ಆ್ಯಪ್ನಗರ

ಆಟೊ ಪರ್ಮಿಟ್‌ ರದ್ದತಿಗೆ ಆಗ್ರಹ

ಹುಬ್ಬಳ್ಳಿ :ಆಟೊ ಇನ್ಸೂರೆನ್ಸ್‌ , ಆಟೊ ಪಾಸಿಂಗ್‌ ದರ, ಡಿ.ಎಲ್‌. ಡ್ರೈವಿಂಗ್‌ ಲೈಸೆನ್ಸ್‌ ದರ, ಎಲ್‌ಪಿಜಿ ಗ್ಯಾಸ್‌ ದರ ಎರಿಕೆ ಖಂಡಿಸಿ. ಆಟೊ ಪರ್ಮಿಟ್‌ ರದ್ದು ಮಾಡುವಂತೆ ಒತ್ತಾಯಿಸಿ ಶುಕ್ರವಾರ ಲಕ್ಷ ್ಮಣ ಹಿರೇಕೆರೂರ ಆಟೊ ಚಾಲಕರ ಸಂಘದವರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

Vijaya Karnataka 7 Jul 2018, 5:00 am
ಹುಬ್ಬಳ್ಳಿ :ಆಟೊ ಇನ್ಸೂರೆನ್ಸ್‌ , ಆಟೊ ಪಾಸಿಂಗ್‌ ದರ, ಡಿ.ಎಲ್‌. ಡ್ರೈವಿಂಗ್‌ ಲೈಸೆನ್ಸ್‌ ದರ, ಎಲ್‌ಪಿಜಿ ಗ್ಯಾಸ್‌ ದರ ಎರಿಕೆ ಖಂಡಿಸಿ. ಆಟೊ ಪರ್ಮಿಟ್‌ ರದ್ದು ಮಾಡುವಂತೆ ಒತ್ತಾಯಿಸಿ ಶುಕ್ರವಾರ ಲಕ್ಷ ್ಮಣ ಹಿರೇಕೆರೂರ ಆಟೊ ಚಾಲಕರ ಸಂಘದವರು ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.
Vijaya Karnataka Web auto permit requests for cancellation
ಆಟೊ ಪರ್ಮಿಟ್‌ ರದ್ದತಿಗೆ ಆಗ್ರಹ


ಗಾಳಿ ದುರ್ಗಾ ದೇವಿ ದೇವಸ್ಥಾನದಿಂದ ಪ್ರಾರಂಭವಾದ ರಾರ‍ಯಲಿ ಬಸವ ವನ, ನಿಲಿಜನ್‌ ರಸ್ತೆ ಮಾರ್ಗವಾಗಿ ಸಂಗೊಳ್ಳಿ ರಾಯಣ್ಣ ವೃತ್ತಕ್ಕೆ ತಲುಪಿದ ಪ್ರತಿಭಟನಾಕಾರರು, ಸರ್ಕಾರದ ವಿರುದ್ಧ ಘೊಷಣೆ ಕೂಗುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ನಂತರ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ್‌ ಮೂಲಕ ಮುಖ್ಯಮಂತ್ರಿ ಕುಮಾರಸ್ವಾಮಿ, ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ ಅವರಿಗೆ ಮನವಿ ಸಲ್ಲಿಸಿದರು.

ಕರ್ನಾಟಕ ಅಸಂಘಟಿತ ಕಾರ್ಮಿಕರ ಭದ್ರತಾ ಮಂಡಳಿಯಿಂದ ಸಮಾಜಿಕ ಭದ್ರತೆ ಸೌಲಭ್ಯಗಳನ್ನು ಜಾರಿ ಮಾಡಬೇಕು. ಈಗಾಗಲೇ ಸರ್ಕಾರದ ಮುಂದಿರುವ ಅಸಂಘಟಿತ ಕಾರ್ಮಿಕರ ಭವಿಷ್ಯ ನಿಧಿ ಯೋಜನೆ ಜಾರಿಯಾಗಿ ಸೌಲಭ್ಯಗಳು ದೊರೆಯುವಂತಾಗಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.

ಈ ವೇಳೆ ಸಂಘದ ಅಧ್ಯಕ್ಷ ಹನುಮಂತಪ್ಪ ಪವಾಡಿ ಮಾತನಾಡಿ, ಸಿಎಂ ಕುಮಾರಸ್ವಾಮಿ ಅವರು ರೈತರ ಸಾಲ ಮನ್ನಾ ಮಾಡುವ ಭರದಲ್ಲಿ ಬೇರೆ ವರ್ಗದ ಬಡ ಜನರ ಹಿತ ಕಾಪಾಡುವಲ್ಲಿ ವಿಫಲರಾಗಿದ್ದಾರೆ. ಆಟೊ ಚಾಲಕರ ವಿವಿಧ ಬೇಡಿಕೆ ಈಡೆರಿಸುವಂತೆ ಒತ್ತಾಯಿಸಿ ಅನೇಕ ಬಾರಿ ಮನವಿ ಸಲ್ಲಿಸದರು, ಸರಕಾರ ಬಜೆಟ್‌ನಲ್ಲಿ ಅವುಗಳ ಬಗ್ಗೆ ಕ್ರಮ ಕೈಗೊಂಡಿಲ್ಲ. ಅಲ್ಲದೆ ಆಟೊ ಇನ್ಸೂರೆನ್ಸ್‌ ದರ, ಆಟೊ ಪಾಸಿಂಗ್‌ ದರ, ಡಿ.ಎಲ್‌. ಡ್ರೈವಿಂಗ್‌ ಲೈಸೆನ್ಸ್‌ ದರ, ಎಲ್‌ಪಿಜಿ ಗ್ಯಾಸ್‌ ದರ ಎರಿಕೆ ಮಾಡಿರುವದರಿಂದ ಬಡ ಆಟೊ ಚಾಲಕರಿಗೆ ತುಂಬಾ ಕಷ್ಟವಾಗುತ್ತದೆ. ಇದರಿಂದ ಆಟೊ ಚಾಲಕರು ಉಪ ಜೀವನ ನಡೆಸುವುದು ಸಹ ಕಷ್ಟವಾಗುತ್ತದೆ ಎಂದು ಹೇಳಿದರು.

ಪ್ರತಿಭಟನೆಯಲ್ಲಿ ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಾಶ ಉಳ್ಳಾಗಡ್ಡಿ, ಪದಾಧಿಕಾರಿಗಳಾದ ಮಂಜುನಾಥ ಉಳ್ಳಾಗಡ್ಡಿ, ರಾಜು ಕಾಲವಾಡ, ಮಾರುತಿ ಕಂದಗಲ್‌, ವಿಜಯ ಚಿಕ್ಕೇರಿ, ವಿಜಯ ವಿಭೂತಿ, ಬಸವರಾಜ ಕುರುಬರ, ಮಹೇಶ ಕ್ಯಾಲಕೊಂಡ, ಮಕ್ಬಲ ಚಾಚಾ, ಹನುಮಂತ, ಗುರುರಾಜ ಪೂಜಾರ, ಇರ್ಫಾನ್‌ ಬೇಪಾರಿ, ಜಾಫರ ಶೇಖ, ಮುಸ್ತಾಕ ಖತೀಬ, ಗುರುನಾಥ ಭಾವೂರ, ಕಿರಣ ಹದ್ಲಿ, ರಾಜು ಹುಲ್ಲಿಕೇರಿ, ಶಿವಾನಂದ ಬನ್ಸೊಡೆ, ಕೃಷ್ಣಾ ಬೊಸಲೆ, ರಾಮು ಕಂಬಳಿ ಮಂಜುನಾಥ ಸೂಡಿ ಸೇರಿದಂತೆ ಅನೇಕರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ