ಆ್ಯಪ್ನಗರ

ಮೈಸೂರು ಜೈಲಲ್ಲಿದ್ದ ಬಚ್ಚಾಖಾನ ಪೊಲೀಸ್‌ ಕಸ್ಟಡಿಗೆ

ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆಯ ಅಲ್ತಾಜ್‌ ಹೋಟೆಲ್‌ ಬಳಿ ಆಗಸ್ಟ್‌ 6 ರಂದು ನಡೆದಿದ್ದ ಫ್ರೂಟ್‌ ಇರ್ಫಾನ್‌ ಹತ್ಯೆಗೆ ಸಂಬಂಧಪಟ್ಟಂತೆ ಮೈಸೂರು ಜೈಲಿನಲ್ಲಿದ್ದ ಬಚ್ಚಾಖಾನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಕಸ್ಟಡಿ ಪಡೆದು ಕರೆದುಕೊಂಡು ಬಂದಿದ್ದಾರೆ.

Vijaya Karnataka 20 Sep 2020, 5:00 am
ಹುಬ್ಬಳ್ಳಿ: ಇಲ್ಲಿನ ಕಾರವಾರ ರಸ್ತೆಯ ಅಲ್ತಾಜ್‌ ಹೋಟೆಲ್‌ ಬಳಿ ಆಗಸ್ಟ್‌ 6 ರಂದು ನಡೆದಿದ್ದ ಫ್ರೂಟ್‌ ಇರ್ಫಾನ್‌ ಹತ್ಯೆಗೆ ಸಂಬಂಧಪಟ್ಟಂತೆ ಮೈಸೂರು ಜೈಲಿನಲ್ಲಿದ್ದ ಬಚ್ಚಾಖಾನನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಕಸ್ಟಡಿ ಪಡೆದು ಕರೆದುಕೊಂಡು ಬಂದಿದ್ದಾರೆ.
Vijaya Karnataka Web bacha khan arrested in mysore jail for police custody
ಮೈಸೂರು ಜೈಲಲ್ಲಿದ್ದ ಬಚ್ಚಾಖಾನ ಪೊಲೀಸ್‌ ಕಸ್ಟಡಿಗೆ


ಶೂಟ್‌ ಮಾಡಿದ್ದ ಮೂವರು ಸೇರಿದಂತೆ ಒಟ್ಟು 11 ಜನರನ್ನು ಹಳೇ ಹುಬ್ಬಳ್ಳಿ ಠಾಣೆ ಪೊಲೀಸರು ಈಗಾಗಲೇ ವಶಕ್ಕೆ ಪಡೆದಿದ್ದಾರೆ. ಫ್ರೂಟ್‌ ಇರ್ಫಾನ್‌ ಹತ್ಯೆಗೆ ರಿಯಲ್‌ ಎಸ್ಟೆಟ್‌ ದಂಧೆಯೇ ಕಾರಣ ಎಂಬ ಮಾತುಗಳು ಕೇಳಿ ಬಂದಿದ್ದವು. ಬಂಧಿತರಲ್ಲಿಇಬ್ಬರು ಮೈಸೂರು ಜಿಲ್ಲೆಗೆ ಸೇರಿದವರಾಗಿದ್ದು, ಬಚ್ಚಾಖಾನ್‌ ಸಹಚರರು ಎಂದು ಪೊಲೀಸರಿಗೆ ಗೊತ್ತಾಗಿತ್ತು. ಇನ್ನು್ನ ಸುಪಾರಿ ಕೊಟ್ಟಿರುವವರಲ್ಲಿಬಚ್ಚಾಖಾನ್‌ ಪಾತ್ರ ಇದೆ ಎಂಬ ಮಾಹಿತಿ ಹರಿದಾಡಿತ್ತು.

ಈ ಹಿನ್ನೆಲೆಯಲ್ಲಿಮೈಸೂರು ಜೈಲಲ್ಲಿರುವ ಬಚ್ಚಾಖಾನನನ್ನು ಇದೀಗ ಕಸ್ಟಡಿಗೆ ತೆಗೆದುಕೊಂಡು ಕರೆದುಕೊಂಡು ಬಂದಿದ್ದಾರೆ. ಕೊಲೆಯಲ್ಲಿಬಚ್ಚಾಖಾನ ಪಾತ್ರ ಎಷ್ಟಿದೆ ಎಂಬ ಬಗ್ಗೆ ವಿವಿಧ ಆಯಾಮದಲ್ಲಿಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಈ ಪ್ರಕರಣದ ವಿಚಾರಣೆಯನ್ನು ಹಳೇ ಹುಬ್ಬಳ್ಳಿ ಠಾಣೆಯ ಪಿಐ ಶಿವಾನಂದ ಕಮತಗಿ ಸೇರಿದಂತೆ ಮತ್ತಿತರರ ಪೊಲೀಸ್‌ ಅಧಿಕಾರಿಗಳ ತಂಡ ನಡೆಸುತ್ತಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ