ಆ್ಯಪ್ನಗರ

ಗುತ್ತಿಗೆದಾರರ ಋುಣ ತೀರಿಸಲು ಬಿಬಿಎಂಪಿ ಟೆಂಡರ್‌: ಶೆಟ್ಟರ್‌ ಆರೋಪ

ಹುಬ್ಬಳ್ಳಿ : ಬಿಬಿಎಂಪಿಯೂ ನವಬೆಂಗಳೂರು ಯೋಜನೆಗೆ ಟೆಂಡರ್‌ ಕರೆಯದೆ 4200 ಮೊತ್ತದ ಕಾಮಗಾರಿಯನ್ನು ಕೆಆರ್‌ಡಿಎಲ್‌ಗೆ ನೀಡಲು ಕೈಗೊಂಡಿರುವ ನಿರ್ಧಾರ ಭ್ರಷ್ಟಾಚಾರಕ್ಕೆ ಇಂಬು ನೀಡುತ್ತದೆ. ಬಿಬಿಎಂಪಿ ಸಭೆಯಲ್ಲಿ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಅದಕ್ಕೆ ಮೈತ್ರಿ ಪಕ್ಷ ಗಳು ಸ್ಪಂದಿಸಿಲ್ಲ ಎಂದು ಮಾಜಿ ಸಿಎಂ ಜಗದೀಶ ಆರೋಪಿಸಿದರು.

Vijaya Karnataka 29 Apr 2019, 5:00 am
ಹುಬ್ಬಳ್ಳಿ : ಬಿಬಿಎಂಪಿಯೂ ನವಬೆಂಗಳೂರು ಯೋಜನೆಗೆ ಟೆಂಡರ್‌ ಕರೆಯದೆ 4200 ಮೊತ್ತದ ಕಾಮಗಾರಿಯನ್ನು ಕೆಆರ್‌ಡಿಎಲ್‌ಗೆ ನೀಡಲು ಕೈಗೊಂಡಿರುವ ನಿರ್ಧಾರ ಭ್ರಷ್ಟಾಚಾರಕ್ಕೆ ಇಂಬು ನೀಡುತ್ತದೆ. ಬಿಬಿಎಂಪಿ ಸಭೆಯಲ್ಲಿ ಬಿಜೆಪಿ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿದರೂ ಅದಕ್ಕೆ ಮೈತ್ರಿ ಪಕ್ಷ ಗಳು ಸ್ಪಂದಿಸಿಲ್ಲ ಎಂದು ಮಾಜಿ ಸಿಎಂ ಜಗದೀಶ ಆರೋಪಿಸಿದರು.
Vijaya Karnataka Web bbmp tender to pay contractor contract shettar charges
ಗುತ್ತಿಗೆದಾರರ ಋುಣ ತೀರಿಸಲು ಬಿಬಿಎಂಪಿ ಟೆಂಡರ್‌: ಶೆಟ್ಟರ್‌ ಆರೋಪ


ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ''ಒಟ್ಟು 4200 ಕೋಟಿ ರೂ.ಮೊತ್ತದ ಯೋಜನೆಯನ್ನು ಬಿಬಿಎಂಪಿ ಏಕಾಏಕಿ ಇಷ್ಟೊಂದು ತರಾತುರಿಯಲ್ಲಿ ಕೈಗೊಳ್ಳುವ ಉದ್ದೇಶವಾದರೂ ಏನಿತ್ತು?'' ಎಂದು ಶೆಟ್ಟರ್‌ ಪ್ರಶ್ನಿಸಿದರು.

''ಲೋಕಸಭಾ ಚುನಾವಣೆಯಲ್ಲಿ ಆಗಿರುವ ಖರ್ಚು ವೆಚ್ಚವನ್ನು ಸರಿದೂಗಿಸುವ ಉದ್ದೇಶದಿಂದ ಸರಕಾರ ಈ ನಿರ್ಧಾರ ಕೈಗೊಂಡಿದೆ. ಈ ಕುರಿತು ಚುನಾವಣಾ ಆಯೋಗಕ್ಕೆ ಬಿಜೆಪಿ ಈಗಾಗಲೇ ದೂರು ನೀಡಿದೆ. ಇದನ್ನು ಕೂಡಲೇ ಕೈಬಿಡಬೇಕು. ಇಲ್ಲದಿದ್ದಲ್ಲಿ ಬಿಜೆಪಿ ಉಗ್ರ ಪ್ರತಿಭಟನೆ ನಡೆಸುತ್ತದೆ'' ಎಂದೂ ಎಚ್ಚರಿಸಿದರು.

''ಕೆಆರ್‌ಡಿಎಲ್‌ನ ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶ ಎಂಬುವವರು ಮಾಜಿ ಪ್ರಧಾನಿ ದೇವೇಗೌಡ ಹಾಗೂ ಸಿಎಂ ಕುಮಾರಸ್ವಾಮಿ ಅವರ ಕುಟುಂಬಕ್ಕೆ ಅತ್ಯಂತ ಹತ್ತಿರದವರಾಗಿದ್ದಾರೆ. ಹೀಗಾಗಿ ಮೈತ್ರಿ ಸರಕಾರ ಇಂತಹ ವಾಮ ಮಾರ್ಗಕ್ಕೆ ಮುಂದಾಗಿದೆ. ಲೋಕಸಭೆ ಚುನಾವಣೆಯಲ್ಲಿ ಗುತ್ತಿಗೆದಾರರಿಂದ ಪಡೆದಿರುವ ಹಣಕ್ಕೆ ಋುಣ ತೀರಿಸಲು ಮೈತ್ರಿ ಸರಕಾರ ಈ ರೀತಿ ಮಾಡುತ್ತಿದೆ'' ಎಂದು ಆಕ್ರೋಶ ವ್ಯಕ್ತಪಡಿಸಿದರು.

''ಎರಡು ಕೋಟಿ ರೂ.ಗಿಂತ ಹೆಚ್ಚಿನ ವೆಚ್ಚದ ಕಾಮಗಾರಿಗಳಿಗೆ ಟೆಂಡರ್‌ ಕರೆಯಬೇಕೆಂಬ ನಿಯಮವಿದೆ. ಆದರೆ, ಈ ಎಲ್ಲ ನಿಯಮಗಳನ್ನು ಬಿಬಿಎಂಪಿ ಗಾಳಿಗೆ ತೂರಿದೆ. ಲೋಕಸಭೆ ಚುನಾವಣೆ ಫಲಿತಾಂಶ ಮುಗಿದ ಮೇಲೆ ಸರಕಾರ ಬೀಳುತ್ತದೆ ಎಂಬ ಭಯ ಶುರುವಾಗಿದೆ. ಆದ್ದರಿಂದ ಇಷ್ಟು ದೊಡ್ಡ ಮೊತ್ತದ ಕಾಮಗಾರಿಗೆ ತರಾತುರಿಯಲ್ಲಿ ಅನುಮತಿ ನೀಡಲಾಗಿದೆ'' ಎಂದು ಆರೋಪಿಸಿದರು.

ಸಂಸದ ಪ್ರಹ್ಲಾದ ಜೋಶಿ, ವಿಧಾನ ಪರಿಷತ್‌ ಸದಸ್ಯ ಪ್ರದೀಪ ಶೆಟ್ಟರ, ನಾಗೇಶ ಕಲಬುರ್ಗಿ ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ