ಆ್ಯಪ್ನಗರ

ಗ್ರಾಹಕರಲ್ಲಿ ಜಾಗ್ರತಿ ಕಾರ್ಯಕ್ರಮ

ಕಲಘಟಗಿ : ಪಟ್ಟಣದ ಬಸ್‌ ಸ್ಟ್ಯಾಂಡ ಬಳಿ ಇರುವ ಹೆಸ್ಕಾಂ ಕಚæೕರಿಯಲ್ಲಿ ವಿದ್ಯುತ ಬಳಕೆಯಲ್ಲಿ ಸುರಕ್ಷ ತಾ ಹಾಗೂ ಉಳಿತಾಯದ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಕಾರ್ಯಕ್ರಮ ನಡಯಿತು.

Vijaya Karnataka 25 Jul 2019, 5:00 am
ಕಲಘಟಗಿ : ಪಟ್ಟಣದ ಬಸ್‌ ಸ್ಟ್ಯಾಂಡ ಬಳಿ ಇರುವ ಹೆಸ್ಕಾಂ ಕಚæೕರಿಯಲ್ಲಿ ವಿದ್ಯುತ ಬಳಕೆಯಲ್ಲಿ ಸುರಕ್ಷ ತಾ ಹಾಗೂ ಉಳಿತಾಯದ ಬಗ್ಗೆ ಗ್ರಾಹಕರಲ್ಲಿ ಜಾಗೃತಿ ಕಾರ್ಯಕ್ರಮ ನಡಯಿತು.
Vijaya Karnataka Web awareness program among consumers
ಗ್ರಾಹಕರಲ್ಲಿ ಜಾಗ್ರತಿ ಕಾರ್ಯಕ್ರಮ


ಎಇಇ ಹರ್ಷಾ ಬೆಂತೂರ ಮಾತನಾಡಿ ಗ್ರಾಹಕರು ಯಾವಾಗಲೂ ಐಎಸ್‌ಐ ಅಂಗೀಕೃತ ಗುಣಮಟ್ಟದ ವಿದ್ಯುತ ಸಾಮಗ್ರಿ ಬಳಸಬೇಕು. ಅರ್ಥಲೀಕೇಜ್‌ ಸಕ್ರ್ಯೂಟ ಬ್ರೇಕರ್‌ ಅಳವಡಿಸಬೇಕು. ಪ್ಲಗ್‌,ಸಾಕೇಟ ಮಕ್ಕಳ ಕೈಗೆ ಎಟುಕದೆ ಇರದಂತೆ ನೋಡಿಕೊಳ್ಳಲು ಸೂಚಿಸಿದರು. ದುರಸ್ತಿಗೆ ಎಲೆಕ್ಟ್ರೀಷಿಯನಗಳನ್ನು ಕರೆಯಿರಿ. ವಿದ್ಯುತ ಉಪಕರಣಗಳ ಹತ್ತಿರ ಬೆಂಕಿ ಕಂಡು ಬಂದರೆ ಸ್ವಿಚ್‌ ಆಫ್‌ ಮಾಡಿರಿ ಎಂದು ತಿಳಿಸಿದರು.

ಎಂಜನಿಯರ್‌ ಚಂದ್ರಶೇಕರ ಕಳ್ಳಿಮಠವರು ರೈತರು ಪ್ರಾಣಿಗಳನ್ನು ವಿದ್ಯುತ್‌ ಕಂಬಕ್ಕೆ ಕಟ್ಟುವುದಾಗಲಿ ವಿದ್ಯುತ್‌ ಕಂಬಗಳನ್ನು ಹತ್ತುವುದಾಗಲಿ ಹಸಿಯಾದ ಕೈಗಳಿಂದ ವಿದ್ಯುತ ಉಪಕರಣ ಮುಟ್ಟುವುದಾಗಲಿ ಮಾಡಬಾರದೆಂದು ತಿಳಿಸಿದರು.

ಎಂಜನಿಯರ್‌ ರವೀಂದ್ರ ಮಾತನಾಡಿ ಸಾಧ್ಯವಾದಷ್ಟು ವಿದ್ಯುತ ಉಳಿತಾಯ ಮಡಬೇಕು ಸೂಲಾರ ಬಳಸಬೇಕು ಉಳಿತಾಯಕ್ಕಾಗಿ ಎಲ್‌ಇಡಿ ಬಲ್ಬಗಳನ್ನು ಬಳಕೆ ಮಾಡಬೇಕು. ಅನವಶ್ಯಕವಾಗಿ ವಿದ್ಯುತ ಸೋರುವಿಕೆ ತಡೆಯಬೇಕು ಎಂದರು.

ವೀರೇಶ ಮೆಣಸಿನಕಾಯಿ ಇವರು 1912 ವಿದ್ಯುತ ಸಹಯವಾಣಿ ಬಗ್ಗೆ ತಿಳಿಸಿದರು. ಶಾಖಾಧಿಕಾರಿ ಎನ್‌.ಎಸ್‌.ಮೂಗನೂರ. ನಿರೂಪಿದರು. ರಾಜು.ಉಡುಪಿ.ರಾಜು ಲಮಾಣಿ ಮುಂತಾದ ಸಾರ್ವಜನಿಕರು ಹಾಜರಿದ್ದರು ವೀರೇಶ ಮೆಣಸಿನಕಾಯಿ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ