ಆ್ಯಪ್ನಗರ

ಅರವಿಂದ ಬೆಲ್ಲದರಿಗೆ ಸಚಿವ ಸ್ಥಾನ ನೀಡಲು ಆಗ್ರಹ

ಧಾರವಾಡ : ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ನಗರದ ಬಿಜೆಪಿ ಮುಖಂಡರ ನಿಯೋಗ ಶನಿವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದೆ.

Vijaya Karnataka 4 Aug 2019, 5:00 am
ಧಾರವಾಡ : ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ನಗರದ ಬಿಜೆಪಿ ಮುಖಂಡರ ನಿಯೋಗ ಶನಿವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿಕೊಂಡಿದೆ.
Vijaya Karnataka Web DRW-3NIJAGUNI6
ಧಾರವಾಡ ಶಾಸಕ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡುವಂತೆ ನಗರದ ಬಿಜೆಪಿ ಮುಖಂಡರ ನಿಯೋಗ ಶನಿವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಗೆ ಮನವಿ ಸಲ್ಲಿಸಿತು.


ಬೆಂಗಳೂರು ಡಾಲರ್ಸ ಕಾಲೋನಿಯಲ್ಲಿಯ ಬಿಎಸ್‌ವೈ ಮನೆಗೆ ಭೇಟಿ ನೀಡಿದ ನಿಯೋಗವು, ಧಾರವಾಡ ಜಿಲ್ಲೆಗೆ ಪ್ರಾತಿನಿಧ್ಯ ನೀಡುವಾಗ ಬೆಲ್ಲದ ಅವರನ್ನು ಪರಿಗಣಿಸುವಂತೆ ವಿನಂತಿಸಿದೆ.

ಬೆಲ್ಲದ ಕುಟುಂಬ ಸುಮಾರು 6 ಬಾರಿ ಕ್ಷೇತ್ರದ ಶಾಸಕರಾಗಿ ಸೇವೆ ಸಲ್ಲಿಸುತ್ತಿದೆ. ಚಂದ್ರಕಾಂತ ಬೆಲ್ಲದ 4 ಬಾರಿ ಶಾಸಕರಾಗಿ ಮತ್ತು ಅವರ ಮಗ ಅರವಿಂದ ಬೆಲ್ಲದ 2ನೇ ಬಾರಿ ಶಾಸಕರಾಗಿ ಜನಮನದಲ್ಲಿ ಇದ್ದಾರೆ. ಈ ಬಾರಿ ತಮ್ಮ ಸಚಿವ ಸಂಪುಟದಲ್ಲಿ ಅರವಿಂದ ಬೆಲ್ಲದ ಅವರಿಗೆ ಸಚಿವ ಸ್ಥಾನ ನೀಡಿದರೆ ಅವರು ರಾಜ್ಯದ ಮತ್ತು ಕ್ಷೇತ್ರದ ಅಭಿವೃದ್ದಿಯ ಕೆಲಸ ಮಾಡಲಿದ್ದಾರೆ. ಹೀಗಾಗಿ ಅವಕಾಶ ಮಾಡಿ ಕೊಡಿ ಎಂದು ವಿನಂತಿ ಮಾಡಿಕೊಂಡಿದ್ದಾರೆ.

ಅಲ್ಲದೇ ಮಾಜಿ ಮುಖ್ಯಮಂತ್ರಿ ಜಗದೀಶ ಶೆÜಟ್ಟರ ಅವರನ್ನೂ ಭೇಟಿ ಮಾಡಿದ ನಿಯೋಗ, ಬೆಲ್ಲದ ಅವರಿಗೆ ಸಚಿವ ಸ್ಥಾನಕ್ಕಾಗಿ ಪ್ರಯತ್ನ ಮಾಡಲು ವಿನಂತಿಸಿದ್ದಾರೆ.

ನಿಯೋಗದಲ್ಲಿ ಯಲ್ಲಪ್ಪ ಅರವಾಳದ, ಸಂಜಯ ಕಪಟಕರ, ವಿಜಯಾನಂದ ಶೆÜಟ್ಟಿ, ಶಿವಣ್ಣ ಬಡವಣ್ಣನವರ, ಮಲ್ಲಿಕಾರ್ಜುನ ಹೋರಕೇರಿ, ರಾಮಣ್ಣ ಬಡಿಗೇರ, ಸತೀಶ ಹಾನಗಲ್‌, ಮೋಹನ ರಾಮದುರ್ಗ, ಹನಮಂತ ಹರಿವಾಣ, ಚಂದ್ರಶೇಖರ ಮನಗುಂಡಿ, ಬಲರಾಮ ಕುಸುಗಲ, ಭೀಮು ಸವನೂರ, ಯಲ್ಲಪ್ಪ ಸವನೂರ,ಸಂತೋಷ ಸೋಗಿ, ಸುನೀಲ್‌ ಸಂಡೂರ, ವಿಜಯ ಸಾಬಳೆ, ಅಮೀತ ಪಾಟೀಲ, ಪವನ ತೀಟೆ, ಈರಣ್ಣ ಬಡಿಗೇರ್‌, ಎಸ್‌ ಬಿ ಪಾಟೀಲ, ಬಸವರಾಜ ಗರಗ ಮತ್ತಿತರರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ