ಆ್ಯಪ್ನಗರ

ಸ್ವಚ್ಛತೆಯೇ ಸೇವೆಯಾಗಲಿ: ಡಾ. ಪುರೋಹಿತ

ಧಾರವಾಡ : ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರು ಭಾಗಿಗಳಾಗಿ ದೇಶಕ್ಕೆ ಅಳಿಲು ಸೇವೆ ಮಾಡಬೇಕಿದೆ ಎಂದು ಕೆ ಇ ಬೋರ್ಡ್‌ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಸುನಿತ ಪುರೋಹಿತ ತಿಳಿಸಿದರು.

Vijaya Karnataka 29 Nov 2018, 5:00 am
ಧಾರವಾಡ : ಸ್ವಚ್ಛತೆ ಕಾಪಾಡುವಲ್ಲಿ ಪ್ರತಿಯೊಬ್ಬರು ಭಾಗಿಗಳಾಗಿ ದೇಶಕ್ಕೆ ಅಳಿಲು ಸೇವೆ ಮಾಡಬೇಕಿದೆ ಎಂದು ಕೆ ಇ ಬೋರ್ಡ್‌ ಕಾಲೇಜು ಆಡಳಿತ ಮಂಡಳಿಯ ಕಾರ್ಯಾಧ್ಯಕ್ಷ ಡಾ. ಸುನಿತ ಪುರೋಹಿತ ತಿಳಿಸಿದರು.
Vijaya Karnataka Web be clean service dr purohit
ಸ್ವಚ್ಛತೆಯೇ ಸೇವೆಯಾಗಲಿ: ಡಾ. ಪುರೋಹಿತ


ಭಾರತ ಸರಕಾರದ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ, , ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಹುಬ್ಬಳ್ಳಿ-ಧಾರವಾಡ ಮಹಾನÜಗರ ಪಾಲಿಕೆ, ರಾಷ್ಟ್ರೀಯ ಸೇವಾ ಯೋಜನೆ ಘಟಕ, ಕೆ ಇ ಬೋರ್ಡಿನ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯ ಮತ್ತು ಪದವಿ ಪೂರ್ವ ಮಹಾವಿದ್ಯಾಲಯ, ಭಗೀರಥ ಸಂಸ್ಥೆ ಸಂಯುಕ್ತ್ತ ಆಶ್ರಯದಲ್ಲಿ ಕೆ.ಇ. ಬೋರ್ಡಿನ ಪ್ರಥಮ ದರ್ಜೆ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿದ್ದ ಸ್ವಚ್ಛ ಭಾರತ ಮಿಷÜನ್‌ (ನಗರ) ಕುರಿತು ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಸಾರ್ವಜನಿಕರು ಸ್ವಪ್ರೇರಣೆಯಿಂದ ಸ್ವಚ್ಛತೆಯಲ್ಲಿ ತೊಡಗಿಕೊಂಡು ಸ್ವಚ್ಛ ಭಾರತ ಮಿಷÜನ್‌ ಯಶಸ್ವಿಯಾಗಲು ಸಹಕರಿಸಬೇಕು ಎಂದು ಮನವಿ ಮಾಡಿದರು.

ಕೇಂದ್ರ ವಾರ್ತಾ ಮತ್ತು ಪ್ರಸಾರ ಸಚಿವಾಲಯದ ಪ್ರಾದೇಶಿಕ ಕ್ಷೇತ್ರ ಜನಸಂಪರ್ಕ ಕಾರ್ಯಾಲಯ ನಿರ್ದೇಶಕರಾದ ನತಾಶ ಎಸ್‌ ಡಿಸೋಜಾ ಮಾತನಾಡಿ, ಶಾಲಾ ಮತ್ತು ಕಾಲೇಜಿನ ವಿದ್ಯಾರ್ಥಿಗಳು ಪಾಠದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ಭಾಗವಹಿಸಬೇಕು. ತಮ್ಮ ಸುತ್ತಮುತ್ತಿನ ಪ್ರದೇಶಗಳಲ್ಲಿ ಸ್ವಚ್ಛತೆಯನ್ನು ಕಾಪಾಡುವಲ್ಲಿ ಪ್ರಮುಖ ಮಾತ್ರವಹಿಸಬೇಕು. ಸಾರ್ವಜನಿಕ ಸ್ಥಳಗಳಲ್ಲಿ ಸ್ವಪ್ರರೇರಣೆಯಿಂದ ಸ್ವಚ್ಛತೆಯನ್ನು ಕೈಗೊಂಡಲ್ಲಿ ಇತರೆ ಸಾಮಾನ್ಯ ಮಂದಿಯೂ ನಿಮ್ಮನ್ನು ಇಂಬಾಲಿಸುವುದರಲ್ಲಿ ಅನುಮಾನವಿಲ್ಲ ಎಂದ ಅವರು, ಸ್ವಚ್ಛತೆ ಕುರಿತು ಪ್ರತಿಜ್ಞಾವಿಧಿ ಬೋಧಿಸಿದರು.

ಪಾಲಿಕೆ ಪರಿಸರ ಅಭಿಯಂತರ ಸಂತೋಷ್‌ ಯರಂಗಳಿ ಮಾತಾನಾಡಿದರು.

ಭಗೀರಥ ಸಂಸ್ಥೆ, ಧಾರವಾಡದ ಮುಖ್ಯಸ್ಥೆ ನಿವೇದಿತಾ ದೀಕ್ಷಿತ್‌ ಪ್ರಾತ್ಯಕ್ಷಿಕೆ ಮೂಲಕ ಹಸಿ ಮತ್ತು ಒಣ ಕಸ ವಿಂಗಡನೆಯನ್ನು ವಿದ್ಯಾರ್ಥಿಗಳಿಗೆ ತೋರಿಸಿಕೊಟ್ಟರು.

ಕ್ಷೇತ್ರ ಪ್ರಚಾರ ಅಧಿಕಾರಿ ಜಿ ತುಕಾರಾಮ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು.ಹುಬ್ಬಳ್ಳಿ-ಧಾರವಾಡ ಮಹಾನÜಗರ ಪಾಲಿಕೆಯ ಸಹಾಯಕ ಆಯುಕ್ತ ಕೆ.ಎಸ್‌.ಹಂಚಿನಮನಿ ಮಾತನಾಡಿದರು.

ಇದಕ್ಕೂ ಮುನ್ನ ಕಾಲೇಜಿನ ಆವರಣವನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಲಾಯಿತು. ಎನ್‌ ಎಸ್‌ ಎಸ್‌ ಸ್ವಯಂ ಸೇವಕರಿಗೆ ಕಸದಿಂದ ರಸ ಶೀರ್ಷಿಕೆಯಡಿ ಮಾದರಿ ತಯಾರಿಕೆ ಹಾಗೂ ಚಿತ್ರಕಲೆ ಸ್ಪರ್ಧೆ ನಡೆಸಿ ಬಹುಮಾನ ವಿತರಿಸಲಾಯಿತು. ಜತೆಗೆ ವಿದ್ಯಾರ್ಥಿಗಳು ನಗರದಲ್ಲಿ ಸ್ವಚ್ಛತೆ ಕುರಿತು ಜಾಥಾ ನಡೆಸಿದರು. ಪ್ರೊ. ಮೋಹನ್‌ ಸಿದ್ಧಾಂತಿ ಅಧ್ಯಕ್ಷ ತೆ ವಹಿಸಿದ್ದರು. ಸಿ ಕೆ ಸುರೇಶ್‌ ಸ್ವಾಗತಿಸಿದರು. ಮುರುಳಿಧರ ಕಾರಬಾರಿ ನಿರೂಪಿಸಿದರು. ಈಶ್ವರ್‌ ಕರಾಟ್‌ ವಂದಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ