ಆ್ಯಪ್ನಗರ

ಸಂಘ ಸಂಸ್ಥೆಗಳಿಂದ ಹರಿದು ಬಂದ ನೆರವು

ಧಾರವಾಡ : ಜಿಲ್ಲೆಯ ಮಳೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ರಾಜ್ಯದ ವಿವಿಧೆಡೆಯ ಸಣ್ಣ ವ್ಯಾಪಾರಿಗಳು, ಗೃಹಿಣಿಯರು, ಸರಕಾರಿ ನೌಕರರು, ಉದ್ಯಮಿಗಳು, ನಟರು, ಸಂಘ- ಸಂಸ್ಥೆಗಳು ಸೇರಿದಂತೆ ಅನೇಕರು ಅಗತ್ಯ ಸಾಮಗ್ರಿ, ಆಹಾರ ಹಾಗೂ ನಗದು ನೀಡುವ ಮೂಲಕ ನೆರವಿನ ಹಸ್ತ ಚಾಚಿದ್ದಾರೆ.

Vijaya Karnataka 11 Aug 2019, 5:00 am
ಧಾರವಾಡ : ಜಿಲ್ಲೆಯ ಮಳೆ ಸಂತ್ರಸ್ತರ ಪರಿಹಾರ ಕಾರ್ಯಗಳಿಗೆ ರಾಜ್ಯದ ವಿವಿಧೆಡೆಯ ಸಣ್ಣ ವ್ಯಾಪಾರಿಗಳು, ಗೃಹಿಣಿಯರು, ಸರಕಾರಿ ನೌಕರರು, ಉದ್ಯಮಿಗಳು, ನಟರು, ಸಂಘ- ಸಂಸ್ಥೆಗಳು ಸೇರಿದಂತೆ ಅನೇಕರು ಅಗತ್ಯ ಸಾಮಗ್ರಿ, ಆಹಾರ ಹಾಗೂ ನಗದು ನೀಡುವ ಮೂಲಕ ನೆರವಿನ ಹಸ್ತ ಚಾಚಿದ್ದಾರೆ.
Vijaya Karnataka Web HBL-1008-2-3-DRW-10NIJAGUNI4
ಕರ್ನಾಟಕ ವಿದ್ಯಾವರ್ಧಕ ಸಂಘದಿಂದ 1ಲಕ್ಷ ರೂ. ಸಂತ್ರಸ್ತರ ಪರಿಹಾರಕ್ಕಾಗಿ ಚೆಕ್‌ನ್ನು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ನೀಡಲಾಯಿತು.


ಹುಬ್ಬಳ್ಳಿಯ ವ್ಯಾಪಾರಿಗಳಾದ ಬಾಲಾಜಿ ಟ್ರೆಡಿಂಗ್‌ ಕಂಪನಿಯ ಮಾಲಿಕ ಮಂಜುನಾಥ ಹರ್ಲಾಪುರ ಐದು ಲಕ್ಷ ರೂ. ಮೌಲ್ಯದ ವಿವಿಧ ಆಹಾರ ಸಾಮಗ್ರಿ, ವಸ್ತುಗಳನ್ನು ಒಂದು ಲಾರಿ ಮೂಲಕ ತಂದು ಜಿಲ್ಲಾಡಳಿತದ ಸ್ವೀಕಾರ ಕೇಂದ್ರಕ್ಕೆ ನೀಡಿದರು. ಖ್ಯಾತ ಚಲನಚಿತ್ರ ನಟ ಯಶ್‌ ಅವರು ತಮ್ಮ ಯಶೋಮಾರ್ಗ ಫೌಂಡೇಶನ್‌ ಮೂಲಕ ಎರಡು ಲಾರಿಗಳಲ್ಲಿ ವಿವಿಧ ಆಹಾರ ಸಾಮಗ್ರಿ ವಸ್ತುಗಳನ್ನು ಕಳಿಸಿದ್ದಾರೆ. ಸಾರ್ವಜನಿಕರು ತಂಡೋಪತಂಡವಾಗಿ ಬಂದು ಸ್ವೀಕಾರ ಕೇಂದ್ರಕ್ಕೆ ದೇಣಿಗೆ ಸ್ವರೂಪದಲ್ಲಿ ಅನೇಕ ಅಗತ್ಯ ವಸ್ತುಗಳನ್ನು ನೀಡಿ ಮಾನವೀಯ ಮೌಲ್ಯ ಮೆರೆದಿದ್ದಾರೆ.

ಕವಿವ ಸಂಘದಿಂದ ಲಕ್ಷ ರೂ.ದೇಣಿಗೆ
ಮಳೆ ಹಾನಿಯನ್ನು ಪರಿಹಾರ ಕಾರ್ಯಗಳ ಮೂಲಕ ಅಭಿವೃದ್ಧಿ ಪಡಿಸಲು ಅನುವಾಗುವಂತೆ ಕರ್ನಾಟಕ ವಿದ್ಯಾರ್ವಧಕ ಸಂಘವು ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ಲಕ್ಷ ರೂ. ದೇಣಿಗೆ ನೀಡಿದೆ.ಶನಿವಾರ ಮಧ್ಯಾಹ್ನ ಜಿಲ್ಲಾಧಿಕಾರಿಗಳ ಕಚೇರಿಗೆ ಪದಾಧಿಕಾರಿಗಳೊಂದಿಗೆ ಆಗಮಿಸಿ ಸಂಘದ ಅಧ್ಯಕ್ಷ ನಾಡೋಜ ಡಾ. ಪಾಟೀಲ ಪುಟ್ಟಪ್ಪ, ಪರಿಹಾರದ ಚೆಕ್‌ನ್ನು ಜಿಲ್ಲಾಧಿಕಾರಿಗಳಿಗೆ ಹಸ್ತಾಂತರಿಸಿದರು. ಸಂಘದ ಪದಾಧಿಕಾರಿಗಳಾದ ಶಿವಣ್ಣ ಬೆಲ್ಲದ, ಕೃಷ್ಣ ಜೋಶಿ, ಪ್ರಕಾಶ ಎಸ್‌. ಉಡಿಕೇರಿ, ಸದಾನಂದ ಎಸ್‌. ಶಿವಳ್ಳಿ ಸೇರಿದಂತೆ ಕಾರ್ಯಕಾರಿ ಸಮಿತಿ ಸದಸ್ಯರು ಈ ವೇಳೆ ಹಾಜರಿದ್ದರು.

ಸ್ವೀಕೃತ ಸಾಮಗ್ರಿಗಳು:
ಆ 9 ರಿಂದ ಇಲ್ಲಿಯವರೆಗೆ ಜಿಲ್ಲೆಯ ಪರಿಹಾರ ಸ್ವೀಕಾರ ಕೇಂದ್ರದಲ್ಲಿ ಅನೇಕ ಸಾಮಗ್ರಿಗಳು ಸ್ವೀಕೃತಗೊಂಡಿವೆ. ನೀರು-4320 ಬಾಕ್ಸ್‌, ಅಕ್ಕಿ-11ಕ್ವಿಂಟಲ್‌, ಬ್ಲಾಂಕೆಟ್‌-500, ಬಿಸ್ಕಿಟ್‌-100 ಬಾಕ್ಸ್‌, ಬೆಡ್‌ಶೀಟ್‌-190, ಅಡುಗೆ ಎಣ್ಣೆ-30ಕೆಜಿ, ಸ್ಯಾನಿಟರ್‌, ನ್ಯಾಪಕಿನ್‌-5000, ನೀರಿನ ಲೋಟ-4000, ಚಹಾ ಲೋಟ್‌-4000, ಪೆಪರ್‌ ಪ್ಲೇಟ್‌-1000, ಸಾಬೂನು, ಟೂತ್‌ ಪೇಸ್ಟ್‌, ವಾಟರ್‌ಬಾಟಲ್‌ ಕಿಟ್‌-600, ಚಾಪೆ-100, ಹೊಸ್‌ ಬಟ್ಟೆ-400 ಸೇರಿದಂತೆ ಹಣ್ಣುಗಳು, ಹಾಲು, ರೊಟ್ಟಿ, ಹಳೆಯ ವಸ್ತುಗಳು ಸ್ವೀಕಾರವಾಗಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ