ಆ್ಯಪ್ನಗರ

ಆಶಾ ಕಾರ‍್ಯಕರ್ತೆಯರ ಪಾತ್ರ ಹಿರಿದು

ಅಳ್ನಾವರ: ಸದೃಢ ದೇಶ ನಿರ್ಮಾಣದಲ್ಲಿಆಶಾ ಕಾರ್ಯಕರ್ತೆಯರ ಪಾತ್ರ ಹಿರಿದಾಗಿದೆ ಎಂದು ಅಳ್ನಾವರ ಪಿಎಸ್‌ಐ ಎಸ್‌.ಆರ್‌.ಕಣವಿ ಹೇಳಿದರು.ದಿ.ಅರ್ಬನ್‌ ಕೋ ಆಪ್‌ ಬ್ಯಾಂಕ್‌ ಕೊರೊನಾ ವಾರಿಯರ್ಸ್ಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

Vijaya Karnataka 11 Jun 2020, 5:00 am
ಅಳ್ನಾವರ: ಸದೃಢ ದೇಶ ನಿರ್ಮಾಣದಲ್ಲಿಆಶಾ ಕಾರ್ಯಕರ್ತೆಯರ ಪಾತ್ರ ಹಿರಿದಾಗಿದೆ ಎಂದು ಅಳ್ನಾವರ ಪಿಎಸ್‌ಐ ಎಸ್‌.ಆರ್‌.ಕಣವಿ ಹೇಳಿದರು.
Vijaya Karnataka Web asha activist is the role of the executive
ಆಶಾ ಕಾರ‍್ಯಕರ್ತೆಯರ ಪಾತ್ರ ಹಿರಿದು

ದಿ.ಅರ್ಬನ್‌ ಕೋ ಆಪ್‌ ಬ್ಯಾಂಕ್‌ ಕೊರೊನಾ ವಾರಿಯರ್ಸ್ಗಳಿಗೆ ಆಯೋಜಿಸಿದ್ದ ಸನ್ಮಾನ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ಆಶಾ ಕಾರ್ಯಕರ್ತೆಯರು ಯಾವುದೇ ಸ್ವಾರ್ಥವಿಲ್ಲದೇ ನಿತ್ಯವೂ ಆರೋಗ್ಯ ಇಲಾಖೆಯ ಜೊತೆಗೆ ಕೈ ಜೋಡಿಸಿ ಸಾರ್ವಜನಿಕ ಸೇವೆಯಲ್ಲಿತೊಡಗಿದ್ದಾರೆ. ಕೊರೊನಾ ಸೋಂಕು ತಡೆಯಲು ಶ್ರಮಿಸಿದವರಲ್ಲಿಇವರ ಪಾತ್ರ ಹೆಚ್ಚಿನದಿದೆ ಎಂದರು.

ಪ.ಪಂ. ಮುಖ್ಯಾಧಿಕಾರಿ ವೈ.ಜಿ.ಗದ್ದಿಗೌಡರ, ಬ್ಯಾಂಕ್‌ ನಿರ್ದೇಶಕ ರಾಜು ಅಷ್ಟೇಕರ ಮಾತನಾಡಿದರು. ಅಳ್ನಾವರ ತಾಲೂಕಿನ ಸುಮಾರು 28 ಆಶಾ ಕಾರ್ಯಕರ್ತೆಯರು, ಕಂದಾಯ, ಪೊಲೀಸ್‌ ಮತ್ತು ಪತ್ರಕರ್ತರನ್ನು ಸನ್ಮಾನಿಸಲಾಯಿತು. ಬ್ಯಾಂಕಿನ ಹಿರಿಯ ನಿರ್ದೇಶಕ ಶಿವಾನಂದ ಹೊಸಕೇರಿ ಸ್ವಾಗತಿಸಿದರು. ಜಾವೇದ ತೊಲಗಿ ವಂದಿಸಿದರು.

ಅಧ್ಯಕ್ಷ ಬಸವರಾಜ ತೇಗೂರ, ಉಪ ತಹಸೀಲ್ದಾರ ಶಿವಾನಂದ ಹೆಬ್ಬಳ್ಳಿ, ಪತ್ತಾರ, ಆರೋಗ್ಯ ನಿರೀಕ್ಷಕ ಮಧುಸೂದನ, ನಿರ್ದೇಶಕರಾದ ದುಂಡಮ್ಮ ತೇಗೂರ, ಮಲ್ಲಪ್ಪ ಗಾಣಿಗೇರ, ನಾರಾಯಣ ಗಡಕರ, ಎಸ್‌.ಜಿ.ಜಕಾತಿ, ನಾಗರಾಜ ಹಂಜಗಿ, ಮಧು ಬಡಸ್ಕರ, ಛಗನಲಾಲ ಪಟೇಲ, ಎ.ವ್ಹಿ.ಉಡುಪಿ, ವ್ಯವಸ್ಥಾಪಕ ಬಾಗೇವಾಡಿ ಮತ್ತಿತರರು ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ