ಆ್ಯಪ್ನಗರ

ಪ್ರಶಸ್ತಿಗಳು ವ್ಯಕ್ತಿಯ ಜವಾಬ್ದಾರಿ ಹೆಚ್ಚಿಸುತ್ತವೆ

ಧಾರವಾಡ: ವ್ಯಕ್ತಿಗೆ ದೊರೆಯುವ ಪ್ರಶಸ್ತ್ತಿಗಳು ಆತನ ಜವಾಬ್ದಾರಿ ಹೆಚ್ಚಿಸುತ್ತವೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರದ ಉಪ ಪೋಲಿಸ್‌ ಆಯುಕ್ತ ಎಂ.ಎನ್‌ ರುದ್ರಪ್ಪ ಹೇಳಿದರು.

Vijaya Karnataka 26 Aug 2019, 5:00 am
ಧಾರವಾಡ: ವ್ಯಕ್ತಿಗೆ ದೊರೆಯುವ ಪ್ರಶಸ್ತ್ತಿಗಳು ಆತನ ಜವಾಬ್ದಾರಿ ಹೆಚ್ಚಿಸುತ್ತವೆ ಎಂದು ಹುಬ್ಬಳ್ಳಿ-ಧಾರವಾಡ ಮಹಾನಗರದ ಉಪ ಪೋಲಿಸ್‌ ಆಯುಕ್ತ ಎಂ.ಎನ್‌ ರುದ್ರಪ್ಪ ಹೇಳಿದರು.
Vijaya Karnataka Web awards increase individual responsibility
ಪ್ರಶಸ್ತಿಗಳು ವ್ಯಕ್ತಿಯ ಜವಾಬ್ದಾರಿ ಹೆಚ್ಚಿಸುತ್ತವೆ


ಎಂ.ಎನ್‌ ರುದ್ರಪ್ಪ ಅವರಿಗೆ ರಾಷ್ಟ್ರಪತಿಗಳ ಸೇವಾ ಪದಕ ದೊರೆತ ನಿಮಿತ್ತ ನಗರದ ಜೆಎಸ್‌ಎಸ್‌ ಕಾಲೇಜಿನಲ್ಲಿ ಜನತಾ ಶಿಕ್ಷ ಣ ಸಮಿತಿ ವತಿಯಿಂದ ಹಮ್ಮಿಕೊಂಡ ಸನ್ಮಾನ ಸಮಾರಂಭದಲ್ಲಿ ಇತ್ತೀಚೆಗೆ ಅವರು ಮಾತನಾಡಿದರು.

ಪ್ರಶಸ್ತಿಗಳು ಕರ್ತವ್ಯದಲ್ಲಿರುವ ಅವನ ಪ್ರತಿ ಹೆಜ್ಜೆಯಲ್ಲೂ ಎಚ್ಚರಿಸುತ್ತವೆ. ಪ್ರಾಮಾಣಿಕತೆಯಿಂದ ಕಾರ್ಯ ನಿರ್ವಹಿಸಿದರೆ ಪ್ರಶಸ್ತಿಗಳು ತಾನಾಗಿಯೇ ಹುಡುಕಿಕೊಂಡು ಬರುತ್ತವೆ ಎಂದರು.

ಜನತಾ ಶಿಕ್ಷ ಣ ಸಮಿತಿ ವಿತ್ತಾಧಿಕಾರಿ ಡಾ.ಅಜಿತ ಪ್ರಸಾದ ಮಾತನಾಡಿ, ಎಂ.ಎನ್‌ ರುದ್ರಪ್ಪನವರು ಮೂಲತಃ ಪ್ರಾಧ್ಯಾಪಕ ವೃತ್ತಿಯಿಂದ ಬಂದಿರುವ ಅವರಿಗೆ ಧಾರವಾಡದ ಭೂಮಿಯೇ ಕರ್ಮಭೂಮಿಯಾಗಿದೆ. ಅವರ ದಕ್ಷ ತೆ, ಪ್ರಾಮಾಣಿಕ ಸೇವೆಗೆ ಈ ಅತ್ಯುನ್ನತ ಪ್ರಶಸ್ತಿ ಅರಸಿ ಬಂದಿದ್ದು, ಧಾರವಾಡಕ್ಕೂ ಹೆಮ್ಮೆಯ ಗರಿ ಮೂಡಿದಂತಾಗಿದೆ ಎಂದರು.

ಮಹಾವೀರ ಉಪಾದ್ಯೆ ಮಾತನಾಡಿ, ಸಾವಿರಾರು ಶಿಷ್ಯ ಬಳಗವನ್ನು ಹೊಂದಿರುವ ರುದ್ರಪ್ಪನವರು ಕ್ರೀಡಾ ಸಾಧಕರಾಗಿ ಪೊಲೀಸ್‌ ಇಲಾಖೆಯಲ್ಲಿ ವಿಶಿಷ್ಟ ಸೇವೆ ಸಲ್ಲಿಸಿ ನಗರವನ್ನು ಶಾಂತಿ ಪ್ರಿಯರ ನಗರವನ್ನಾಗಿ ಮಾಡಿದ್ದಾರೆ. ಮೃದು, ಮಿತಭಾಷಿಗಳಾದ ಅವರಿಗೆ ಸೇವೆ ಇನ್ನೂ ಧಾರವಾಡಕ್ಕೆ ದೊರಕಲಿ ಎಂದು ಹಾರೈಸಿದರು.

ಜೆಎಸ್‌ಎಸ್‌ನ ದೈಹಿಕ ನಿರ್ದೇಶಕ ಜಿನೇಂದ್ರ ಕುಂದಗೋಳ, ಡಾ.ಜಿನದತ್ತ ಹಡಗಲಿ, ಸೂರಜ ಜೈನ್‌, ಡಾ.ಜಿ.ಕೃಷ್ಣಮೂರ್ತಿ, ಡಾ. ಅರುಣ ಶಿರಹಟ್ಟಿ, ಚೆನ್ನು ನೂಲ್ವಿ ಸೇರಿದಂತೆ ಉಪಸ್ಥಿತರಿದ್ದರು.


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ