಯ ಭಾರತದ ಸ್ಪಷ್ಟ ಕಲ್ಪನೆ ಹೇಗಿತ್ತು 'ವೇದಾಂತ ತತ್ವವು ಆಶಾವಾದವೂ ಅಲ್ಲ, ನಿರಾಶಾವಾದವೂ ಅಲ್ಲ. ಉಭಯ ದೃಷ್ಟಿಗಳನ್ನೂ ಅದು ವ್ಯಕ್ತಗೊಳಿಸುವುದು. ಇರುವುದನ್ನು ಇರುವಂತೆ ಸ್ವೀಕರಿಸುವುದು. ಈ ಪ್ರಪಂಚ ಒಳಿತು ಕೆಡುಕುಗಳ, ಸುಖ ದುಃಖಗಳ ಮಿಶ್ರಣ ಕುರಿತು ಜಾಗೃತಿ ಮಂಡಿಸಲಾಯಿತು.

ವಿವೇಕಾನಂದ ಜಯಂತಿ ಪ್ರಯುಕ್ತ ಕ್ರೀಡಾಕೂಟ

ಇನ್ನೊಂದು ಕಡೆ ಸಂತ ಸ್ವಾಮಿ ವಿವೇಕಾನಂದ ಜಯಂತ್ಯುತ್ಸವದ ಅಂಗವಾಗಿ ಧಾರವಾಡದ ಆರ್.ಎನ್.ಶೆಟ್ಟಿ ಕ್ರೀಡಾಂಗಣದಲ್ಲಿ ಹೋಟೆಲ್ ಒಡೆಯರ ಸಂಘದ ವತಿಯಿಂದ ಅವರ ಕುಟುಂಬಸ್ಥರಿಗಾಗಿ ವಿವಿಧ ಕ್ರೀಡಾಕೂಟ ಆಯೋಜನೆ ಮಾಡಲಾಗಿತ್ತು.

ಮಂಜುನಾಥ ಹಿರೇಮಠ ಅವರ ಮನೆಯಲ್ಲಿ ಆನ್‌ಲೈನ್‌ ಗಣೇಶ ಪೂಜೆ
ಹೋಟೆಲ್ ಒಡೆಯರ ಸಂಘದ ಕುಟುಂಬದ ಸದಸ್ಯರಿಗಾಗಿಯೇ ಆಯೋಜನೆಗೊಂಡಿದ್ದ ಈ ಕ್ರೀಡಾಕೂಟದಲ್ಲಿ 100 ಮೀಟರ್ ಓಟ, ರಿಂಗ್ ಎಸೆತ, ಗುಂಡು ಎಸೆತ ಸೇರಿದಂತೆ ಇತ್ಯಾದಿ ಕ್ರೀಡೆಗಳನ್ನು ಆಯೋಜನೆ ಮಾಡಲಾಗಿತ್ತು. ಈ ಕ್ರೀಡಾಕೂಟದಲ್ಲಿ ಹೋಟೆಲ್ ಒಡೆಯರ ಸಂಘದ ಸದಸ್ಯರು ಉತ್ಸಾಹದಿಂದಲೇ ಪಾಲ್ಗೊಂಡು ಎಲ್ಲರ ಗಮನಸೆಳೆದರು.

ಸಿದ್ದೇಶ್ವರಶ್ರೀಗಳ ಮಣ್ಣಿನ ಕಲಾಕೃತಿ ರಚಿಸಿದ್ದ ಹಿರೇಮಠ

ಕರ್ನಾಟಕ ಕಂಡ ಅಪರೂಪದ ಸಂತ ವಿಜಯಪುರ ಜ್ಞಾನಯೋಗಾಶ್ರಮದ ಶ್ರೀ ಸಿದ್ಧೇಶ್ವರ ಸ್ವಾಮೀಜಿ ಅವರು ಲಿಂಗೈಕ್ಯರಾದ ಮಾರನೇ ದಿನದೊಳಗೆ ಮಂಜುನಾಥ ಹಿರೇಮಠ್ ಅವರು ಶ್ರೀಗಳ ಮಣ್ಣಿನ ಕಲಾಕೃತಿಯನ್ನು ರಚಿಸಿ ಗಮನ ಸೆಳೆದಿದ್ದರು. ಒಟ್ಟು 11 ಕಿಲೋ ಗ್ರಾಂ ಜೇಡಿಮಣ್ಣನ್ನು ಬಳಸಿ ಶ್ರೀಗಳ 2 ಅಡಿ ಎತ್ತರದ ಮೂರ್ತಿಯನ್ನು ರಾತ್ರಿ ಬೆಳಗಾಗುವ ಹೊತ್ತಿಗೆ ತಯಾರಿಸಿದ್ದರು.
ಲೇಖಕರ ಬಗ್ಗೆ
Ganesh
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ