ಆ್ಯಪ್ನಗರ

ಬಿತ್ತನೆ ಬೀಜ ವಿತರಣೆ ಆರಂಭ

ಕುಂದಗೋಳ : ಮುಂಗಾರು ಹಂಗಾಮಿಗೆ ರೈತರಿಗೆ ಬೇಕಾದ ಭಿತ್ತನೆ ಬೀಜಗಳು ಹಂತಹಂತವಾಗಿ ಬರಲಿದ್ದು, ಇಂದು ಅವುಗಳನ್ನು ಆನ್‌ಲೈನ್‌ ಮೂಲಕ ವಿತರಿಸಲಾಗುತ್ತಿದೆ ಎಂದು ಶಾಸಕಿ ಕೆ.ಸಿ.ಶಿವಳ್ಳಿ ಹೇಳಿದರು.

Vijaya Karnataka 29 May 2020, 5:00 am
ಕುಂದಗೋಳ : ಮುಂಗಾರು ಹಂಗಾಮಿಗೆ ರೈತರಿಗೆ ಬೇಕಾದ ಭಿತ್ತನೆ ಬೀಜಗಳು ಹಂತಹಂತವಾಗಿ ಬರಲಿದ್ದು, ಇಂದು ಅವುಗಳನ್ನು ಆನ್‌ಲೈನ್‌ ಮೂಲಕ ವಿತರಿಸಲಾಗುತ್ತಿದೆ ಎಂದು ಶಾಸಕಿ ಕೆ.ಸಿ.ಶಿವಳ್ಳಿ ಹೇಳಿದರು.
Vijaya Karnataka Web beginning of sowing seed distribution
ಬಿತ್ತನೆ ಬೀಜ ವಿತರಣೆ ಆರಂಭ


ಪಟ್ಟಣದ ರೈತ ಸಂಪರ್ಕ ಕೇಂದ್ರದಲ್ಲಿಸಂಗ್ರಹಿಸಿದ ಭಿತ್ತನೆ ಬೀಜಗಳನ್ನು ಮಂಗಳವಾರ ರೈತರಿಗೆ ವಿತರಿಸಿ ಅವರು ಮಾತನಾಡಿದರು.

ಭಿತ್ತನೆಗೆ ಬೇಕಾದ ಶೇಂಗಾ-125 ಕ್ವಿ, ಸೋಯಾ ಅವರೆ-252ಕ್ವಿ, ಗೋವಿನಜೋಳ-46ಕ್ವಿಂ, ಹೆಸರು-12ಕ್ವಿಂ, ಉದ್ದು-8.5ಕ್ವಿಂ ಹಾಗೂ ತೊಗರಿ-4.2ಕ್ವಿಂ ಸೇರಿದಂತೆ ಒಟ್ಟು 392ಕ್ವಿಂ ಇಂದಿನ ವರೆಗೆ ಬೀಜಗಳು ಸಂಗ್ರಹವಾಗಿವೆ. ಪ್ರತಿ ರೈತರಿಗೂ ಬೀಜಗಳನ್ನು ಸರಿಯಾಗಿ ತಲುಪುವಂತೆ ಗಮನ ಹರಿಸಲು ಸೂಚಿಸಿದ್ದೇನೆ. ಆ ನಿಟ್ಟಿನಲ್ಲಿಕೃಷಿ ಅಧಿಕಾರಿಗಳು ಸರಿಯಾದ ಜವಾಬ್ದಾರಿ ವಹಿಸಿಕೊಂಡು ಕಾರ್ಯ ನಿರ್ವಹಿಸಲಿದ್ದಾರೆ ಎಂದು ಹೇಳಿದರು.

ಕೃಷಿ ಅಧಿಕಾರಿ ಸದಾಶಿವ ಮಾತನಾಡಿದರು. ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಎ.ಎಂ.ಕಟಗಿ, ಎಪಿಎಂಸಿ ಅಧ್ಯಕ್ಷ ಬೀರಪ್ಪ ಕುರುಬರ, ಸುರೇಶ ಗಂಗಾಯಿ, ಬಸುರಾಜ ತಳವಾರ, ಬಸವರಾಜ ಶಿರಸಂಗಿ, ಬಾಬಾಜಾನ ಮಿಶ್ರಿಕೋಟಿ, ಅಂಬಿಕಾ ಮತ್ತಿತರರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ