ಆ್ಯಪ್ನಗರ

ಪ್ರಾಮಾಣಿಕತೆ ಮೆರೆದ ಆಟೊ ಚಾಲಕ

ಹುಬ್ಬಳ್ಳಿ : ಪ್ರಯಾಣಿಕರು ಆಟೊದಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್‌ನ್ನು ಪೊಲೀಸ್‌ ಠಾಣೆಗೆ ಒಪ್ಪಿಸುವ ಮೂಲಕ ಆಟೊ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ.

Vijaya Karnataka 18 Mar 2019, 5:00 am
ಹುಬ್ಬಳ್ಳಿ : ಪ್ರಯಾಣಿಕರು ಆಟೊದಲ್ಲಿ ಬಿಟ್ಟು ಹೋಗಿದ್ದ ಬ್ಯಾಗ್‌ನ್ನು ಪೊಲೀಸ್‌ ಠಾಣೆಗೆ ಒಪ್ಪಿಸುವ ಮೂಲಕ ಆಟೊ ಚಾಲಕನೊಬ್ಬ ಪ್ರಾಮಾಣಿಕತೆ ಮೆರೆದಿದ್ದಾನೆ.
Vijaya Karnataka Web auto driver with honesty
ಪ್ರಾಮಾಣಿಕತೆ ಮೆರೆದ ಆಟೊ ಚಾಲಕ


ಗೋಕುಲ ಗ್ರಾಮದ ಶಬ್ಬೀರ್‌ಅಹ್ಮದ್‌ ಅತ್ತಾರ ಎಂಬುವರೇ ಪ್ರಾಮಾಣಿಕತೆ ಮೆರೆದ ಆಟೊ ಚಾಲಕನಾಗಿದ್ದಾರೆ. ಬೆಂಗಳೂರಿನ ನಿವಾಸಿಗಳಾದ ಎಂ.ಸಿ.ಎನ್‌.ಕುಮಾರ್‌ ಹಾಗೂ ಕುಟುಂಬಸ್ಥರು ಹುಬ್ಬಳ್ಳಿ ವಿಮಾನ ನಿಲ್ದಾಣದ ಎದುರಿನ ಖಾಸಗಿ ಹೊಟೇಲ್‌ವೊಂದರಲ್ಲಿ ತಂಗಿದ್ದರು. ಹೊಟೇಲ್‌ನಿಂದ ಭಾನುವಾರ ದುರ್ಗದ ಬೈಲಿಗೆ ಆಟೊ ಮೂಲಕ ಬಂದಿಳಿದಿದ್ದರು. ಈ ವೇಳೆ ಆಟೊದಲ್ಲಿಯೇ ತಮ್ಮ ಬ್ಯಾಗ್‌ನ್ನು ಬಿಟ್ಟು ಇಳಿದು ಹೋಗಿದ್ದರು.

ನಂತರ ಆಟೊ ಚಾಲಕ ಆಟೊ ಸ್ಟ್ಯಾಂಡಿಗೆ ಬಂದು ನೋಡಿದಾಗ ಬ್ಯಾಗ್‌ ಕಂಡಿದೆ. ತಕ್ಷಣವೇ ಆಟೊ ಚಾಲಕ ಬ್ಯಾಗನ್ನು ಗೋಕುಲ್‌ರೋಡ್‌ ಪೊಲೀಸ್‌ ಠಾಣೆಗೆ ಒಪ್ಪಿಸಿ ಪ್ರಾಮಾಣಿಕತೆ ಮೆರೆದಿದ್ದಾರೆ. ಬ್ಯಾಗ್‌ನಲ್ಲಿ ಎಟಿಎಂ ಕಾರ್ಡ್‌, ಗುರುತಿನ ಚೀಟಿ, 3 ಸಾವಿರ ರೂ.ನಗದು, ಡಾಲರ್ಸ್‌ ಕರೆನ್ಸಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ