ಆ್ಯಪ್ನಗರ

ಪರಿಹಾರ ನಿಧಿಗೆ ಹಣ ನೀಡಿದ ಭಿಕ್ಷುಕಿಯರು

ಭಿಕ್ಷುಕಿಯರ ತಂಡವೊಂದು ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಮಳೆ ಸಂತ್ರಸ್ತರ ಪರಿಹಾರ ನಿಧಿಗೆ ಹಾಕಿದೆ.

Vijaya Karnataka 23 Aug 2018, 2:12 pm
ಧಾರವಾಡ: ಭಿಕ್ಷುಕಿಯರ ತಂಡವೊಂದು ಭಿಕ್ಷೆ ಬೇಡಿ ಸಂಗ್ರಹಿಸಿದ ಹಣವನ್ನು ಮಳೆ ಸಂತ್ರಸ್ತರ ಪರಿಹಾರ ನಿಧಿಗೆ ಹಾಕಿದೆ.
Vijaya Karnataka Web dharwad


ಮಳೆ ಸಂತ್ರಸ್ತರಿಗಾಗಿ ಎಸ್‌ಯುಸಿಐ (ಕಮ್ಯೂನಿಸ್ಟ್‌) ಪಕ್ಷ ದ ವತಿಯಿಂದ ಬುಧವಾರ ಪರಿಹಾರ ನಿಧಿ ಸಂಗ್ರಹ ಮಾಡುತ್ತಿದ್ದ ಸಂದರ್ಭದಲ್ಲಿ ಭಿಕ್ಷುಕಿಯರು ಹಣ ನೀಡಿದ್ದಾರೆ.

ಬಕ್ರೀದ್‌ ಹಬ್ಬದ ಪ್ರಯುಕ್ತ ಭಿಕ್ಷುಕಿಯರು ತಾವು ಬೇಡಿದ ಭಿಕ್ಷೆ ನೀಡಿದ್ದಲ್ಲದೇ, ಅಳಿದುಳಿದ ಚಿಲ್ಲರೆಯನ್ನು ತಮ್ಮ ಮಕ್ಕಳ ಕೈಯಿಂದ ಕಾರ್ರಕರ್ತರ ಬಳಿಯಿದ್ದ ಡಬ್ಬಿಗೆ ಹಾಕಿದರು. ನಿಧಿ ಸಂಗ್ರಹಣೆ ಕಾರ್ಯದಲ್ಲಿ ಹತ್ತಾರು ಜನ ಯುವಕ, ಯುವತಿಯರು ಸ್ವಯಂ ಪ್ರೇರಣೆಯಿಂದ ಭಾಗವಹಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ