ಆ್ಯಪ್ನಗರ

‘ಬ್ಯಾಂಕ್‌ಗಳು ಆರ್‌ಬಿಐ ಮಾರ್ಗದರ್ಶಿ ಪಾಲಿಸುತ್ತಿಲ್ಲ’

ಧಾರವಾಡ : ಆರ್‌.ಬಿ.ಐ. ಮಾರ್ಗದರ್ಶಿ ಪ್ರಕಾರ ಬ್ಯಾಂಕಿನವರು ನಡೆದುಕೊಳ್ಳುತ್ತಿಲ್ಲ. ಇಷ್ಟೆಲ್ಲ ಆಗುತ್ತಿದ್ದರೂ ಕೇಂದ್ರ ಸರಕಾರ ಕಣ್ಣು ಮುಚ್ಚಿ ಕುಳಿತುಕೊಂಡಿದೆ ಎಂದು ನವಲಗುಂದದ ಮಾಜಿ ಶಾಸಕ ಎನ್‌.ಎಚ್‌.ಕೋನರೆಡ್ಡಿ ಕಿಡಿ ಕಾರಿದ್ದಾರೆ.

Vijaya Karnataka 5 Nov 2018, 5:00 am
ಧಾರವಾಡ : ಆರ್‌.ಬಿ.ಐ. ಮಾರ್ಗದರ್ಶಿ ಪ್ರಕಾರ ಬ್ಯಾಂಕಿನವರು ನಡೆದುಕೊಳ್ಳುತ್ತಿಲ್ಲ. ಇಷ್ಟೆಲ್ಲ ಆಗುತ್ತಿದ್ದರೂ ಕೇಂದ್ರ ಸರಕಾರ ಕಣ್ಣು ಮುಚ್ಚಿ ಕುಳಿತುಕೊಂಡಿದೆ ಎಂದು ನವಲಗುಂದದ ಮಾಜಿ ಶಾಸಕ ಎನ್‌.ಎಚ್‌.ಕೋನರೆಡ್ಡಿ ಕಿಡಿ ಕಾರಿದ್ದಾರೆ.
Vijaya Karnataka Web banks do not follow rbi guidelines
‘ಬ್ಯಾಂಕ್‌ಗಳು ಆರ್‌ಬಿಐ ಮಾರ್ಗದರ್ಶಿ ಪಾಲಿಸುತ್ತಿಲ್ಲ’


ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರಕಾರ ಈಗಾಗಲೇ ರೈತರ ಸಾಲ ಮನ್ನಾ ಮಾಡಿದೆ. ಆದರೆ ಕೇಂದ್ರ ಸರಕಾರ ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿದಂತೆ ಮಾಡುತ್ತಿದೆ. ಕಟಬಾಕಿ ಸಾಲವನ್ನು ತುಂಬಲು ಅವಕಾಶ ನೀಡುತ್ತಿಲ್ಲ ಎಂದರು.

ಆರ್‌.ಬಿ.ಐ. ಮಾರ್ಗದರ್ಶನದ ಅಡಿಯಲ್ಲಿ ರೈತರ ಕಟಬಾಕಿಯ ಅಸಲಿನಲ್ಲಿ ಶೇ.40ರಷ್ಟು ಹಾಗೂ ಬಡ್ಡಿಯನ್ನು ಸಂಪೂರ್ಣ ಬಿಡಬೇಕು ಎಂದು ಆರ್‌ಬಿಐ ಗೈಡ್‌ಲೈನ್ಸ್‌ ಇದೆ. ಈ ನಿಯಮ ಎಲ್ಲ ರಾಜ್ಯಗಳಲ್ಲೂ ಜಾರಿಯಲ್ಲಿ ಇದ್ದು ಇದನ್ನು ಕರ್ನಾಟಕಕ್ಕೂ ಅನ್ವಯಿಸಬೇಕು. ಈ ವಿಷಯದಲ್ಲಿ ಕೇಂದ್ರ ಹಣಕಾಸು ಸಚಿವರು ಗಮನ ಹರಿಸಬೇಕು. ರಾಜ್ಯ ಸರಕಾರ 2 ಲಕ್ಷ ರೂ. ವರೆಗೆ ರೈತರ ಸಾಲ ಮನ್ನಾ ಮಾಡುತ್ತಿದೆ. ಹೀಗಾಗಿ ಬಾಕಿ ಸಾಲಪಾವತಿ ವಿಚಾರದಲ್ಲಿ ರೈತರನ್ನು ಬಂಧಿಸಬಾರದು. ಹೀಗಾದರೆ ನಿಮಗೆ ಒಳ್ಳೆಯದಾಗುವುದಿಲ್ಲ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ