ಆ್ಯಪ್ನಗರ

ಮನೆ ಕಟ್ಟುವ ವಿಚಾರಕ್ಕೆ ವಕೀಲ ಮೇಲೆ ಹಲ್ಲೆ

ಧಾರವಾಡ: ನಗರದ ಕಮಲಾಪುರ ಹೊಸೂರ ಓಣಿಯಲ್ಲಿಮನೆ ಕಟ್ಟುವ ವಿಚಾರವಾಗಿ ವಕೀಲ ಹಾಗೂ ಆತನ ಇಬ್ಬರು ಸಹೋದರರ ಮೇಲೆ ಶುಕ್ರವಾರ ರಾತ್ರಿ ಹಲ್ಲೆನಡೆದಿದ್ದು, ಈ ಕುರಿತಂತೆ ಉಪನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

Vijaya Karnataka 13 Oct 2019, 5:00 am
ಧಾರವಾಡ: ನಗರದ ಕಮಲಾಪುರ ಹೊಸೂರ ಓಣಿಯಲ್ಲಿಮನೆ ಕಟ್ಟುವ ವಿಚಾರವಾಗಿ ವಕೀಲ ಹಾಗೂ ಆತನ ಇಬ್ಬರು ಸಹೋದರರ ಮೇಲೆ ಶುಕ್ರವಾರ ರಾತ್ರಿ ಹಲ್ಲೆನಡೆದಿದ್ದು, ಈ ಕುರಿತಂತೆ ಉಪನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.
Vijaya Karnataka Web attacks on lawyer for building house
ಮನೆ ಕಟ್ಟುವ ವಿಚಾರಕ್ಕೆ ವಕೀಲ ಮೇಲೆ ಹಲ್ಲೆ


ನ್ಯಾಯವಾದಿ ಯಲ್ಲಪ್ಪ ಬೆಳ್ಳಕ್ಕಿ ಹಾಗೂ ಅವರ ಸಹೋದರರಾದ ಪ್ರವೀಣ ಹಾಗೂ ಮಂಜುನಾಥ ಬೆಳ್ಳಕ್ಕಿ ಎಂಬುವವರೇ ಹಲ್ಲೆಗೊಳಗಾದವರು. ಚಂದ್ರಶೇಖರ ಕುಂಬಾರ, ಶಿವಾನಂದ, ಭೀಮರಾಜ (ರಾಜು), ರವಿ, ಮಲ್ಲಿಕಾರ್ಜುನ, ಕಿರಣ, ಸಂತೋಷ, ಆನಂದ ಎಂಬುವವರು ಸೇರಿ ಹಲ್ಲೆನಡೆಸಿದ್ದಾರೆ ಎಂದು ದೂರಲಾಗಿದೆ.

ಬೆಳ್ಳಕ್ಕಿ ಕುಟುಂಬದವರು ಪಾಲಿಕೆಯಿಂದ ಅನುಮತಿ ಪಡೆದು ಮನೆ ಕಟ್ಟಿಸುತ್ತಿದ್ದಾರೆ. ಆದರೆ ಕ್ಷುಲ್ಲಕ ಕಾರಣದಿಂದ ಕುಂಬಾರ ಕುಟುಂಬದವರು ಮೇಲಿಂದ ಮೇಲೆ ಜಗಳ ತೆಗೆದು ಅಡ್ಡಿಪಡಿಸುತ್ತಿದ್ದರು. ಈ ಸಂಬಂಧ ಹಲವು ಬಾರಿ ಹಿರಿಯರ ನೇತೃತ್ವದಲ್ಲಿಜಗಳ ಬಗೆಹರಿಸಲಾಗಿತ್ತು. ಶುಕ್ರವಾರ ಎಂದಿನಂತೆ ಮನೆ ಕಟ್ಟುವ ಕೆಲಸದಲ್ಲಿನಿರತರಾಗಿದ್ದ ವೇಳೆ ತಕರಾರು ತೆಗೆದ ಆರೋಪಿಗಳು ನ್ಯಾಯವಾದಿ ಯಲ್ಲಪ್ಪ, ಪ್ರವೀಣ, ಮಂಜುನಾಥನ ಮೇಲೆ ಹಲ್ಲೆನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.

ಘಟನೆ ವೇಳೆ ಸಂತೋಷ ಎಂಬಾತ ಚಾಕುವಿನಿಂದ ಯಲ್ಲಪ್ಪನ ಕೈಗೆ ಗಾಯಪಡಿಸಿದ್ದಾನೆ. ಉಳಿದವರು ಕಬ್ಬಿಣದ ರಾಡ್‌ ಹಾಗೂ ಕಟ್ಟಿಗೆಯಿಂದ ಹೊಡೆದು ಜೀವ ಬೆದರಿಕೆ ಹಾಕಿದ್ದಾರೆ ಎಂದು ವಕೀಲ ಯಲ್ಲಪ್ಪ ಉಪನಗರ ಠಾಣೆಗೆ ನೀಡಿದ ದೂರಿನಲ್ಲಿತಿಳಿಸಿದ್ದಾರೆ. ಉಪನಗರ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಕೇಸ್‌ ದಾಖಲಿಸಲು ಹಿಂದೇಟು
ಗಾಯಗೊಂಡ ವಕೀಲ ಯಲ್ಲಪ್ಪ, ಪ್ರವೀಣ ಉಪನಗರ ಠಾಣೆಗೆ ಹೋದರೆ ಪೊಲೀಸರು ದೂರು ದಾಖಲಿಸಲು ಹಿಂದೇಟು ಹಾಕಿದ್ದಾರೆ ಎಂದು ಠಾಣೆಗೆ ತೆರಳಿದ ಧಾರವಾಡ ಹಾಗೂ ಹೈಕೋರ್ಟ್‌ ವಕೀಲರ ಸಂಘದ ಪದಾಧಿಕಾರಿಗಳು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಧಿಕಾರಿಗಳು ಹಲ್ಲೆಮಾಡಿದವರ ರಕ್ಷಣೆಗೆ ನಿಂತಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವೇಳೆ ಪ್ರೊಬೇಷನರಿ ಪಿಎಸ್‌ಐ ವಕೀಲರೊಂದಿಗೆ ಅನುಚಿತವಾಗಿ ವರ್ತಿಸಿದ್ದು, ಅವರ ವಿರುದ್ಧ ಸೂಕ್ತ ಕ್ರಮ ಜರುಗಿಸಬೇಕು. ಪೊಲೀಸ್‌ ಆಯುಕ್ತರು ಪಿಎಸ್‌ಐ ವಿರುದ್ಧ ಕ್ರಮ ಜರುಗಿಸದಿದ್ದರೆ ಕಾನೂನು ಹೋರಾಟ ಮಾಡಲಾಗುವುದು ಎಂದು ಹಿರಿಯ ನ್ಯಾಯವಾದಿ ರಾಜಶೇಖರ ಎಚ್ಚರಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ