ಆ್ಯಪ್ನಗರ

30ರಂದು ಬಡಿಗೇರ್‌ ಅವರಿಗೆ ಸನ್ಮಾನ

ಧಾರವಾಡ : ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸಮಗ್ರ ಕರ್ನಾಟಕ ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ಜೂ.30 ರಂದು ಬೆಳಗ್ಗೆ 9ಕ್ಕೆ ಹಿರಿಯ ಪೊಲೀಸ್‌ ಅಧಿಕಾರಿ ಎ.ಆರ್‌.ಬಡಿಗೇರ ಅವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.

Vijaya Karnataka 26 Jun 2019, 5:00 am
ಧಾರವಾಡ : ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ. ದೇಶಪಾಂಡೆ ಸಭಾಭವನದಲ್ಲಿ ಸಮಗ್ರ ಕರ್ನಾಟಕ ಶ್ರೀ ವಿಶ್ವಕರ್ಮ ಸಮಾಜದ ವತಿಯಿಂದ ಜೂ.30 ರಂದು ಬೆಳಗ್ಗೆ 9ಕ್ಕೆ ಹಿರಿಯ ಪೊಲೀಸ್‌ ಅಧಿಕಾರಿ ಎ.ಆರ್‌.ಬಡಿಗೇರ ಅವರಿಗೆ ಸನ್ಮಾನ ಸಮಾರಂಭ ಆಯೋಜಿಸಲಾಗಿದೆ.
Vijaya Karnataka Web badigere felicitated on 30th
30ರಂದು ಬಡಿಗೇರ್‌ ಅವರಿಗೆ ಸನ್ಮಾನ


ಅಂದು ಬಾಗಲಕೋಟೆ ಜಿಲ್ಲೆ ಗದ್ದನಕೇರಿಯ ಶ್ರೀ ಗಂಗಾಧರ ಮಹಾಸ್ವಾಮೀಜಿ ಸಾನ್ನಿಧ್ಯದಲ್ಲಿ ನಡೆಯುವ ಸಮಾರಂಭದಲ್ಲಿ ಬಡಿಗೇರರನ್ನು ವಿಶ್ವಕರ್ಮ ಸಮಾಜದ ವತಿಯಿಂದ ಸನ್ಮಾನಿಸಿ ಗೌರವ ಸಲ್ಲಿಸಲಾಗುವುದು. ಶಾಸಕ ಅಮೃತ ದೇಸಾಯಿ ಉದ್ಘಾಟಿಸುವರು. ಅಖಿಲ ಭಾರತೀಯ ವಿಶ್ವಕರ್ಮ ಛಾತ್ರಾ ಯುವ ಸಂಘದ ರಾಷ್ಟ್ರೀಯ ಅಧ್ಯಕ್ಷ ಸಂತೋಷ ಬಡಿಗೇರ ಅಧ್ಯಕ್ಷ ತೆ ವಹಿಸುವರು. ಸಮಗ್ರ ಕರ್ನಾಟಕ ವಿಶ್ವಕರ್ಮ ಸಮಾಜ ಸಂಘಟನೆ ರಾಜ್ಯಾಧ್ಯಕ್ಷೆ ಸುವರ್ಣಾ ಪತ್ತಾರ, ಡಿ.ವಿ. ಕಮ್ಮಾರ, ಹು-ಧಾ ಪಾಲಿಕೆ ಮಾಜಿ ಸದಸ್ಯ ನಿಂಗಪ್ಪ ಬಡಿಗೇರ, ಪ್ರಕಾಶ ಶಹಾಪುರಕರ, ಗುತ್ತಿಗೆದಾರ ಕಾಳಪ್ಪ ಬಡಿಗೇರ, ಎನ್‌.ಕೆ. ಗಿರಿಯಾಚಾರ್ಯ, ಭೀಮಪ್ಪ ಯರಜೇರಿ ಮುಖ್ಯ ಅತಿಥಿಯಾಗಿ ಆಗಮಿಸುವರು ಎಂದು ಪ್ರಕಟಣೆ ತಿಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ